<p><strong>ನವದೆಹಲಿ:</strong> ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಾಭಿಮಾನಕ್ಕೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ಗಾಯಕ ಸೋನು ನಿಗಮ್, ಕಾರ್ಯಕ್ರಮದ ವೇಳೆ ನಾಲ್ಕೈದು ಯುವಕರು ಕನ್ನಡ ಹಾಡು ಹಾಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. </p><p>ಕನ್ನಡಾಭಿಮಾನವನ್ನು ಪಹಲ್ಗಾಮ್ ಘಟನೆಗೆ ಹೋಲಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. </p><p>ಕೆಲವರು ಮಾಡಿದ ತಪ್ಪಿಗಾಗಿ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ. </p><p>'ಗೂಂಡಾ ತರಹನೇ ವರ್ತಿಸುತ್ತಿದ್ದ ನಾಲ್ಕೈದು ಮಂದಿ 'ಕನ್ನಡ-ಕನ್ನಡ' ಎಂದು ಆಕ್ರೋಶಭರಿತರಾಗಿ ಕೂಗುತ್ತಿದ್ದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ ಎಂದು ಅಲ್ಲಿದ್ದ ಯುವತಿಯರು ಹೇಳುತ್ತಿದ್ದರು. ಪ್ರೇಕ್ಷಕರಾಗಿ ಬೆದರಿಕೆ ಹಾಕಲು ಅವಕಾಶ ನೀಡಬಾರದು. ಕೆರಳಿಸುವವವನ್ನು ತಕ್ಷಣವೇ ತಡೆಯುವುದು ಮುಖ್ಯವಾಗಿತ್ತು' ಎಂದು ಹೇಳಿದ್ದಾರೆ. </p><p>'ಪ್ರೀತಿಯ ಜಗತ್ತಿನಲ್ಲಿ ಯಾರಾದರೂ ದ್ವೇಷದ ಬೀಜಗಳನ್ನು ಬಿತ್ತುವುದಾದರೆ ಅದನ್ನು ತಕ್ಷಣವೇ ತಡೆಗಟ್ಟಬೇಕು. ಕನ್ನಡಿಗರು ಒಳ್ಳೆಯ ಜನರು. ಹಾಗಾಗಿ ಈ ವಿಷಯವನ್ನು ದಯವಿಟ್ಟು ಸಾಮಾನ್ಯೀಕರಿಸಬೇಡಿ. ಮೊದಲ ಹಾಡನ್ನು ಮುಗಿಸಿದ ಕೂಡಲೇ ನಾಲ್ಕೈದು ಮಂದಿ ಕೋಪದಿಂದಲೇ ನೋಡುತ್ತಿದ್ದರು. ಅವರು ಬೇಡಿಕೆ ಇಡುತ್ತಿರಲಿಲ್ಲ. ಬದಲಾಗಿ ಬೆದರಿಕೆ ಹಾಕುತ್ತಿದ್ದರು. ನೀವು ಬೇಕಿದ್ದರೆ ಅಲ್ಲಿದ್ದ ಜನರನ್ನು ಕೇಳಬಹುದು' ಎಂದು ಹೇಳಿದ್ದಾರೆ. </p> <p>ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿ ಗಾಯಕ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.</p>.ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆ ಹೋಲಿಕೆ ಪ್ರಕರಣ: ಸೋನು ನಿಗಮ್ ವಿರುದ್ಧ FIR.ಕನ್ನಡಿಗರಿಗೆ ಅವಮಾನ ಆರೋಪ: ಸೋನು ನಿಗಮ್ ವಿರುದ್ಧ ಪ್ರತಿಭಟನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಾಭಿಮಾನಕ್ಕೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ಗಾಯಕ ಸೋನು ನಿಗಮ್, ಕಾರ್ಯಕ್ರಮದ ವೇಳೆ ನಾಲ್ಕೈದು ಯುವಕರು ಕನ್ನಡ ಹಾಡು ಹಾಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. </p><p>ಕನ್ನಡಾಭಿಮಾನವನ್ನು ಪಹಲ್ಗಾಮ್ ಘಟನೆಗೆ ಹೋಲಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. </p><p>ಕೆಲವರು ಮಾಡಿದ ತಪ್ಪಿಗಾಗಿ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ. </p><p>'ಗೂಂಡಾ ತರಹನೇ ವರ್ತಿಸುತ್ತಿದ್ದ ನಾಲ್ಕೈದು ಮಂದಿ 'ಕನ್ನಡ-ಕನ್ನಡ' ಎಂದು ಆಕ್ರೋಶಭರಿತರಾಗಿ ಕೂಗುತ್ತಿದ್ದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ ಎಂದು ಅಲ್ಲಿದ್ದ ಯುವತಿಯರು ಹೇಳುತ್ತಿದ್ದರು. ಪ್ರೇಕ್ಷಕರಾಗಿ ಬೆದರಿಕೆ ಹಾಕಲು ಅವಕಾಶ ನೀಡಬಾರದು. ಕೆರಳಿಸುವವವನ್ನು ತಕ್ಷಣವೇ ತಡೆಯುವುದು ಮುಖ್ಯವಾಗಿತ್ತು' ಎಂದು ಹೇಳಿದ್ದಾರೆ. </p><p>'ಪ್ರೀತಿಯ ಜಗತ್ತಿನಲ್ಲಿ ಯಾರಾದರೂ ದ್ವೇಷದ ಬೀಜಗಳನ್ನು ಬಿತ್ತುವುದಾದರೆ ಅದನ್ನು ತಕ್ಷಣವೇ ತಡೆಗಟ್ಟಬೇಕು. ಕನ್ನಡಿಗರು ಒಳ್ಳೆಯ ಜನರು. ಹಾಗಾಗಿ ಈ ವಿಷಯವನ್ನು ದಯವಿಟ್ಟು ಸಾಮಾನ್ಯೀಕರಿಸಬೇಡಿ. ಮೊದಲ ಹಾಡನ್ನು ಮುಗಿಸಿದ ಕೂಡಲೇ ನಾಲ್ಕೈದು ಮಂದಿ ಕೋಪದಿಂದಲೇ ನೋಡುತ್ತಿದ್ದರು. ಅವರು ಬೇಡಿಕೆ ಇಡುತ್ತಿರಲಿಲ್ಲ. ಬದಲಾಗಿ ಬೆದರಿಕೆ ಹಾಕುತ್ತಿದ್ದರು. ನೀವು ಬೇಕಿದ್ದರೆ ಅಲ್ಲಿದ್ದ ಜನರನ್ನು ಕೇಳಬಹುದು' ಎಂದು ಹೇಳಿದ್ದಾರೆ. </p> <p>ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿ ಗಾಯಕ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.</p>.ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆ ಹೋಲಿಕೆ ಪ್ರಕರಣ: ಸೋನು ನಿಗಮ್ ವಿರುದ್ಧ FIR.ಕನ್ನಡಿಗರಿಗೆ ಅವಮಾನ ಆರೋಪ: ಸೋನು ನಿಗಮ್ ವಿರುದ್ಧ ಪ್ರತಿಭಟನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>