ನವದೆಹಲಿ:ಸೈನಿಕರ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮುಂದುವರಿಸಿದ್ದಾರೆ.
‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿ ಸೇನಾಧಿಕಾರಿಯೊಬ್ಬರ ಹೇಳಿಕೆಯುಳ್ಳ ವರದಿಯೊಂದರ ತುಣುಕನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದೆಡೆ ದೇಶದ ಪರಮ ವೀರನಿದ್ದರೆ ಮತ್ತೊಂದೆಡೆ, ಪ್ರಧಾನ ಮಂತ್ರಿಯವರ ಹೆಮ್ಮೆ ಮತ್ತು ಸರ್ವಾಧಿಕಾರವಿದೆ. ‘ನವ ಭಾರತ’ದಲ್ಲಿ ‘ಸ್ನೇಹಿತ’ರ ಮಾತಿಗೆ ಮಾತ್ರ ಬೆಲೆಯೇ, ದೇಶದ ವೀರರ ಮಾತಿಗಲ್ಲವೇ?’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
एक तरफ़ देश के परमवीर हैं और दूसरी तरफ़ प्रधानमंत्री का घमंड और तानाशाही।