ಕಲಬುರಗಿ: ‘ಮಹಿಳೆಗೆ ಮೋಸ ಮಾಡಿ ಪರಾರಿಯಾಗಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಗುಜರಾತ್ ಮೂಲಕ ವಿದೇಶಕ್ಕೆ ಪರಾರಿಯಾಗಲು ಯೋಜನೆ ರೂಪಿಸಿರಬೇಕು‘ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ಸ್ಯಾಂಟ್ರೊ ರವಿ ಬಂಧನ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದ ಗಡಿ ದಾಟಲು ಅವನಿಗೆ ಹೇಗೆ ಸಾಧ್ಯವಾಯಿತು. ಯಾರು ಬಿಟ್ಟರು? ಈ ಸಂದರ್ಭದಲ್ಲಿ ಹಾಗೆ ಹೋಗಲು ಸಾಧ್ಯವೇ? ಬಹುಶಃ ಸ್ಯಾಂಟ್ರೊ ರವಿಯನ್ನು ರಕ್ಷಿಸಲು ಗೃಹಸಚಿವರೇ ಆತನೊಂದಿಗೆ ತೆರಳಿರಬೇಕು’ ಎಂದು ಆರೋಪಿಸಿದರು.