ನೆಟ್, ಕೆ–ಸೆಟ್ ಪರೀಕ್ಷೆ ಉತ್ತೀರ್ಣರಾಗಿರುವ ಅವರು ಕಾಯಂ ಉದ್ಯೋಗಕ್ಕಾಗಿ ಕಾಯುತ್ತಿದ್ದರು. ನಾಲ್ಕು ತಿಂಗಳುಗಳಿಂದ ಅವರ ಕಾಲು ಗ್ಯಾಂಗ್ರಿನ್ ಆಗಿದೆ. ಈಗ ಡೆಂಗಿ ಜ್ವರ ಕೂಡ ಬಂದಿದೆ. ಅವರ ಸ್ಥಿತಿ ನೋಡಿ ಅತಿಥಿ ಉಪನ್ಯಾಸಕರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಲ್ಲದೇ ಬೇರೆಯವರು ಸಹಾಯ ಮಾಡುವಂತೆ ವಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಮನವಿ ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ₹ 15 ಸಾವಿರ ನೀಡಿದ್ದರೆ, ಸಂತೇಬೆನ್ನೂರು ಕಾಲೇಜಿನ ಉಪನ್ಯಾಸಕರು ₹ 20 ಸಾವಿರ ನೀಡಿದ್ದಾರೆ. ಶನಿವಾರ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.