ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತ್ಯಾಗರಾಜರ ಆರಾಧನೆ ಮತ್ತು ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯಗಳ 300ಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ. ಉಮಯಲಪುರಂ ಶಿವರಾಮನ್, ಜಯಂತಿ ಕುಮರೇಶ್ ಮತ್ತು ಕುಮಾರೇಶ್, ವಿಜಯ್ ಪ್ರಕಾಶ್, ಅಮಿತ್ ನಾಡಿಗ್, ನಾಗವಲ್ಲಿ ನಾಗರಾಜ್, ರಘುನಂದನ್, ಸುಚೇನ್ ಮುಂತಾದ ಸಂಗೀತಗಾರರು ಕಛೇರಿ ನಡೆಸಿಕೊಡಲಿದ್ದಾರೆ.