<p><strong>ನವದೆಹಲಿ</strong>: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದ ಬಹುತೇಕ ಕಡೆ ಲಾಕ್ಡೌನ್ ಇದ್ದಿದ್ದರಿಂದ ರೈಲುಗಳಓಡಾಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು. ಇದೀಗ ಲಾಕ್ಡೌನ್ ಸಡಿಲ ಆಗುತ್ತಿರುವುದರಿಂದ ದೇಶಾದ್ಯಂತ 50 ರೈಲುಗಳು ಜೂನ್ 21 ರಿಂದ ಪುನರಾರಂಭವಾಗಲಿರುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ.</p>.<p>ಇದರಲ್ಲಿ ತುರಂತೊ, ಶತಾಬ್ಧಿ, ರಾಜಧಾನಿ ಮತ್ತು ಇತರ ಕೆಲ ದೂರದೂರಿನ ಎಕ್ಸಪ್ರೆಸ್ ರೈಲುಗಳು ಸೇರಿವೆ.</p>.<p>ಸದ್ಯ ದೇಶಾದ್ಯಂತ ಪ್ರತಿದಿನ 900 ಪ್ರಯಾಣಿಕ ರೈಲುಗಳು ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆ ಇರದಿದ್ದರಿಂದ ಕಳೆದ ತಿಂಗಳು ಕೆಲ ಎಕ್ಸ್ಪ್ರೆಸ್ ರೈಲುಗಳನ್ನು ರದ್ದು ಪಡಿಸಲಾಗಿತ್ತು. ಕೊರೊನಾ ಎರಡನೇ ಅಲೆಗಿಂತ ಮೊದಲು ದೇಶಾದ್ಯಂತ ಪ್ರತಿ ನಿತ್ಯ 1500 ರೈಲುಗಳು ಸಂಚರಿಸುತ್ತಿದ್ದವು.</p>.<p>ಕಳೆದ ತಿಂಗಳು ಕೇವಲ 5 ಲಕ್ಷ ಜನ ಕಾಯ್ದಿರಿಸಿದ ಸೀಟುಗಳಲ್ಲಿ ಪ್ರಯಾಣಿಸಿದ್ದರೆ, ಈ ತಿಂಗಳು 15 ಲಕ್ಷ ಜನ ಸೀಟುಗಳನ್ನು ಕಾಯ್ದಿರಿಸಿದ್ಧಾರೆ. ಲಾಕ್ಡೌನ್ ಸಡಿಲಿಕೆಯೇ ಇದಕ್ಕೆ ಕಾರಣ ಎಂದು ಭಾರತೀಯ ರೈಲ್ವೆ ತಿಳಿಸಿದೆ.</p>.<p>‘ನಾವು ರೈಲುಗಳಸಂಚಾರವನ್ನು ಸಾಮಾನ್ಯಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ‘ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ಧಾರೆ.</p>.<p>ಇದನ್ನೂ ಓದಿ:<a href="https://www.prajavani.net/karnataka-news/cm-bs-yediyurappa-change-is-not-possible-ramesh-jarkiholi-839669.html" target="_blank">ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ: ರಮೇಶ ಜಾರಕಿಹೊಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದ ಬಹುತೇಕ ಕಡೆ ಲಾಕ್ಡೌನ್ ಇದ್ದಿದ್ದರಿಂದ ರೈಲುಗಳಓಡಾಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು. ಇದೀಗ ಲಾಕ್ಡೌನ್ ಸಡಿಲ ಆಗುತ್ತಿರುವುದರಿಂದ ದೇಶಾದ್ಯಂತ 50 ರೈಲುಗಳು ಜೂನ್ 21 ರಿಂದ ಪುನರಾರಂಭವಾಗಲಿರುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ.</p>.<p>ಇದರಲ್ಲಿ ತುರಂತೊ, ಶತಾಬ್ಧಿ, ರಾಜಧಾನಿ ಮತ್ತು ಇತರ ಕೆಲ ದೂರದೂರಿನ ಎಕ್ಸಪ್ರೆಸ್ ರೈಲುಗಳು ಸೇರಿವೆ.</p>.<p>ಸದ್ಯ ದೇಶಾದ್ಯಂತ ಪ್ರತಿದಿನ 900 ಪ್ರಯಾಣಿಕ ರೈಲುಗಳು ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆ ಇರದಿದ್ದರಿಂದ ಕಳೆದ ತಿಂಗಳು ಕೆಲ ಎಕ್ಸ್ಪ್ರೆಸ್ ರೈಲುಗಳನ್ನು ರದ್ದು ಪಡಿಸಲಾಗಿತ್ತು. ಕೊರೊನಾ ಎರಡನೇ ಅಲೆಗಿಂತ ಮೊದಲು ದೇಶಾದ್ಯಂತ ಪ್ರತಿ ನಿತ್ಯ 1500 ರೈಲುಗಳು ಸಂಚರಿಸುತ್ತಿದ್ದವು.</p>.<p>ಕಳೆದ ತಿಂಗಳು ಕೇವಲ 5 ಲಕ್ಷ ಜನ ಕಾಯ್ದಿರಿಸಿದ ಸೀಟುಗಳಲ್ಲಿ ಪ್ರಯಾಣಿಸಿದ್ದರೆ, ಈ ತಿಂಗಳು 15 ಲಕ್ಷ ಜನ ಸೀಟುಗಳನ್ನು ಕಾಯ್ದಿರಿಸಿದ್ಧಾರೆ. ಲಾಕ್ಡೌನ್ ಸಡಿಲಿಕೆಯೇ ಇದಕ್ಕೆ ಕಾರಣ ಎಂದು ಭಾರತೀಯ ರೈಲ್ವೆ ತಿಳಿಸಿದೆ.</p>.<p>‘ನಾವು ರೈಲುಗಳಸಂಚಾರವನ್ನು ಸಾಮಾನ್ಯಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ‘ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ಧಾರೆ.</p>.<p>ಇದನ್ನೂ ಓದಿ:<a href="https://www.prajavani.net/karnataka-news/cm-bs-yediyurappa-change-is-not-possible-ramesh-jarkiholi-839669.html" target="_blank">ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ: ರಮೇಶ ಜಾರಕಿಹೊಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>