<p><strong>ನವದೆಹಲಿ:</strong> ಅಜ್ಮೀರ್ನ ಖಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ‘ಉರುಸ್’ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಅಲ್ಲದೆ ದರ್ಗಾಕ್ಕೆ ಹಾಸಲು ‘ಚಾದರ್’ ಅನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಹಸ್ತಾಂತರಿಸಿದ್ದಾರೆ.</p>.ಕಾಶಿ, ಮಥುರಾ ವಿವಾದ– ಕೋರ್ಟ್ ಹೊರಗೆ ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ.<p>ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚಾದರವನ್ನು ದರ್ಗಾಕ್ಕೆ ಅರ್ಪಿಸಲಾಗುತ್ತದೆ.</p><p>ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದೀಕ್ ಅವರಿಗೆ ಚಾದರ ನೀಡುವ ಚಿತ್ರವನ್ನು ಎಕ್ಸ್ನಲ್ಲಿ ಪ್ರಧಾನಿ ಹಂಚಿಕೊಂಡಿದ್ದಾರೆ.</p><p>‘ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಶುಭಾಶಯಗಳು. ಈ ಸಂದರ್ಭವು ಎಲ್ಲರ ಬಾಳಲ್ಲಿ ಶಾಂತಿ ಹಾಗೂ ಸುಖವನ್ನು ತರಲಿ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ. </p>.ಅಜ್ಮೀರ್: ಮೊಯಿನುದ್ದೀನ್ ಚಿಶ್ತಿ ದರ್ಗಾದಲ್ಲಿ ಶಿವನ ದೇಗುಲ ಇರುವ ಕುರಿತು ದಾವೆ. <p>ಇದು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ, ಸಾಮರಸ್ಯ ಮತ್ತು ಸಹಾನುಭೂತಿಯ ನಿರಂತರ ಸಂದೇಶದ ಬಗ್ಗೆ ಅವರಿಗಿರುವ ಆಳವಾದ ಗೌರವದ ಪ್ರತೀಕ ಎಂದು ಮೋದಿ ಬರೆದುಕೊಂಡಿದ್ದಾರೆ</p><p>ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಾವಿನ ವರ್ಷಾಚರಣೆಯ ಅಂಗವಾಗಿ ಅಜ್ಮೀರ್ನಲ್ಲಿ ಉರುಸ್ ನಡೆಸಲಾಗುತ್ತದೆ. ಕಳೆದ 10 ವರ್ಷದಿಂದಲೂ ಪ್ರಧಾನಿ ಮೋದಿ ಚಾದರ್ ಅರ್ಪಿಸುತ್ತಲೇ ಬಂದಿದ್ದಾರೆ.</p><p>ಇತ್ತೀಚೆಗಷ್ಟೇ ಹಿಂದೂ ಸಂಘನೆಯೊಂದು, ದರ್ಗಾದ ಅಡಿಯಲ್ಲಿ ದೇಗುಲವಿದೆ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ಅದಕ್ಕೆ ತಡೆ ಬಿದ್ದಿತ್ತು.</p>.ಅಜ್ಮೀರ್ ಬಳಿ ಹಳಿ ತಪ್ಪಿದ ಸಬರಮತಿ– ಆಗ್ರಾ ಸೂಪರ್ಫಾಸ್ಟ್ ರೈಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಜ್ಮೀರ್ನ ಖಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ‘ಉರುಸ್’ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಅಲ್ಲದೆ ದರ್ಗಾಕ್ಕೆ ಹಾಸಲು ‘ಚಾದರ್’ ಅನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಹಸ್ತಾಂತರಿಸಿದ್ದಾರೆ.</p>.ಕಾಶಿ, ಮಥುರಾ ವಿವಾದ– ಕೋರ್ಟ್ ಹೊರಗೆ ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ.<p>ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚಾದರವನ್ನು ದರ್ಗಾಕ್ಕೆ ಅರ್ಪಿಸಲಾಗುತ್ತದೆ.</p><p>ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದೀಕ್ ಅವರಿಗೆ ಚಾದರ ನೀಡುವ ಚಿತ್ರವನ್ನು ಎಕ್ಸ್ನಲ್ಲಿ ಪ್ರಧಾನಿ ಹಂಚಿಕೊಂಡಿದ್ದಾರೆ.</p><p>‘ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಶುಭಾಶಯಗಳು. ಈ ಸಂದರ್ಭವು ಎಲ್ಲರ ಬಾಳಲ್ಲಿ ಶಾಂತಿ ಹಾಗೂ ಸುಖವನ್ನು ತರಲಿ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ. </p>.ಅಜ್ಮೀರ್: ಮೊಯಿನುದ್ದೀನ್ ಚಿಶ್ತಿ ದರ್ಗಾದಲ್ಲಿ ಶಿವನ ದೇಗುಲ ಇರುವ ಕುರಿತು ದಾವೆ. <p>ಇದು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ, ಸಾಮರಸ್ಯ ಮತ್ತು ಸಹಾನುಭೂತಿಯ ನಿರಂತರ ಸಂದೇಶದ ಬಗ್ಗೆ ಅವರಿಗಿರುವ ಆಳವಾದ ಗೌರವದ ಪ್ರತೀಕ ಎಂದು ಮೋದಿ ಬರೆದುಕೊಂಡಿದ್ದಾರೆ</p><p>ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಾವಿನ ವರ್ಷಾಚರಣೆಯ ಅಂಗವಾಗಿ ಅಜ್ಮೀರ್ನಲ್ಲಿ ಉರುಸ್ ನಡೆಸಲಾಗುತ್ತದೆ. ಕಳೆದ 10 ವರ್ಷದಿಂದಲೂ ಪ್ರಧಾನಿ ಮೋದಿ ಚಾದರ್ ಅರ್ಪಿಸುತ್ತಲೇ ಬಂದಿದ್ದಾರೆ.</p><p>ಇತ್ತೀಚೆಗಷ್ಟೇ ಹಿಂದೂ ಸಂಘನೆಯೊಂದು, ದರ್ಗಾದ ಅಡಿಯಲ್ಲಿ ದೇಗುಲವಿದೆ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ಅದಕ್ಕೆ ತಡೆ ಬಿದ್ದಿತ್ತು.</p>.ಅಜ್ಮೀರ್ ಬಳಿ ಹಳಿ ತಪ್ಪಿದ ಸಬರಮತಿ– ಆಗ್ರಾ ಸೂಪರ್ಫಾಸ್ಟ್ ರೈಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>