ಜ್ಞಾನವಾಪಿ ಮಸೀದಿ ಆವರಣದಲ್ಲಿ ನ್ಯಾಯಾಲಯದ ಆದೇಶದಂತೆ ಶನಿವಾರದಿಂದ ಆರಂಭವಾಗಿದ್ದ ಸಮೀಕ್ಷೆ ಸೋಮವಾರ ಬೆಳಿಗ್ಗೆ ಕೊನೆಗೊಂಡಿತ್ತು. ಬಳಿಕ ಮಾತನಾಡಿದ್ದ ಹಿಂದೂ ಬಣದ ವಕೀಲರೊಬ್ಬರು, ಮಸೀದಿಯ ಒಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿದ್ದರು. ಶಿವಲಿಂಗದ ರಕ್ಷಣೆ ಕೋರಿ ಸಿವಿಲ್ ನ್ಯಾಯಾಲಯಕ್ಕೆ ಹೋಗುವುದಾಗಿ ಅವರು ಹೇಳಿದ್ದರು.