ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ನೇಹಲ್ ಅಂಗಡಿ ಹಾಗೂ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸವಿತಾ ಹುರಕಡ್ಲಿ ಸ್ಪರ್ಧಿಸಿದ್ದರು. ಚಾಂದಿನಿ ನಾಯಕ ಸೇರಿದಂತೆ ಇಬ್ಬರು ಪಕ್ಷದ ಅಭ್ಯರ್ಥಿಗಳು ಸವಿತಾ ಅವರನ್ನು ಬೆಂಬಲಿಸಬಹುದುಎಂಬ ಗುಮಾನಿ ಮೇಲೆ ಅವರನ್ನು ಮತದಾನ ಮಾಡದಂತೆ ತಡೆಯಲು ಮುಂದಾದಾಗ ಘಟನೆ ನಡೆದಿತ್ತು. ಇದರಿಂದ ಚಾಂದಿನಿ ನಾಯಕ ಮತದಾನದಿಂದ ವಂಚಿತರಾಗಿದ್ದರು. ಸ್ನೇಹಲ್ ಅಂಗಡಿ ಹಾಗೂ ಸವಿತಾ ಹುರಕಡ್ಲಿ ಅವರಿಗೆ ಸಮ ಮತಗಳು ಬಿದ್ದ ಕಾರಣ ಲಾಟರಿ ಮೂಲಕ ಸ್ನೇಹಲ್ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.