<p><strong>ಮುಂಬೈ: </strong>ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ತಾಲಿಬಾನ್ಗೆ ಹೋಲಿಸಿರುವುದು ಸಂಪೂರ್ಣ ತಪ್ಪು ಎಂದು ಶಿವಸೇನಾ ಖಂಡಿಸಿದೆ.</p>.<p>'ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸಿದಂತೆ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಆರ್ಎಸ್ಎಸ್ ಹೆಸರನ್ನು ಉಲ್ಲೇಖಿಸದೆ ಜಾವೇದ್ ಅಖ್ತರ್ ಅವರು ಸುದ್ದಿ ವಾಹಿನಿಯೊಂದಕ್ಕೆ ಈ ಹೇಳಿಕೆ ನೀಡಿದ್ದರು.</p>.<p>‘ಜಾವೇದ್ ಅಖ್ತರ್ ಜಾತ್ಯತೀತ ವ್ಯಕ್ತಿ. ಅವರು ಮೂಲಭೂತವಾದದ ವಿರುದ್ಧ ಮಾತನಾಡುತ್ತಾರೆ. ಹಾಗಿದ್ದರೂ, ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಸಿರುವುದು ಸಂಪೂರ್ಣ ತಪ್ಪು. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಬೆಂಬಲಿಸುವವರು ತಾಲಿಬಾನಿ ಮನಸ್ಥಿತಿಯನ್ನು ಹೊಂದಿದವರು ಎಂದು ನೀವು ಹೇಗೆ ಹೇಳುತ್ತೀರಿ? ನಾವು ಇದನ್ನು ಒಪ್ಪುವುದಿಲ್ಲ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.</p>.<p>‘ಪಾಕಿಸ್ತಾನ ರಚನೆಗೆ ಕಾರಣವಾದ ವಿಭಜನೆಯು ಧರ್ಮ ಆಧಾರಿತವಾಗಿತ್ತು. ಹಿಂದೂ ರಾಷ್ಟ್ರವನ್ನು ಬೆಂಬಲಿಸುವವರು ಬಹುಸಂಖ್ಯಾತ ಹಿಂದೂಗಳನ್ನು ದೂರವಿಡಬಾರದು ಎಂಬುದನ್ನು ಮಾತ್ರ ಬಯಸುತ್ತಾರೆ’ ಎಂದು ಉಲ್ಲೇಖಿಸಲಾಗಿದೆ.</p>.<p>‘ಹಿಂದೂತ್ವ ಒಂದು ಸಂಸ್ಕೃತಿ. ಈ ಸಮುದಾಯದವರು ತಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುವವರನ್ನು ತಡೆಯುವ ಹಕ್ಕನ್ನು ಬಯಸುತ್ತಾರೆ. ಹಿಂದೂತ್ವವನ್ನು ತಾಲಿಬಾನ್ಗೆ ಹೋಲಿಸುವ ಮೂಲಕ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.</p>.<p>‘ಇದು ಹಿಂದೂ ಬಹುಸಂಖ್ಯಾತ ದೇಶವಾಗಿದ್ದರೂ, ನಾವು ಜಾತ್ಯತೀತತೆಯ ತತ್ವವನ್ನು ಎತ್ತಿ ಹಿಡಿದಿದ್ದೇವೆ. ಹಿಂದೂತ್ವ ಪ್ರತಿಪಾದಕರು ಹಿಂದೂಗಳನ್ನು ಮೂಲೆಗುಂಪು ಮಾಡಬಾರದೆಂದು ಬಯಸುತ್ತಾರೆ. ನಿಮಗೆ ಆರ್ಎಸ್ಎಸ್ನೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಆ ಸಂಘಟನೆಯ ತತ್ವಗಳನ್ನು ತಾಲಿಬಾನ್ಗೆ ಹೋಲಿಸುವುದು ಸರಿಯಲ್ಲ’ ಎಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ತಾಲಿಬಾನ್ಗೆ ಹೋಲಿಸಿರುವುದು ಸಂಪೂರ್ಣ ತಪ್ಪು ಎಂದು ಶಿವಸೇನಾ ಖಂಡಿಸಿದೆ.</p>.<p>'ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸಿದಂತೆ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಆರ್ಎಸ್ಎಸ್ ಹೆಸರನ್ನು ಉಲ್ಲೇಖಿಸದೆ ಜಾವೇದ್ ಅಖ್ತರ್ ಅವರು ಸುದ್ದಿ ವಾಹಿನಿಯೊಂದಕ್ಕೆ ಈ ಹೇಳಿಕೆ ನೀಡಿದ್ದರು.</p>.<p>‘ಜಾವೇದ್ ಅಖ್ತರ್ ಜಾತ್ಯತೀತ ವ್ಯಕ್ತಿ. ಅವರು ಮೂಲಭೂತವಾದದ ವಿರುದ್ಧ ಮಾತನಾಡುತ್ತಾರೆ. ಹಾಗಿದ್ದರೂ, ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಸಿರುವುದು ಸಂಪೂರ್ಣ ತಪ್ಪು. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಬೆಂಬಲಿಸುವವರು ತಾಲಿಬಾನಿ ಮನಸ್ಥಿತಿಯನ್ನು ಹೊಂದಿದವರು ಎಂದು ನೀವು ಹೇಗೆ ಹೇಳುತ್ತೀರಿ? ನಾವು ಇದನ್ನು ಒಪ್ಪುವುದಿಲ್ಲ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.</p>.<p>‘ಪಾಕಿಸ್ತಾನ ರಚನೆಗೆ ಕಾರಣವಾದ ವಿಭಜನೆಯು ಧರ್ಮ ಆಧಾರಿತವಾಗಿತ್ತು. ಹಿಂದೂ ರಾಷ್ಟ್ರವನ್ನು ಬೆಂಬಲಿಸುವವರು ಬಹುಸಂಖ್ಯಾತ ಹಿಂದೂಗಳನ್ನು ದೂರವಿಡಬಾರದು ಎಂಬುದನ್ನು ಮಾತ್ರ ಬಯಸುತ್ತಾರೆ’ ಎಂದು ಉಲ್ಲೇಖಿಸಲಾಗಿದೆ.</p>.<p>‘ಹಿಂದೂತ್ವ ಒಂದು ಸಂಸ್ಕೃತಿ. ಈ ಸಮುದಾಯದವರು ತಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುವವರನ್ನು ತಡೆಯುವ ಹಕ್ಕನ್ನು ಬಯಸುತ್ತಾರೆ. ಹಿಂದೂತ್ವವನ್ನು ತಾಲಿಬಾನ್ಗೆ ಹೋಲಿಸುವ ಮೂಲಕ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.</p>.<p>‘ಇದು ಹಿಂದೂ ಬಹುಸಂಖ್ಯಾತ ದೇಶವಾಗಿದ್ದರೂ, ನಾವು ಜಾತ್ಯತೀತತೆಯ ತತ್ವವನ್ನು ಎತ್ತಿ ಹಿಡಿದಿದ್ದೇವೆ. ಹಿಂದೂತ್ವ ಪ್ರತಿಪಾದಕರು ಹಿಂದೂಗಳನ್ನು ಮೂಲೆಗುಂಪು ಮಾಡಬಾರದೆಂದು ಬಯಸುತ್ತಾರೆ. ನಿಮಗೆ ಆರ್ಎಸ್ಎಸ್ನೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಆ ಸಂಘಟನೆಯ ತತ್ವಗಳನ್ನು ತಾಲಿಬಾನ್ಗೆ ಹೋಲಿಸುವುದು ಸರಿಯಲ್ಲ’ ಎಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>