ಜನರ, ಅಂದರೆ ವಿಧಾನ ಮಂಡಲದ ಆಯ್ಕೆಗೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಂಡರೆ ರಾಜ್ಯಪಾಲರು ತಾವು ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ. ರಾಜ್ಯಪಾಲರು ತಮ್ಮ ಹೊಣೆಯನ್ನು ಸ್ನೇಹಿತನಾಗಿ, ದಾರ್ಶನಿಕನಾಗಿ, ಮಾರ್ಗದರ್ಶಕನಾಗಿ ಯಾವುದೇ ರಾಗ–ದ್ವೇಷಗಳಿಲ್ಲದೆ ನಿರ್ವಹಿಸಬೇಕು. ರಾಜಕೀಯ ಲೆಕ್ಕಾಚಾರಗಳು ಅವರ ಮೇಲೆ ಪ್ರಭಾವ ಬೀರಬಾರದು.