‘ಕಾಂಗ್ರೆಸ್ ಜತೆಗೆ ಮಾತನಾಡಲು ನಾವು ಯತ್ನಿಸಿದ್ದೆವು. ಕುಳಿತು ಮಾತನಾಡೋಣ, ಈಗಿನ ಸರ್ಕಾರವನ್ನು ಎದುರಿಸಲು ಕಾರ್ಯತಂತ್ರ ರೂಪಿಸೋಣ ಎಂದಿದ್ದೆವು. ಶಿವಸೇನಾದ ಸಂಜಯ ರಾವುತ್ ಅವರೂ ಇಂತಹುದೇ ಮಾತು ಆಡಿದ್ದರು. ಆದರೆ, ಅವರು ‘ಆಯಿತು’ ಎಂದೂ ಹೇಳಲಿಲ್ಲ, ‘ಬೇಡ’ ಎಂದೂ ಹೇಳಲಿಲ್ಲ. ಅವರು ನಮಗೆ ಸಾಕಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಲಿಲ್ಲ’ ಎಂದು ಪಟೇಲ್ ಹೇಳಿದ್ದಾರೆ.