ನವದೆಹಲಿ: ಪಂಜಾಬ್ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ಕುಳಿತು ಮಾತನಾಡೋಣ ಎಂದು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಅವರಿಗೆ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಬುಧವಾರ ಹೇಳಿದ್ದಾರೆ. ಆದರೆ, ಈ ಸಂದರ್ಭದಲ್ಲಿ ‘ಪಕ್ಷವೇ ಸರ್ವೋಚ್ಚ’ ಎಂಬ ಸೂಚ್ಯ ಎಚ್ಚರಿಕೆಯನ್ನೂ ಚನ್ನಿ ನೀಡಿದ್ದಾರೆ. ಸಿಧು ಅವರು ರಾಜಿಯಾಗದಿದ್ದರೆ ಆ ಸ್ಥಾನಕ್ಕೆ ಹೊಸಬರನ್ನು ತರುವ ಬಗ್ಗೆ ಕಾಂಗ್ರೆಸ್ ಯೋಚನೆ ಆರಂಭಿಸಿದೆ.