ಉತ್ತರ ಪ್ರದೇಶದಲ್ಲಿ 15ರಿಂದ 18 ವರ್ಷದ ವರೆಗಿನ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ಪರಿಶೀಲಿಸಿದ ಬಳಿಕ ವರದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಆದಿತ್ಯನಾಥ್, 'ಓಮೈಕ್ರಾನ್ ವೇಗವಾಗಿ ಹರಡುತ್ತದೆ ಎಂಬುದು ನಿಜ. ಆದರೆ ಕೋವಿಡ್ನ ಎರಡನೇ ಅಲೆಗೆ ಹೋಲಿಸಿದರೆ ಹೊಸ ರೂಪಾಂತರವು ದುರ್ಬಲವಾಗಿದೆ. ಇದು ಸಾಮಾನ್ಯ ವೈರಲ್ ಜ್ವರ ಮಾತ್ರವಾಗಿದೆ. ಆದರೆ ಯಾವುದೇ ರೋಗದ ವಿರುದ್ಧ ಮುನ್ನೆಚ್ಚರಿಕೆ ಹಾಗೂ ಜಾಗರೂಕತೆ ವಹಿಸುವುದು ಮುಖ್ಯ. ಭಯಭೀತರಾಗುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.