ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 92,071 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 1,136 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆಯು 48,46,428 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಸೋಮವಾರ ಕೋವಿಡ್ನಿಂದ 58 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,000 ಗಡಿದಾಟಿದೆ. 3,211 ಹೊಸ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ 2,05,919ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
West Bengal reports 3,211 new #COVID19 cases and 58 deaths today, taking total cases to 2,05,919 including 1,78,223 discharges, 23,693 active cases and 4,003 deaths: State Health Department pic.twitter.com/LHPnc5BAm6
— ANI (@ANI) September 14, 2020
ಮುಂಬೈನಲ್ಲಿ ಇಂದು 31 ಮಂದಿ ಮೃತಪಟ್ಟಿದ್ದು 2,256 ಹೊಸ ಪ್ರಕರಣಗಳು ವರದಿಯಾಗಿವೆ.ಸಕ್ರಿಯ ಪ್ರಕರಣಗಳ ಸಂಖ್ಯೆ 17,19,49 ಆಗಿದೆ ಎಂದು ಬಿಎಂಸಿ ಹೇಳಿದೆ.
ಪಂಜಾಬ್ನಲ್ಲಿ 70 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 2,424ಕ್ಕೇರಿದೆ. ಇಲ್ಲಿರುವ ಸೋಂಕಿತರ ಸಂಖ್ಯೆ 82,113. ಅದೇ ವೇಳೆ ಮಧ್ಯಪ್ರದೇಶದಲ್ಲಿ ಒಂದೇ ದಿನ 2,483 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 90,730ಕ್ಕೇರಿದ್ದು, ಸಾವಿನ ಸಂಖ್ಯೆ 1,791 ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಕಳೆದ 24ಗಂಟೆಗಳಲ್ಲಿ 1,730 ಹೊಸ ಪ್ರಕರಣಗಳು ಪತ್ತೆಯಾಗಿದ್ದು 14 ಮಂದಿ ಸಾವಿಗೀಡಾಗಿದ್ದಾರೆ.
ಇದುವರೆಗೂ 37,80,108 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 9,86,598 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ಜನರು ಒಟ್ಟಾರೆ 79,722 ಸಾವಿಗೀಡಾಗಿದ್ದಾರೆ.
India's #COVID19 case tally crosses 48 lakh mark with a spike of 92,071 new cases & 1,136 deaths reported in the last 24 hours.
— ANI (@ANI) September 14, 2020
The total case tally stands at 48,46,428 including 9,86,598 active cases, 37,80,108 cured/discharged/migrated & 79,722 deaths: Ministry of Health pic.twitter.com/EMvyFJzWiO
ಮೇಘಾಲಯದಲ್ಲಿ 139 ಹೊಸ ಪ್ರಕರಣಗಳು ವರದಿ ಆಗಿದ್ದು ಈವರೆಗೆ 27 ಮಂದಿ ಸಾವಿಗೀಡಾಗಿದ್ದಾರೆ
ಆಂಧ್ರಪ್ರದೇಶದಲ್ಲಿ 5,67,123 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 4,67,139 ಜನರು ಗುಣಮುಖರಾಗುವುದರೊಂದಿಗೆ 4,912 ಜನರು ಸಾವಿಗೀಡಾಗಿದ್ದಾರೆ.
ಇನ್ನುಳಿದಂತೆ ತಮಿಳು ನಾಡಿನಲ್ಲಿ 5,02,759, ಕರ್ನಾಟಕದಲ್ಲಿ 4,59,445, ದೆಹಲಿಯಲ್ಲಿ 2,18,304 ಮತ್ತು ಉತ್ತರ ಪ್ರದೇಶದಲ್ಲಿ 3,12,036 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಿಝೋರಾಂನಲ್ಲಿಂದು ಹೊಸದಾಗಿ 14 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,428ಕ್ಕೆ ಏರಿಕೆಯಾಗಿದೆ. 598 ಸಕ್ರಿಯ ಪ್ರಕರಣಗಳೊಂದಿಗೆ 830 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.