ಮಾಜಿ ಕ್ರಿಕೆಟಿಗರೂ ಆಗಿರುವ ಗಂಭೀರ್, ‘ಕಳೆದ ಒಂದು ತಿಂಗಳಲ್ಲಿ40 ನಾಗರಿಕರು ಮತ್ತು ಯೋಧರು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಆದರೆ, ಈ ಬಗ್ಗೆ ಅವರು (ಸಿಧು) ಮಾತನಾಡುವುದಿಲ್ಲ. ಪಾಕಿಸ್ತಾನ ಸೇನೆ ಮುಖ್ಯಸ್ಥ ಬಜ್ವಾ ಅವರನ್ನು ಆಲಂಗಿಸುತ್ತಾರೆ. ಕರ್ತಾರ್ಪುರ ಸಾಹಿಬ್ಗೆ ತೆರಳಿ ಇಮ್ರಾನ್ ಖಾನ್ ಅವರನ್ನು ದೊಡ್ಡಣ್ಣ ಎನ್ನುತ್ತಾರೆ. ದೇಶದ ರಕ್ಷಣೆ ಬಯಸುವವರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೇಶದ ರಕ್ಷಣೆಯನ್ನು ಬಯಸುತ್ತಿದ್ದರು. ಆದರೆ ಅವರಿಗೆ ಸಹಕಾರ ನೀಡಲಿಲ್ಲ. ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರೇನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.