ಅವೈಜ್ಞಾನಿಕ ಜಿಎಸ್ಟಿ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ: ಕಾಂಗ್ರೆಸ್ ಟೀಕೆ

ಬೆಂಗಳೂರು: ಅವೈಜ್ಞಾನಿಕ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ವಿಚಾರವಾಗಿ ಪಕ್ಷದ ಕರ್ನಾಟಕ ಘಟಕವು ಸರಣಿ ಟ್ವೀಟ್ ಮಾಡಿದ್ದು, ಜಿಎಸ್ಟಿಯಿಂದ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು ಬಿಜೆಪಿ ವಿವರಿಸಲಿ ಎಂದು ಸವಾಲೆಸೆದಿದೆ.
ಪೆಟ್ರೋಲ್, ಡೀಸೆಲ್ ರಫ್ತಿಗೆ ತೆರಿಗೆ
‘ಜಿಎಸ್ಟಿ ಜಾರಿಯಾಗಿ ಐದು ವರ್ಷಗಳು ಕಳೆದಿವೆ. ಜಾರಿಗೊಳಿಸುವಾಗ ಜಿಎಸ್ಟಿಯಿಂದ ಸ್ವರ್ಗವೇ ಧರೆಗಿಳಿದುಬಿಡುತ್ತದೆ ಎಂದು ಬೆನ್ನು ತಟ್ಟಿಕೊಂಡಿದ್ದ ಬಿಜೆಪಿಗೆ ಇಂದು ಅದರಿಂದಾದ ಏಳಿಗೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ ಜಿಎಸ್ಟಿ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಜನರ ಬದುಕನ್ನು ಕಷ್ಟಕ್ಕೆ ದೂಡಿದೆ’ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
‘ಈ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷವೂ ಜಿಎಸ್ಟಿ ಪಾಲಿನಲ್ಲಿ ಅನ್ಯಾಯವಾಗಿದೆ. ಜಿಎಸ್ಟಿ ಮೂಲಕ ಜನತೆಗೆ, ಸಣ್ಣ ಉದ್ಯಮಗಳಿಗೆ ಅಷ್ಟೇ ಅಲ್ಲ ಕರ್ನಾಟಕಕ್ಕೂ ಮೋಸ ಮಾಡಿದೆ ಕೇಂದ್ರ ಸರ್ಕಾರ. ಜಿಎಸ್ಟಿಯಿಂದ ಈ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು ಬಿಜೆಪಿ ವಿವರಿಸಲಿ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ದರ ₹198 ಇಳಿಕೆ
‘ಕಾರ್ಪೋರೇಟ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಶೇ 30ರಿಂದ ಶೇ 22ಕ್ಕೆ ಇಳಿಸಿ, ಬಡ ಮತ್ತು ಮಧ್ಯಮ ವರ್ಗ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮೇಲೆ ಹೆಚ್ಚೆಚ್ಚು ತೆರಿಗೆ ವಿಧಿಸಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ನಿರ್ನಾಮಗಳಿಸಲು ಹೊರಟಿರುವ ಪರಮನೀಚ ಬಿಜೆಪಿ ಸರ್ಕಾರ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
GST ಜಾರಿಯಾಗಿ ಐದು ವರ್ಷಗಳು ಕಳೆದಿವೆ, ಜಾರಿಗೊಳಿಸುವಾಗ ಜಿಎಸ್ಟಿಯಿಂದ ಸ್ವರ್ಗವೇ ಧರೆಗಿಳಿದುಬಿಡುತ್ತದೆ ಎಂದು ಬೆನ್ನು ತಟ್ಟಿಕೊಂಡಿದ್ದ ಬಿಜೆಪಿಗೆ ಇಂದು ಅದರಿಂದಾದ ಏಳಿಗೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ.
ಅವೈಜ್ಞಾನಿಕ GST ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ, ಜನರ ಬದುಕನ್ನು ಕಷ್ಟಕ್ಕೆ ದೂಡಿದೆ.#5YearsOfGSTMess
— Karnataka Congress (@INCKarnataka) July 1, 2022
ಈ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷವೂ GST ಪಾಲಿನಲ್ಲಿ ಅನ್ಯಾಯವಾಗಿದೆ.
ಜಿಎಸ್ಟಿ ಮೂಲಕ ಜನತೆಗೆ,
ಸಣ್ಣ ಉದ್ಯಮಗಳಿಗೆ ಅಷ್ಟೇ ಅಲ್ಲ ಕರ್ನಾಟಕಕ್ಕೂ ಮೋಸ ಮಾಡಿದೆ ಕೇಂದ್ರ ಸರ್ಕಾರ.GSTಯಿಂದ ಈ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು @BJP4Karnataka ವಿವರಿಸಲಿ.#5YearsOfGSTMess
— Karnataka Congress (@INCKarnataka) July 1, 2022
ಕಾರ್ಪೋರೇಟ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು 30% ಇಂದ 22% ಗೆ ಇಳಿಸಿ, ಬಡ ಮತ್ತು ಮಧ್ಯಮ ವರ್ಗ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮೇಲೆ ಹೆಚ್ಚೆಚ್ಚು ತೆರಿಗೆ ವಿಧಿಸಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ನಿರ್ನಾಮಗಳಿಸಲು ಹೊರಟಿರುವ ಪರಮನೀಚ ಬಿಜೆಪಿ ಸರ್ಕಾರ.#5YearsOfGSTMess
— Karnataka Congress (@INCKarnataka) July 1, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.