ರೈಲು ನಿಲ್ದಾಣದ ಮೂಲಕ ನಿತ್ಯವೂ ಪ್ರಯಾಣಿಸುವ ಗಣೇಶ್ ಬಾಬು ಎನ್ನುವವರು, 'ಇದೊಂದು ಉತ್ತಮ ಕ್ರಮವಾಗಿದೆ. ಆದರೆ, ಸುರಕ್ಷತೆ ಉದ್ದೇಶದಿಂದ ಮುಂಗಡ ಹಣ ಪಾವತಿಸುವ ನಿಯಮವಿದೆ. ರೈಲ್ವೆಯ ಈ ಕ್ರಮದಿಂದಾಗಿ, ಜನರು ಕುತೂಹಲಕ್ಕೆ ಎಂಬಂತೆ ಒಂದೆರಡು ಬಾರಿ ಈ ಸೇವೆ ಬಳಸಿಕೊಂಡು ಬಳಿಕ ಹಿಂದೆ ಸರಿಯಲಿದ್ದಾರೆ. ಗ್ರಾಹಕರಿಂದ ಹಣ ಪಡೆಯುವ ಬದಲು ರೈಲ್ವೆಯೇ ಬೈಕ್ಗಳಿಗೆ ಸುರಕ್ಷತೆಯಖಾತರಿ ನೀಡಬಹುದು' ಎಂದು ಸಲಹೆ ನೀಡಿದ್ದಾರೆ.