ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಂದಗಿಯಲ್ಲಿ ಭೂಸನೂರು ಅವರು ನಮ್ಮ ನಿರೀಕ್ಷೆಗೂ ಮೀರಿ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಆದರೆ ಹಾನಗಲ್ನಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಪರಿಸ್ಥಿತಿಯೂ ಅನುಕೂಲಕರವಾಗಿತ್ತು. ಅಲ್ಲಿ ಏನಾಯಿತು ಎಂಬ ಬಗ್ಗೆ ಎಲ್ಲ ನಾಯಕರೂ ಸೇರಿ ಚರ್ಚೆ ಮಾಡುತ್ತೇವೆ ಎಂದರು.