1990ರಲ್ಲಿ ಯುದ್ಧಪೀಡಿತ ಕುವೈಟ್ನಲ್ಲಿ ನಡೆದಿದ್ದ ಭಾರತೀಯರ ತೆರವು ಕಾರ್ಯಾಚರಣೆಯ ನೆನಪು ಮಾಡಿಕೊಂಡರು. ಕುವೈಟ್ನಲ್ಲಿ ಯುದ್ಧ ನಡೆಯುತ್ತಿದ್ದ ವೇಳೆ ಲಕ್ಷಾಂತರ ಭಾರತೀಯರು ಅಲ್ಲಿ ಸಂಕಷ್ಟದಲ್ಲಿದ್ದರು. ಅವರನ್ನು ಬಸ್ಸುಗಳಲ್ಲಿ ಕುವೈಟ್ನಿಂದ ಜೋರ್ಡನ್ಗೆ ಕರೆದೊಯ್ದು, ಅಲ್ಲಿಂದ ಭಾರತಕ್ಕೆ ವಿಮಾನಗಳಲ್ಲಿ ಕರೆತರಲಾಗಿತ್ತು. ಆ ಕಾರ್ಯಾಚರಣೆಯನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಗಿನ್ನಿಸ್ ವಿಶ್ವ ದಾಖಲೆಯಲ್ಲೂ ಈ ಕಾರ್ಯಾಚರಣೆ ಕುರಿತು ಮಾಹಿತಿ ಇದೆ. ಆದರೆ ಆ ಕಾರ್ಯಾಚರಣೆಗೆ ಯಾವ ಹೆಸರನ್ನೂ ನೀಡಿರಲಿಲ್ಲ’ ಎಂದರು.