<p class="title">ಕೊಯಮತ್ತೂರು: ‘ಭ್ರಷ್ಟಾಚಾರ ಕುರಿತು ತಮ್ಮ ಜೊತೆಗೆ ನೇರ ಚರ್ಚೆಗೆ ಬನ್ನಿ’ ಎಂದು ಡಿಎಂಕೆ ಅಧ್ಯಕ್ಷ ಎಂ.ಸ್ಟಾಲಿನ್ ಅವರಿಗೆ ಮತ್ತೆ ಸವಾಲು ಹಾಕಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ‘ಸ್ಟಾಲಿನ್ ಒಬ್ಬ ಅಸಮರ್ಥ ನಾಯಕ’ ಎಂದು ಟೀಕಿಸಿದ್ದಾರೆ.</p>.<p class="title">‘ಸ್ಟಾಲಿನ್ ಅವರಿಗೆ ಎಐಎಡಿಎಂಕೆ ಅನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ. ಜನರಿಗೆ ಸುಳ್ಳು ಭರವಸೆ ಕೊಡುವ ಹಾಗೂ ಆಡಳಿತ ಪಕ್ಷವನ್ನು ಟೀಕಿಸುವ ಮೂಲಕ ಅವರ ಗಮನಸೆಳೆಯಲು ಬಯಸುತ್ತಿದ್ದಾರೆ’ ಎಂದು ಪಳನಿಸ್ವಾಮಿ ಆರೋಪಿಸಿದರು.</p>.<p class="title">‘ತಿಂಗಳ ಹಿಂದೆ ಗ್ರಾಮ ಸಭೆಯೊಂದರಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಸ್ಟಾಲಿನ್ ಅವರಿಗೆ ಆಗಲಿಲ್ಲ. ಡಿಎಂಕೆಯ 13 ಮಂದಿ ಮಾಜಿ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಸ್ಟಾಲಿನ್ ಅವರು ಭ್ರಷ್ಟಾಚಾರ ಕುರಿತು ಚರ್ಚಿಸಲು ಬಯಸುತ್ತಿದ್ದಾರೆ’ ಎಂದೂ ಮುಖ್ಯಮಂತ್ರಿ ವ್ಯಂಗ್ಯವಾಡಿದರು.</p>.<p>ನಾನು ಕೆಳಹಂತದಿಂದ ಬಂದು ಮುಖ್ಯಮಂತ್ರಿ ಆಗಿದ್ದೇನೆ. ಅವರ ತಂದೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಆಗಿದ್ದರು ಎಂದು ಅವರು ಆ ಸ್ಥಾನದಲ್ಲಿದ್ದಾರೆ. ಎಐಎಡಿಎಂಕೆ ನಾಯಕರಾಗಿದ್ದ ಎಂ.ಜಿ.ರಾಮಚಂದ್ರನ್, ಜಯಲಲಿತಾ ಜನರಿಗಾಗಿ ಹೋರಾಡಿದರು. ಆದರೆ ಅವರ ತಂದೆ ಕುಟುಂಬಕ್ಕಾಗಿ ಹೋರಾಡಿದರು ಎಂದು ಮುಖ್ಯಮಂತ್ರಿ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಕೊಯಮತ್ತೂರು: ‘ಭ್ರಷ್ಟಾಚಾರ ಕುರಿತು ತಮ್ಮ ಜೊತೆಗೆ ನೇರ ಚರ್ಚೆಗೆ ಬನ್ನಿ’ ಎಂದು ಡಿಎಂಕೆ ಅಧ್ಯಕ್ಷ ಎಂ.ಸ್ಟಾಲಿನ್ ಅವರಿಗೆ ಮತ್ತೆ ಸವಾಲು ಹಾಕಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ‘ಸ್ಟಾಲಿನ್ ಒಬ್ಬ ಅಸಮರ್ಥ ನಾಯಕ’ ಎಂದು ಟೀಕಿಸಿದ್ದಾರೆ.</p>.<p class="title">‘ಸ್ಟಾಲಿನ್ ಅವರಿಗೆ ಎಐಎಡಿಎಂಕೆ ಅನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ. ಜನರಿಗೆ ಸುಳ್ಳು ಭರವಸೆ ಕೊಡುವ ಹಾಗೂ ಆಡಳಿತ ಪಕ್ಷವನ್ನು ಟೀಕಿಸುವ ಮೂಲಕ ಅವರ ಗಮನಸೆಳೆಯಲು ಬಯಸುತ್ತಿದ್ದಾರೆ’ ಎಂದು ಪಳನಿಸ್ವಾಮಿ ಆರೋಪಿಸಿದರು.</p>.<p class="title">‘ತಿಂಗಳ ಹಿಂದೆ ಗ್ರಾಮ ಸಭೆಯೊಂದರಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಸ್ಟಾಲಿನ್ ಅವರಿಗೆ ಆಗಲಿಲ್ಲ. ಡಿಎಂಕೆಯ 13 ಮಂದಿ ಮಾಜಿ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಸ್ಟಾಲಿನ್ ಅವರು ಭ್ರಷ್ಟಾಚಾರ ಕುರಿತು ಚರ್ಚಿಸಲು ಬಯಸುತ್ತಿದ್ದಾರೆ’ ಎಂದೂ ಮುಖ್ಯಮಂತ್ರಿ ವ್ಯಂಗ್ಯವಾಡಿದರು.</p>.<p>ನಾನು ಕೆಳಹಂತದಿಂದ ಬಂದು ಮುಖ್ಯಮಂತ್ರಿ ಆಗಿದ್ದೇನೆ. ಅವರ ತಂದೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಆಗಿದ್ದರು ಎಂದು ಅವರು ಆ ಸ್ಥಾನದಲ್ಲಿದ್ದಾರೆ. ಎಐಎಡಿಎಂಕೆ ನಾಯಕರಾಗಿದ್ದ ಎಂ.ಜಿ.ರಾಮಚಂದ್ರನ್, ಜಯಲಲಿತಾ ಜನರಿಗಾಗಿ ಹೋರಾಡಿದರು. ಆದರೆ ಅವರ ತಂದೆ ಕುಟುಂಬಕ್ಕಾಗಿ ಹೋರಾಡಿದರು ಎಂದು ಮುಖ್ಯಮಂತ್ರಿ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>