ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಬಸ್ ಚಲಾಯಿಸಿ ಗಮನ ಸೆಳೆದರು.
‘ಸೇವ್ ದಿ ಚಿಲ್ಡ್ರನ್’ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದಮಕ್ಕಳ ಸಂಚಾರ ಕಲಿಕಾ ಕೇಂದ್ರ ಉದ್ಘಾಟಿಸಿದ ಬಳಿಕ ಬಸ್ ಏರಿದ ಅವರು ಚಾಲಕನ ಆಸನದಲ್ಲಿ ಕುಳಿತು ಆವರಣದಲ್ಲೇ ಒಂದು ಸುತ್ತು ಬಸ್ ಚಲಾಯಿಸಿದರು.
‘ಸೇವ್ ದಿ ಚಿಲ್ಡ್ರನ್’ ಸಂಸ್ಥೆಯು ಮೂರು ಬಸ್ಗಳು, ಪುಸ್ತಕ ಹಾಗೂ ಡಿಜಿಟಲ್ ರೂಪದ ಕಲಿಕಾ ಸಾಮಗ್ರಿಗಳನ್ನು ಕೊಡುಗೆ ನೀಡಿದೆ. ಬಡವರು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆಶಿಕ್ಷಣ ಒದಗಿಸುವುದು ಇದರ ಉದ್ದೇಶ. ಇದಕ್ಕಾಗಿ ಶಿಕ್ಷಕರನ್ನೂ ನಿಯೋಜಿಸಲಾಗಿದೆ.