ದೆಹಲಿ ವಿಧಾನಸಭಾ ಚುನಾವಣೆಯ ಸಮೀಕ್ಷೆ
ಬೆಳಿಗ್ಗೆ 8.30ರ ವೇಳೆಗೆ ಟ್ರೆಂಡ್
ನಾವು ಮನುಷ್ಯರು. ನಮಗೂ ಫಲಿತಾಂಶದ ಬಗ್ಗೆ ಆತಂಕವಿದೆ. ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಾವು ಮತ್ತೆ ಸರ್ಕಾರ ರಚಿಸುತ್ತೇವೆ ಎಂಬ ನಂಬಿಕೆ ನಮಗಿದೆ. ಜನರು ಪ್ರಾಮಾಣಿಕತೆ ಮತ್ತು ದುಡಿಯುವ ರಾಜಕಾರಣಕ್ಕೆ ಮತ ಹಾಕಿದ್ದಾರೆ. ನಾವು ಕೆಲವೇ ಗಂಟೆಗಳಲ್ಲಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದ್ದೇವೆ.– ಮನೀಷ್ ಸಿಸೋಡಿಯಾ, ಎಎಪಿ ಅಭ್ಯರ್ಥಿ
ನಾನು ಕಲ್ಕಾಜಿ ಮತ್ತು ದೆಹಲಿಯ ಜನರಿಗೆ ಧನ್ಯವಾದ ಹೇಳುತ್ತೇನೆ. ನನ್ನ ತೀರ್ಪು ಜನ ಬರೆದಿದ್ದಾರೆ. ಫಲಿತಾಂಶ ಏನೇ ಬಂದರೂ ಚುನಾವಣೆಯಲ್ಲಿ ಎತ್ತಿದ ಸಮಸ್ಯೆಗಳ ಬಗ್ಗೆ ಹೋರಾಟ ಮುಂದುವರಿಸುತ್ತೇವೆ. ನಾನು ನನ್ನ ಜೀವನದಲ್ಲಿ ನೋಡಿದ ಅತಿ ದೊಡ್ಡ ಸುಳ್ಳುಗಾರ ಕೇಜ್ರಿವಾಲ್. ನವದೆಹಲಿಯಲ್ಲಿ ಬೀಳುವ ಎಎಪಿಯ ಮೊದಲ 'ವಿಕೆಟ್' ಕೇಜ್ರಿವಾಲ್ರದ್ದು. ಅವರು ಸೋತರೆ, ಅತಿಶಿ ಮತ್ತು ಮನೀಶ್ ಸಿಸೋಡಿಯಾ ಕೂಡ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟ.ಅಲ್ಕಾ ಲಂಬಾ, ಕಾಂಗ್ರೆಸ್ ಅಭ್ಯರ್ಥಿ
ಆರಂಭಿಕ ಟ್ರೆಂಡ್ಗಳು ನಮ್ಮ ನಿರೀಕ್ಷೆಯಂತಿವೆ. ಆದರೆ ನಾವು ಫಲಿತಾಂಶಕ್ಕಾಗಿ ಕಾಯುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಈ ಗೆಲುವು ನಮ್ಮ ಉನ್ನತ ನಾಯಕತ್ವದ ಗೆಲುವಾಗಿದೆ. ನಾವು ದೆಹಲಿಯ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಿದ್ದೇವೆ. ಆದರೆ ಅರವಿಂದ್ ಕೇಜ್ರಿವಾಲ್ ಸಮಸ್ಯೆಗಳಿಂದ ವಿಮುಖರಾಗಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಯಾರು ಎನ್ನುವುದನ್ನು ಕೇಂದ್ರ ನಾಯಕತ್ವ ನಿರ್ಧರಿಸಲಿದೆ.ವೀರೇಂದ್ರ ಸಚ್ದೇವ, ದೆಹಲಿ ಬಿಜೆಪಿ ಅಧ್ಯಕ್ಷ
ನಾವು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಅಂತಿಮ ಫಲಿತಾಂಶ ಈಗಿನ ಟ್ರೆಂಡ್ಗಿಂತ ಉತ್ತಮವಾಗಿರಲಿದೆ. ಇದು ಪ್ರಧಾನಿ ಮೋದಿಯವರ ಭರವಸೆಗಳ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಇದು ನಮಗೆ ಸಕಾರಾತ್ಮಕ ಫಲಿತಾಂಶವಾಗಿದೆ.ಸುಧಾಂಶು ತ್ರಿವೇದಿ, ಬಿಜೆಪಿ ಸಂಸದ
ರಾಷ್ಟ್ರ ರಾಜಧಾನಿ ಹೇಗಿರಬೇಕು ಎನ್ನುವುದನ್ನು ಪ್ರಧಾನಿ ಮೋದಿಯವರ ಡಬಲ್ ಇಂಜಿನ್ ಸರ್ಕಾರ ತೋರಿಸಲಿದೆ. ಸದ್ಯ 42 ಸ್ಥಾನಗಳಲ್ಲಿ ಮುನ್ನಡೆಯನ್ನು ತೋರಿಸುತ್ತಿದ್ದು, ಅದು 50 ಕ್ಕೆ ಏರಿಕೆಯಾಗಲಿದೆ. ಉತ್ತಮ ಭವಿಷ್ಯವನ್ನು ಆಯ್ಕೆ ಮಾಡಿದ್ದಕ್ಕಾಗಿ ದೆಹಲಿಯ ಜನರನ್ನು ನಾನು ಅಭಿನಂದಿಸುತ್ತೇನೆ.ರವಿ ಕಿಶನ್, ಬಿಜೆಪಿ ಸಂಸದ
ಟ್ರೆಂಡ್ಗಳಲ್ಲಿ ಬಿಜೆಪಿ ಮುಂದಿದೆ. ಆದರೆ ಫಲಿತಾಂಶಕ್ಕಾಗಿ ನಾವು ಕಾಯುತ್ತೇವೆ. ನಮ್ಮ ಫಲಿತಾಂಶ ಇದಕ್ಕಿಂಯ ಉತ್ತಮವಾಗಿರಲಲಿದೆ. ದೆಹಲಿಯ ಪ್ರತಿ ವಿಭಾಗದ ಜನ ಎಎಪಿಯಿಂದ ದೂರ ಸರಿದಿದ್ದಾರೆ. ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದಿಂದಾಗಿ ಎಎಪಿ ಬೆಂಬಲ ಕಳೆದುಕೊಂಡಿದೆ.ಮನೋಜ್ ತಿವಾರಿ, ಬಿಜೆಪಿ ಸಂಸದ
ದೆಹಲಿಯ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ನಾನು ದೆಹಲಿಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್ಗೆ ನೀತಿ, ಉದ್ದೇಶ ಅಥವಾ ನಾಯಕತ್ವ ಇರಲಿಲ್ಲ. ಈ ಮೂರಿಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ಸಿ.ಟಿ.ರವಿ, ಬಿಜೆಪಿ ನಾಯಕ
ಪಕ್ಷದ ಕಾರ್ಯಕರ್ತರು ಚೆನ್ನಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ಶ್ರಮಿಸಿದ್ದೇವೆ. ಜನರು ನಮ್ಮನ್ನು ಬೆಂಬಲಿಸಿದ್ದಾರೆ. ನಾನು 600 ಮತಗಳಿಂದ ಸೋತಿದ್ದೇನೆ. ನಾನು ಗೆದ್ದ ಅಭ್ಯರ್ಥಿಯನ್ನು ನಾನು ಅಭಿನಂದಿಸುತ್ತೇನೆ. ಅವರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ.ಮನೀಷ್ ಸಿಸೋಡಿಯಾ, ಜಂಗ್ಪುರ ಕ್ಷೇತ್ರದ ಎಎಪಿ ಅಭ್ಯರ್ಥಿ