‘ಆಗ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ಯಾವ ರೀತಿ ಆದೇಶ ಹೊರಡಿಸಿದ್ದರೋ ಅದೇ ರೀತಿಯಲ್ಲಿ ಈಗ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್ಗೆ ರಾಜಕೀಯ ದುರುದ್ದೇಶ ಬಿಟ್ಟರೆ ಈ ಪ್ರಕರಣದಲ್ಲಿ ಬೇರೆ ಏನೂ ಇಲ್ಲ. ಇವರು ಏನೂ ಮಾಡಿದರೂ ಸರಿ, ನಾವು ಮಾಡಿದರೆ ತಪ್ಪು. ಸತ್ಯ ಮರೆ ಮಾಚಿ, ಭಂಡತನದ ಆರೋಪ ಮಾಡುತ್ತಿದ್ದಾರೆ. ಇವರೇನು ಸತ್ಯ ಹರಿಶ್ಚಂದ್ರರಲ್ಲ’ ಎಂದು ಕಿಡಿಕಾರಿದರು.