ನೆರೆಮನೆಯವರಾದ ಮಿತುನ್ ಸಹ್ನಿ, ರಾಜ್ಕುಮಾರ್, ಬಿಜೇಂದರ್ ಸಹ್ನಿ, ಗರಿಬನ್ ಕುಮಾರ್, ತಿಲ್ಜು ಸಹ್ನಿ ಮತ್ತು ರವಿಂದರ್ ಸಹ್ನಿ ಮ್ಯೂಸಿಕ್ ವಿಚಾರವಾಗಿ ಪ್ರಸಾದ್ ಮತ್ತು ಮನೋಜ್ ಮೇಲೆ ಜಗಳ ಮಾಡಿದ್ದಾರೆ. ಜಗಳ ಹಿಂಸಾಚಾರಕ್ಕೆ ತಿರುಗಿದೆ. ಗರಿಬನ್, ಮನೋಜ್ ಎದೆಗೆ ಚಾಕುವಿನಿಂದ ತಿವಿದಿದ್ದಾರೆ. ಈ ವೇಳೆ ಪ್ರಸಾದ್ ತಲೆಗೆ ಕಬ್ಬಿಣದ ಪ್ಯಾನ್ನಿಂದ ದಾಳಿ ನಡೆಸಿದ್ದಾರೆ. ಸದ್ಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಘನಶ್ಯಾಂ ಬನ್ಸಾಲ್ ತಿಳಿಸಿದ್ದಾರೆ.