ಆಗಸ್ಟ್ 29, 30ರ ರಾತ್ರಿ ಪಿಎಲ್ಎ ತುಕಡಿಗಳು ಮಿಲಿಟರಿ ಹಂತದ ಒಪ್ಪಂದವನ್ನು ಉಲ್ಲಂಘಿಸಿವೆ. ಭಾರತೀಯ ಸೇನೆ ಇದನ್ನು ವಿಫಲಗೊಳಿಸಿದ್ದು, ಆ ಭಾಗದಲ್ಲಿ ಭದ್ರತೆ ಚುರುಕುಗೊಳಿಸಿವೆ. ಭಾರತೀಯ ಸೇನೆಯು ಶಾಂತಿ ರಕ್ಷಣೆ ಮತ್ತು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಬದ್ಧವಾಗಿದೆ ಎಂದು ಭಾರತೀಯ ಸೇನೆ ವಕ್ತಾರರು ತಿಳಿಸಿದ್ದಾರೆ.