<p>‘ಈ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಚರ್ಚೆಯಾಗಿದ್ರಲ್ಲಿ 50 ಪರ್ಸೆಂಟ್ ಜನರ ಕಷ್ಟಗಳ ಬಗ್ಗೆ ಚರ್ಚೆಯಾಗಿದ್ರೆ ನಮ್ ರಾಜ್ಯ ಎಷ್ಟೋ ಡೆವಲಪ್ ಆಗಿರ್ತಿತ್ತು’ ಪೇಪರ್ ಓದುತ್ತಾ ವಟಗುಡತೊಡಗಿದಳು ಹೆಂಡತಿ. </p>.<p>‘ಅದೇ ರೈತರು, ಯುವಕರ ಸಮಸ್ಯೆ ಬಗ್ಗೆ ಬರೆದಿದ್ರೆ ನೀನೇ ಪೇಜ್ ತಿರುಗಿಸಿ ಮುಂದೆ ಹೋಗಿರ್ತಿದ್ದೆ’ ಬ್ರೇಕ್ಫಾಸ್ಟ್ ಮೀಟಿಂಗ್ ಸಮರ್ಥಿಸಿಕೊಳ್ಳುವಂತೆ ಹೇಳಿದೆ. </p>.<p>‘ಇಂತಹ ಉಪಾಹಾರ ಸಭೆಯಿಂದ ಯಾರಿಗೇನು ಸಂದೇಶ ಕೊಡೋಕೆ ಹೊರಟಿದಾರೆ ಇವರು?’ </p>.<p>‘ಸಂದೇಶ ಸಿಗುತ್ತಿದೆ. ನಿನಗೆ ಗೊತ್ತಾಗ್ತಿಲ್ಲ ಅಷ್ಟೇ’.</p>.<p>‘ಏನ್ ಸಂದೇಶ ರೀ…’ </p>.<p>‘ಉಪ್ಪಿಟ್ಟಲ್ಲಿ ಖಾರ ಹೆಚ್ಚಾಗಿದ್ದರೆ ಒಂದು ಸಂದೇಶ, ಉಪ್ಪು ಕಡಿಮೆ ಇದ್ದರೆ ಮತ್ತೊಂದು ಸಂದೇಶ, ಇಡ್ಲಿ ಬೆಂದಿರಲಿಲ್ಲ ಅಂದ್ರೆ ಒಂದು ಮೆಸೇಜ್, ನಾಟಿಕೋಳಿ ಸಾರಲ್ಲಿ ಪೀಸ್ಗಳಿರಲಿಲ್ಲ ಅಂದ್ರೆ ಇನ್ನೊಂದು ಮೆಸೇಜ್’.</p>.<p>‘ಓಹ್, ಹೀಗೆಲ್ಲ ಇದೆಯಾ? ಫಸ್ಟ್ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಉಪ್ಪಿಟ್ಟಿಗೆ ಉಪ್ಪು ಕಡಿಮೆ ಇತ್ತಂತೆ. ಅಂದ್ರೆ ಏನರ್ಥ?’ </p>.<p>‘ಇನ್ನೊಂದು ಬಜೆಟ್ ಮಂಡಿಸಿದ ನಂತರ ಉಪ್ಪಿಟ್ಟಿಗೆ ಉಪ್ಪು ಹಾಕಲಾಗುವುದು ಎಂದರ್ಥ’.</p>.<p>‘ಎರಡನೇ ಮೀಟಿಂಗ್ನಲ್ಲಿ ನಾಟಿಕೋಳಿ ಸಾರು ಖಾರ ಆಗಿತ್ತಂತೆ. ಇದರರ್ಥ ಏನಿರಬಹುದು?’ </p>.<p>‘ಅಧಿಕಾರ ಬಿಟ್ಟು ಕೊಡದಿದ್ದರೆ ಮುಂದೆ ಎಲ್ಲ ಖಾರ ಖಾರವಾಗಿರುತ್ತೆ ಅಂತಿರಬಹುದು’.</p>.<p>‘ಉಪಾಹಾರ ಆದ ನಂತರ ಲೆಮನ್ ಟೀ ಕೊಟ್ಟಿದ್ರಂತೆ. ಆದರೆ, ಅದರಲ್ಲಿ ಹುಳಿಯೇ ಇರಲಿಲ್ವಂತೆ ರೀ’.</p>.<p>‘ಅಂದ್ರೆ, ಇಬ್ಬರ ನಡುವೆ ಹುಳಿ ಹಿಂಡೋರು ತುಂಬಾ ಜನ ಇದ್ದಾರೆ. ಮತ್ತೇಕೆ ಎಕ್ಸ್ಟ್ರಾ ಹುಳಿ ಅಂತ ಹಾಕಿಲ್ಲದೇ ಇರಬಹುದು’ ಎಂದು ನಕ್ಕೆ. </p>.<p>‘ರಾಜ್ಯಭಾರ ಮಾಡೋದಂದ್ರೆ ಕುಕರಿ ಶೋ ಅಂದ್ಕೊಂಡಿದಾರೇನ್ರೀ ಇವರು... ರೈತರು ರೋಸ್ಟ್ ಆಗ್ತಿದ್ದಾರೆ. ಎಲ್ಲದರ ಬೆಲೆ, ಟ್ಯಾಕ್ಸ್ ಜಾಸ್ತಿ ಆಗಿ ಜನ ಸೀದುಹೋಗ್ತಿದ್ದಾರೆ. ಇಂಥದ್ದರಲ್ಲಿ ವಿರೋಧಪಕ್ಷದವರೂ ಹೋರಾಟ ಮಾಡ್ತಿಲ್ವಲ್ರೀ’.</p>.<p>‘ಹನುಮ ಜಯಂತಿ ದಿನ ಕೋಳಿ ಸಾರು ಮಾಡಿದ್ದಾರೆ ಅಂತ ಹೋರಾಡ್ತಿಲ್ವ, ಇನ್ನೂ ಅವರು ಎಂತಹ ಹೋರಾಟ ಮಾಡಬೇಕು ನಿಂಗೆ’ ಎಂದೆ. ಹಣೆ ಚಚ್ಚಿಕೊಂಡು ಒಳಹೋದಳು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಈ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಚರ್ಚೆಯಾಗಿದ್ರಲ್ಲಿ 50 ಪರ್ಸೆಂಟ್ ಜನರ ಕಷ್ಟಗಳ ಬಗ್ಗೆ ಚರ್ಚೆಯಾಗಿದ್ರೆ ನಮ್ ರಾಜ್ಯ ಎಷ್ಟೋ ಡೆವಲಪ್ ಆಗಿರ್ತಿತ್ತು’ ಪೇಪರ್ ಓದುತ್ತಾ ವಟಗುಡತೊಡಗಿದಳು ಹೆಂಡತಿ. </p>.<p>‘ಅದೇ ರೈತರು, ಯುವಕರ ಸಮಸ್ಯೆ ಬಗ್ಗೆ ಬರೆದಿದ್ರೆ ನೀನೇ ಪೇಜ್ ತಿರುಗಿಸಿ ಮುಂದೆ ಹೋಗಿರ್ತಿದ್ದೆ’ ಬ್ರೇಕ್ಫಾಸ್ಟ್ ಮೀಟಿಂಗ್ ಸಮರ್ಥಿಸಿಕೊಳ್ಳುವಂತೆ ಹೇಳಿದೆ. </p>.<p>‘ಇಂತಹ ಉಪಾಹಾರ ಸಭೆಯಿಂದ ಯಾರಿಗೇನು ಸಂದೇಶ ಕೊಡೋಕೆ ಹೊರಟಿದಾರೆ ಇವರು?’ </p>.<p>‘ಸಂದೇಶ ಸಿಗುತ್ತಿದೆ. ನಿನಗೆ ಗೊತ್ತಾಗ್ತಿಲ್ಲ ಅಷ್ಟೇ’.</p>.<p>‘ಏನ್ ಸಂದೇಶ ರೀ…’ </p>.<p>‘ಉಪ್ಪಿಟ್ಟಲ್ಲಿ ಖಾರ ಹೆಚ್ಚಾಗಿದ್ದರೆ ಒಂದು ಸಂದೇಶ, ಉಪ್ಪು ಕಡಿಮೆ ಇದ್ದರೆ ಮತ್ತೊಂದು ಸಂದೇಶ, ಇಡ್ಲಿ ಬೆಂದಿರಲಿಲ್ಲ ಅಂದ್ರೆ ಒಂದು ಮೆಸೇಜ್, ನಾಟಿಕೋಳಿ ಸಾರಲ್ಲಿ ಪೀಸ್ಗಳಿರಲಿಲ್ಲ ಅಂದ್ರೆ ಇನ್ನೊಂದು ಮೆಸೇಜ್’.</p>.<p>‘ಓಹ್, ಹೀಗೆಲ್ಲ ಇದೆಯಾ? ಫಸ್ಟ್ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಉಪ್ಪಿಟ್ಟಿಗೆ ಉಪ್ಪು ಕಡಿಮೆ ಇತ್ತಂತೆ. ಅಂದ್ರೆ ಏನರ್ಥ?’ </p>.<p>‘ಇನ್ನೊಂದು ಬಜೆಟ್ ಮಂಡಿಸಿದ ನಂತರ ಉಪ್ಪಿಟ್ಟಿಗೆ ಉಪ್ಪು ಹಾಕಲಾಗುವುದು ಎಂದರ್ಥ’.</p>.<p>‘ಎರಡನೇ ಮೀಟಿಂಗ್ನಲ್ಲಿ ನಾಟಿಕೋಳಿ ಸಾರು ಖಾರ ಆಗಿತ್ತಂತೆ. ಇದರರ್ಥ ಏನಿರಬಹುದು?’ </p>.<p>‘ಅಧಿಕಾರ ಬಿಟ್ಟು ಕೊಡದಿದ್ದರೆ ಮುಂದೆ ಎಲ್ಲ ಖಾರ ಖಾರವಾಗಿರುತ್ತೆ ಅಂತಿರಬಹುದು’.</p>.<p>‘ಉಪಾಹಾರ ಆದ ನಂತರ ಲೆಮನ್ ಟೀ ಕೊಟ್ಟಿದ್ರಂತೆ. ಆದರೆ, ಅದರಲ್ಲಿ ಹುಳಿಯೇ ಇರಲಿಲ್ವಂತೆ ರೀ’.</p>.<p>‘ಅಂದ್ರೆ, ಇಬ್ಬರ ನಡುವೆ ಹುಳಿ ಹಿಂಡೋರು ತುಂಬಾ ಜನ ಇದ್ದಾರೆ. ಮತ್ತೇಕೆ ಎಕ್ಸ್ಟ್ರಾ ಹುಳಿ ಅಂತ ಹಾಕಿಲ್ಲದೇ ಇರಬಹುದು’ ಎಂದು ನಕ್ಕೆ. </p>.<p>‘ರಾಜ್ಯಭಾರ ಮಾಡೋದಂದ್ರೆ ಕುಕರಿ ಶೋ ಅಂದ್ಕೊಂಡಿದಾರೇನ್ರೀ ಇವರು... ರೈತರು ರೋಸ್ಟ್ ಆಗ್ತಿದ್ದಾರೆ. ಎಲ್ಲದರ ಬೆಲೆ, ಟ್ಯಾಕ್ಸ್ ಜಾಸ್ತಿ ಆಗಿ ಜನ ಸೀದುಹೋಗ್ತಿದ್ದಾರೆ. ಇಂಥದ್ದರಲ್ಲಿ ವಿರೋಧಪಕ್ಷದವರೂ ಹೋರಾಟ ಮಾಡ್ತಿಲ್ವಲ್ರೀ’.</p>.<p>‘ಹನುಮ ಜಯಂತಿ ದಿನ ಕೋಳಿ ಸಾರು ಮಾಡಿದ್ದಾರೆ ಅಂತ ಹೋರಾಡ್ತಿಲ್ವ, ಇನ್ನೂ ಅವರು ಎಂತಹ ಹೋರಾಟ ಮಾಡಬೇಕು ನಿಂಗೆ’ ಎಂದೆ. ಹಣೆ ಚಚ್ಚಿಕೊಂಡು ಒಳಹೋದಳು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>