ಬೀಳಗಿ ತಾಲ್ಲೂಕಿನಗಿರಿಸಾಗರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ, ಯಂಕಪ್ಪ ನುಚ್ಚಿನ, ದುರುಗವ್ವ ಎನ್.ಮೇತ್ರಿ ಪರವಾಗಿ ಶನಿವಾರ ರಂಜನಿ ರಾಘವನ್ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಕಾರಿನಿಂದ ಇಳಿದ ಅವರನ್ನು ಅಭ್ಯರ್ಥಿಗಳಾದ ವಿಜಯಲಕ್ಷ್ಮಿ, ದುರುಗವ್ವ ಸಾಂಪ್ರದಾಯಿಕವಾಗಿ ಹೂ ನೀಡಿ, ಆರತಿ ಬೆಳಗಿ ಸ್ವಾಗತಿಸಿದರು. ನಂತರ ಮೂವರು ಅಭ್ಯರ್ಥಿಗಳ ಪರ ಕರಪತ್ರ ಹಿಡಿದುಕೊಂಡು ಮನೆ ಮನೆಗೆ ತೆರಳಿ ಮತ ಕೇಳಿದರು.