ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಮೂವರು ಮೀನುಗಾರರ ರಕ್ಷಣೆ

Last Updated 19 ಮೇ 2021, 13:09 IST
ಅಕ್ಷರ ಗಾತ್ರ

ಮಂಗಳೂರು: ತೌತೆ ಚಂಡಮಾರತದ ಹೊಡೆತದಿಂದ ಸಮುದ್ರದಲ್ಲಿ ಅತಂತ್ರರಾಗಿದ್ದ ಕೇರಳದ ಕಣ್ಣೂರು ಜಿಲ್ಲೆಯ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಹಡಗು ವಿಕ್ರಮ್‌ ಮೂಲಕ ರಕ್ಷಿಸಲಾಗಿದೆ.

ಮೀನುಗಾರಿಕಾ ಬೋಟ್‌ ಬದ್ರಿಯಾ ಕೇರಳ ತೀರದಿಂದ 10 ನಾಟಿಕಲ್‌ ಮೈಲಿ ದೂರದಲ್ಲಿ ಎಂಜಿನ್‌ ಕೆಟ್ಟು ನಿಂತಿತ್ತು. ಮೇ 14ರ ಮಧ್ಯರಾತ್ರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ತಮಿಳುನಾಡಿನ ಒಂದು ಬೋಟ್‌ ಹಾಗೂ ಕೇರಳದ ಇನ್ನೊಂದು ಬೋಟ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಆಗ ವಿಕ್ರಂ ಹಡಗಿನ ಸಿಬ್ಬಂದಿ ಈ ಮೀನುಗಾರಿಕಾ ಬೋಟ್‌ ಪತ್ತೆ ಮಾಡಿ, ಮೀನುಗಾರರನ್ನೂ ರಕ್ಷಿಸಿದ್ದಾರೆ.

ಮೀನುಗಾರರಾದ ಅರುಣ್‌ (36), ಎಸ್‌. ಫ್ರಾನ್ಸಿಸ್‌ (58), ಸುರೀಂದರ್‌ (64) ಅವರನ್ನು ರಕ್ಷಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಸಂಸದ ನಳಿನ್‌ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಮೀನುಗಾರರನ್ನು ಕೇರಳ ಸರ್ಕಾರದ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಕಮಾಂಡರ್‌ ವೆಂಕಟೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT