‘ದೇಶದಲ್ಲಿ 90ರ ದಶಕದಲ್ಲಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಪ್ರಕ್ರಿಯೆ ಆರಂಭವಾಯಿತು. ಹೆಚ್ಚಿದ ಆರ್ಥಿಕ ವಹಿವಾಟಿನ ಪರಿಣಾಮ ಅಂತಃಕರಣ ಮರೆಯಾಯಿತು. ಮಾರುಕಟ್ಟೆ ಶಕ್ತಿಗಳ ಪ್ರಾಬಲ್ಯ ಇದ್ದಾಗ ಅಂತಃಕರಣ ಇರುವುದಿಲ್ಲ. ಕೇವಲ ಲಾಭ ಮತ್ತು ನಷ್ಟದ ವಿಷಯ ಮಾತ್ರ ಮುಖ್ಯವಾಗುತ್ತದೆ.ಇಂತಹ ಸನ್ನಿವೇಶದಲ್ಲಿ ಜನರ ಮನ ಪರಿವರ್ತನೆಯಲ್ಲಿ ಸಾಹಿತ್ಯಪರಿಣಾಮ ಬೀರುತ್ತದೆ’ ಎಂದು ಅಭಿಪ್ರಾಯಪಟ್ಟರು.