ಖಾಸಗಿ ಕಂಪೆನಿಯೊಂದರಲ್ಲಿ ಘಟಕದ ಮುಖ್ಯಸ್ಥರಾಗಿದ್ದ ರಿಂಕು ಎನ್ನುವವರು ತರಕಾರಿ ಮಾರಾಟ ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತರಕಾರಿ ಮಾರಾಟ ಆರಂಭಿಸಬೇಕಾಯಿತು. ಖಾಸಗಿ ವಲಯವು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಕೆಲಸವೇ ಇಲ್ಲದಂತಾಗಿದೆ. ಹೆಚ್ಚಿನ ಆಯ್ಕೆಗಳು ಇಲ್ಲವಾದ್ದರಿಂದ ನನ್ನ ಸ್ನೇಹಿತರೂ ತರಕಾರಿ ಮಾರುತ್ತಿದ್ದಾರೆ. ಕುಟುಂಬದವರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.