<p><strong>ಮಂಡ್ಲ:</strong> ಮಧ್ಯ ಪ್ರದೇಶದ ಮಂಡ್ಲ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಎನ್ಕೌಂಟರ್ಗೆ ಬಲಿಯಾದ ವ್ಯಕ್ತಿ ಮಾವೋವಾದಿ ಅಲ್ಲ, ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಅಮಾಯಕ ವ್ಯಕ್ತಿಯನ್ನು ಕೊಲ್ಲಲಾಗಿದ್ದು, ಉನ್ನತ ಮಟ್ಟದ ಹಾಗೂ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.</p>.ನಕ್ಸಲ್ ಮುಕ್ತ ಕರ್ನಾಟಕ, ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ.<p>ಅತಿ ಹಿಂದುಳಿದ ಬುಡಕಟ್ಟು ಜನಾಂಗ ಬೈಗಾ ಸಮುದಾಯಕ್ಕೆ ಸೇರಿದ ಸಿಂಗ್ ಪಾರ್ಥ (38) ಎಂಬವರು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಾವಿಗೀಡಾದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಮಾರ್ಚ್ 9 ರಂದು ಎನ್ಕೌಂಟರ್ ನಡೆದಿತ್ತು. ಸಿಂಗ್ ಪಾರ್ಥ ಅವರ ಗುರುತು ಮಾರ್ಚ್ 13ರಂದು ಪತ್ತೆಯಾಗಿತ್ತು.</p><p>ಪಾರ್ಥ ಅವರು ಜಿಲ್ಲೆಯ ಖತಿಯಾ ಪ್ರದೇಶದ ದಟ್ಟಾರಣ್ಯದಲ್ಲಿ ನಕ್ಸಲಿಯರ ಜೊತೆಗಿದ್ದರು ಎಂದು ಬಾಲಾಘಾಟ್ ವಲಯದ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಕುಮಾರ್ ತಿಳಿಸಿದ್ದಾರೆ.</p>.ನಕ್ಸಲ್ ನಾಡಿನಲ್ಲಿ ANF ಇಲ್ಲದೆ ನಿರಾಳ: ಆರಂಭ– ಅಂತ್ಯಕ್ಕೆ ಸಾಕ್ಷಿಯಾದ ಹಾಗಲಗಂಚಿ.<p>‘ಅವರು ಮಾವೋವಾದಿಗಳೊಂದಿಗೆ ಇರಲು ಹೇಗೆ ಸಾಧ್ಯ? ಇದು ತನಿಖೆ ಮಾಡಬೇಕಾದ ವಿಷಯ. ನಕ್ಸಲರು ಬುಡಕಟ್ಟು ಜನರೊಂದಿಗೆ ಸಂಚರಿಸುತ್ತಾರೆ. ಅವರಿಗೆ ನಕ್ಸಲರೊಂದಿಗೆ ನಂಟು ಇದೆಯೋ ಇಲ್ಲವೋ ಎಂದು ತನಿಖೆಯ ಬಳಿಕವೇ ಗೊತ್ತಾಗಬೇಕಿದೆ’ ಎಂದು ಕುಮಾರ್ ಹೇಳಿದ್ದಾರೆ.</p><p>‘ಅವರು ಮಾವೋವಾದಿ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಅವರು ಲಾಸರ ತೋಲ ಗ್ರಾಮದ ನಿವಾಸಿ. ಎನ್ಕೌಂಟರ್ ಬಳಿಕ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.ಛತ್ತೀಸಗಢ | ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯ.<p>ಏತನ್ಮಧ್ಯೆ, ಬುಡಕಟ್ಟು ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯ ಬಿಚಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ನಾರಾಯಣ್ ಸಿಂಗ್ ಪಟ್ಟಾ ಅವರು ಶನಿವಾರ ಪಾರ್ಥ ಅವರ ಗ್ರಾಮಕ್ಕೆ ತೆರಳಿ, ಮಕ್ಕಳು ಮತ್ತು ಇತರ ನಿವಾಸಿಗಳನ್ನು ಭೇಟಿಯಾಗಿದ್ದಾರೆ.</p><p>‘ನಾನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಲ್ಲಿದ್ದೆ. ಆದರೆ ಪಾರ್ಥ ಅವರ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಭೇಟಿಯಾಗಲು ಪೊಲೀಸರು ಬಿಡಲಿಲ್ಲ. ಅವರು ಪೊಲೀಸ್ ಠಾಣೆಯಲ್ಲಿ ಇರುವುದಾಗಿ ನನಗೆ ತಿಳಿಸಿದರು’ ಎಂದು ಅವರು ಹೇಳಿದ್ದಾರೆ.</p>.ಛತ್ತೀಸಗಢದಲ್ಲಿ ಐಇಡಿ ಸ್ಫೋಟ | ಇಬ್ಬರು ಯೋಧರಿಗೆ ಗಾಯ: ಓರ್ವ ನಕ್ಸಲ್ ಹತ.<p>ಮೃತ ಪಾರ್ಥ ಐದು ಮಕ್ಕಳ ತಂದೆ. ಅವರು ಅಮಾಯಕ ವ್ಯಕ್ತಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪಟ್ಟಾ ಹೇಳಿದ್ದಾರೆ. </p><p>ಮಾವೋವಾದಿಗಳು ಯಾರೆಂದು ಪಾರ್ಥಗೆ ತಿಳಿದಿಲ್ಲ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಗಿಳಿಗಳನ್ನು ಹಿಡಿಯಲು ಕಾಡಿಗೆ ಹೋಗುತ್ತಿದ್ದರು ಎಂದು ನನಗೆ ಗೊತ್ತಾಗಿದೆ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p> .ರಾಹುಲ್ ಗಾಂಧಿ 'ನಗರ ನಕ್ಸಲ್', ಕೇಜ್ರಿವಾಲ್ಗಿಂತ ದೊಡ್ಡ ಅರಾಜಕತಾವಾದಿ: ಅನುರಾಗ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಲ:</strong> ಮಧ್ಯ ಪ್ರದೇಶದ ಮಂಡ್ಲ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಎನ್ಕೌಂಟರ್ಗೆ ಬಲಿಯಾದ ವ್ಯಕ್ತಿ ಮಾವೋವಾದಿ ಅಲ್ಲ, ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಅಮಾಯಕ ವ್ಯಕ್ತಿಯನ್ನು ಕೊಲ್ಲಲಾಗಿದ್ದು, ಉನ್ನತ ಮಟ್ಟದ ಹಾಗೂ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.</p>.ನಕ್ಸಲ್ ಮುಕ್ತ ಕರ್ನಾಟಕ, ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ.<p>ಅತಿ ಹಿಂದುಳಿದ ಬುಡಕಟ್ಟು ಜನಾಂಗ ಬೈಗಾ ಸಮುದಾಯಕ್ಕೆ ಸೇರಿದ ಸಿಂಗ್ ಪಾರ್ಥ (38) ಎಂಬವರು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಾವಿಗೀಡಾದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಮಾರ್ಚ್ 9 ರಂದು ಎನ್ಕೌಂಟರ್ ನಡೆದಿತ್ತು. ಸಿಂಗ್ ಪಾರ್ಥ ಅವರ ಗುರುತು ಮಾರ್ಚ್ 13ರಂದು ಪತ್ತೆಯಾಗಿತ್ತು.</p><p>ಪಾರ್ಥ ಅವರು ಜಿಲ್ಲೆಯ ಖತಿಯಾ ಪ್ರದೇಶದ ದಟ್ಟಾರಣ್ಯದಲ್ಲಿ ನಕ್ಸಲಿಯರ ಜೊತೆಗಿದ್ದರು ಎಂದು ಬಾಲಾಘಾಟ್ ವಲಯದ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಕುಮಾರ್ ತಿಳಿಸಿದ್ದಾರೆ.</p>.ನಕ್ಸಲ್ ನಾಡಿನಲ್ಲಿ ANF ಇಲ್ಲದೆ ನಿರಾಳ: ಆರಂಭ– ಅಂತ್ಯಕ್ಕೆ ಸಾಕ್ಷಿಯಾದ ಹಾಗಲಗಂಚಿ.<p>‘ಅವರು ಮಾವೋವಾದಿಗಳೊಂದಿಗೆ ಇರಲು ಹೇಗೆ ಸಾಧ್ಯ? ಇದು ತನಿಖೆ ಮಾಡಬೇಕಾದ ವಿಷಯ. ನಕ್ಸಲರು ಬುಡಕಟ್ಟು ಜನರೊಂದಿಗೆ ಸಂಚರಿಸುತ್ತಾರೆ. ಅವರಿಗೆ ನಕ್ಸಲರೊಂದಿಗೆ ನಂಟು ಇದೆಯೋ ಇಲ್ಲವೋ ಎಂದು ತನಿಖೆಯ ಬಳಿಕವೇ ಗೊತ್ತಾಗಬೇಕಿದೆ’ ಎಂದು ಕುಮಾರ್ ಹೇಳಿದ್ದಾರೆ.</p><p>‘ಅವರು ಮಾವೋವಾದಿ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಅವರು ಲಾಸರ ತೋಲ ಗ್ರಾಮದ ನಿವಾಸಿ. ಎನ್ಕೌಂಟರ್ ಬಳಿಕ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.ಛತ್ತೀಸಗಢ | ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯ.<p>ಏತನ್ಮಧ್ಯೆ, ಬುಡಕಟ್ಟು ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯ ಬಿಚಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ನಾರಾಯಣ್ ಸಿಂಗ್ ಪಟ್ಟಾ ಅವರು ಶನಿವಾರ ಪಾರ್ಥ ಅವರ ಗ್ರಾಮಕ್ಕೆ ತೆರಳಿ, ಮಕ್ಕಳು ಮತ್ತು ಇತರ ನಿವಾಸಿಗಳನ್ನು ಭೇಟಿಯಾಗಿದ್ದಾರೆ.</p><p>‘ನಾನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಲ್ಲಿದ್ದೆ. ಆದರೆ ಪಾರ್ಥ ಅವರ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಭೇಟಿಯಾಗಲು ಪೊಲೀಸರು ಬಿಡಲಿಲ್ಲ. ಅವರು ಪೊಲೀಸ್ ಠಾಣೆಯಲ್ಲಿ ಇರುವುದಾಗಿ ನನಗೆ ತಿಳಿಸಿದರು’ ಎಂದು ಅವರು ಹೇಳಿದ್ದಾರೆ.</p>.ಛತ್ತೀಸಗಢದಲ್ಲಿ ಐಇಡಿ ಸ್ಫೋಟ | ಇಬ್ಬರು ಯೋಧರಿಗೆ ಗಾಯ: ಓರ್ವ ನಕ್ಸಲ್ ಹತ.<p>ಮೃತ ಪಾರ್ಥ ಐದು ಮಕ್ಕಳ ತಂದೆ. ಅವರು ಅಮಾಯಕ ವ್ಯಕ್ತಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪಟ್ಟಾ ಹೇಳಿದ್ದಾರೆ. </p><p>ಮಾವೋವಾದಿಗಳು ಯಾರೆಂದು ಪಾರ್ಥಗೆ ತಿಳಿದಿಲ್ಲ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಗಿಳಿಗಳನ್ನು ಹಿಡಿಯಲು ಕಾಡಿಗೆ ಹೋಗುತ್ತಿದ್ದರು ಎಂದು ನನಗೆ ಗೊತ್ತಾಗಿದೆ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p> .ರಾಹುಲ್ ಗಾಂಧಿ 'ನಗರ ನಕ್ಸಲ್', ಕೇಜ್ರಿವಾಲ್ಗಿಂತ ದೊಡ್ಡ ಅರಾಜಕತಾವಾದಿ: ಅನುರಾಗ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>