<p>ಪಶ್ಚಿಮ ಘಟ್ಟದ ಮಡಿಲಿನಲ್ಲಿ ಹಲವು ಜರಿಗಳು ಹಾಗೂ ಜಲಪಾತಗಳು ಉಗಮವಾಗುತ್ತವೆ. ಇವು ಪ್ರಕೃತಿಯ ಸೌಂದರ್ಯ ಹೆಚ್ಚಿಸುವುದಲ್ಲದೆ ಜೀವ ಸಂಕುಲಗಳಿಗೆ ಆಸರೆಯಾಗಿವೆ. ಪರಿಸರ ಪ್ರೇಮಿಗಳಿಗೆ ಹಾಗೂ ಚಾರಣ ಪ್ರಿಯರಿಗೆ ವಿಭಿನ್ನ ಅನುಭವ ನೀಡುತ್ತವೆ. ಕರ್ನಾಟಕ ಅತೀ ಎತ್ತರದ 5 ಜಲಪಾತಗಳು ಯಾವುವು. ಅವು ಇರುವುದು ಎಲ್ಲಿ ಎಂಬ ಮಾಹಿತಿ ಇಲ್ಲಿದೆ.</p><h3>ಕುಂಚಿಕಲ್ ಜಲಪಾತ:</h3><p>ಕರ್ನಾಟಕದ ಅತಿ ಎತ್ತರದ ಜಲಪಾತವಾಗಿರುವ ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ. ವಾರಾಹಿ ನದಿ ಕುಂಚಿಕಲ್ ಜಲಪಾತವಾಗಿ 455ಮೀ (1,494 ಅಡಿ) ಎತ್ತರದಿಂದ ಧುಮುಕುತ್ತದೆ. ಇಲ್ಲಿ ಜಲ ವಿದ್ಯುತ್ ಕೇಂದ್ರವಿದೆ. ಇಲ್ಲಿಗೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು.</p><p><strong>ತಲುಪುವುದು ಹೇಗೆ?</strong></p><p>ಈ ಜಲಪಾತ ತಲುಪಲು ಹುಲಿಕಲ್ನಿಂದ ಟ್ಯಾಕ್ಸಿ ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಹೋಗಬಹುದು ಅಥವಾ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಿಂದ ಕುಂಚಿಕಲ್ ಜಲಪಾತಕ್ಕೆ ಬಸ್ ಸೌಕರ್ಯ ಲಭ್ಯವಿದೆ. </p>.PHOTOS | ಭಾರಿ ಮಳೆ: ಮೈದುಂಬಿದ ಗೋಕಾಕ ಜಲಪಾತ ಕಂಡಿದ್ದು ಹೀಗೆ....PHOTOS: ಲಿಂಗನಮಕ್ಕಿ ಅಣೆಕಟ್ಟೆಯಿಂದ ನದಿಗೆ ನೀರು; ಮೈದುಂಬಿದ ಜೋಗ ಜಲಪಾತ.<h3>ಬರ್ಕಣ ಜಲಪಾತ:</h3><p>ಎರಡನೇ ಎತ್ತರದ ಜಲಪಾತವಾಗಿರುವ ಬರ್ಕಣ ಜಲಪಾತ ಶಿವಮೊಗ್ಗದ ಆಗುಂಬೆಯಲ್ಲಿದೆ. ಸೀತಾ ನದಿ ಬರ್ಕಣ ಜಲಪಾತವಾಗಿ 259 ಮೀ (850 ಅಡಿ) ಎತ್ತರದಿಂದ ಧುಮುಕುತ್ತದೆ.</p><p><strong>ತಲುಪುವುದು ಹೇಗೆ?</strong></p><p>ಉಡುಪಿ ರೈಲು ನಿಲ್ದಾಣ ಹತ್ತಿರವಾಗಿದೆ. ಆಗುಂಬೆಯವರೆಗೆ ಬಸ್ ಸೇವೆ ಇದೆ. ಅಲ್ಲಿಂದ 7 ಕಿಮೀ ದೂರವನ್ನು ತಲುಪಲು ಖಾಸಗಿ ಜೀಪ್, ಆಟೋದಲ್ಲಿ ಹೋಗಬಹುದು. </p><p><strong>ವಸತಿ ವ್ಯವಸ್ಥೆ :</strong> ಅಗುಂಬೆಯಲ್ಲಿ ವಸತಿ ಗೃಹಗಳಿವೆ. ತೀರ್ಥಹಳ್ಳಿ ಮತ್ತು ಹೆಬ್ರಿಯಲ್ಲಿಯೂ ಲಭ್ಯವಿದೆ.</p>.ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಬಸ್ ವ್ಯವಸ್ಥೆ.<h3>ಜೋಗ ಜಲಪಾತ: </h3><p>ಜೋಗ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಶರಾವತಿ ನದಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. ‘ಗೆರುಸೊಪ್ಪ’ ಜಲಪಾತ ಎಂತಲೂ ಕರೆಯಲಾಗುತ್ತದೆ. ಭಾರತದ 3ನೇ ಅತೀ ಎತ್ತರದ (253 ಮೀ) ಜಲಪಾತ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಿದೆ.   </p><p>ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ಕಿನಲ್ಲಿದೆ. ರಾಜಾ, ರಾಣಿ, ರೋರರ್, ಮತ್ತು ರಾಕೆಟ್ ಎಂಬ ನಾಲ್ಕು ಭಾಗಗಳಾಗಿ ಧುಮುಕುತ್ತದೆ. </p><p><strong>ತಲುಪುವುದು ಹೇಗೆ?</strong></p><p>ಬೆಂಗಳೂರಿನಿಂದ ಬಸ್ ಸೇವೆ ಇದೆ. ಸಾಗರದಿಂದ ಕಾರು ಅಥವಾ ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು.</p><p><strong>ವಸತಿ ವ್ಯವಸ್ಥೆ:</strong> ಜೋಗ ಜಲಪಾತಕ್ಕೆ ಹತ್ತಿರವಾಗಿ  ಹೋಟೆಲ್ ಮಯೂರವಿದೆ. ಜಂಗಲ್ ಲಾಡ್ಜಸ್ ಎಂಬ ಕಾಟೇಜ್ ಶೈಲಿಯ ವಸತಿ ಲಭ್ಯವಿದೆ. ಜೋಗದಿಂದ 35 ಕಿಮೀ ದೂರದ ಸಾಗರದಲ್ಲಿ ಹಲವು ಹೋಂ ಸ್ಟೇಗಳಿವೆ.</p>.<h3>ಮಾಗೋಡು ಜಲಪಾತ: </h3><p>ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಡುವೆ ಮಾಗೋಡು ಜಲಪಾತವಿದೆ. ಈ ಜಲಪಾತ ಬೇಡ್ತಿ ಹಾಗೂ ಶಾಲ್ಮಲಾ ಎಂಬ ಎರಡು ನದಿಗಳ ಸಂಗಮದಿಂದ ರೂಪುಗೊಂಡಿದೆ. ಈ ಜಲಪಾತದ ಎತ್ತರ 200ಮೀ ಆಗಿದೆ. </p><p>ಈ ಜಲಪಾತದ ಹಾದಿ ಅತ್ಯಂತ ರೋಮಾಂಚಕಾರಿ ಹಾಗೂ ಸಾಹಸಮಯವಾಗಿದೆ. ಚಾರಣ ಮಾಡುವವರಿಗೆ ಈ ಜಲಪಾತವು ಹೇಳಿ ಮಾಡಿಸಿದ ಸ್ಥಳವಾಗಿದೆ. </p><p><strong>ತಲುಪುವುದು ಹೇಗೆ:</strong> ಬೆಂಗಳೂರಿನಿಂದ ಯಲ್ಲಾಪುರಕ್ಕೆ ಬಸ್ ಪ್ರಯಾಣ ಮಾಡಬೇಕು. ಅಲ್ಲಿಂದ ಟ್ಯಾಕ್ಸಿ ಅಥವಾ ಖಾಸಗಿ ಕಾರುಗಳ ಮೂಲಕ ತಲುಪಬಹುದು.</p><p><strong>ವಸತಿ ವ್ಯವಸ್ಥೆ:</strong> ಯಲ್ಲಾಪುರ ನಗರದಲ್ಲಿ ಹೋಟೆಲ್ಗಳು ಲಭ್ಯವಿದೆ.</p>.<h3>ಬೆಳ್ಕಲ್ ತೀರ್ಥ : </h3><p>ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಬೆಳ್ಕಲ್ ತೀರ್ಥವು ಸುಂದರವಾದ ಜಲಪಾತವಾಗಿದೆ. ಕೋರ್ಶಿ ಬೆಟ್ಟದ ನಡುವಿನಿಂದ 180ಮೀ ಎತ್ತರದಿಂದ ಈ ಜಲಪಾತ ಧುಮುಕುತ್ತದೆ. ‘ಗೋವಿಂದ ತೀರ್ಥ’ ಎಂತಲೂ ಈ ಜಲಪಾತಕ್ಕೆ ಕರೆಯುತ್ತಾರೆ.  ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. </p><p><strong>ತಲುಪುವುದು ಹೇಗೆ?</strong></p><p>ಈ ಜಲಪಾತ ಕೊಲ್ಲೂರಿನಿಂದ 25 ಕಿಮೀ ದೂರದಲ್ಲಿದೆ. ಜಲಪಾತಕ್ಕೆ ಹೋಗುವ ಕೊನೆಯ ಕೆಲವು ಕಿಮೀ ಕಾರುಗಳಿಗೆ ರಸ್ತೆಗಳು ಸಾಕಾಗುವುದಿಲ್ಲವಾದ್ದರಿಂದ ಚಾರಣ ಮಾಡಲೇಬೇಕು. ಜಲಪಾತ ಸಮೀಪ ರಸ್ತೆ ಉತ್ತಮವಾಗಿಲ್ಲದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್ ಚಾರಣ ಅಗತ್ಯ.</p><p><strong>ಭೇಟಿ ನೀಡಲು ಉತ್ತಮ ಸಮಯ</strong>: ಜೂನ್ ಮತ್ತು ಡಿಸೆಂಬರ್ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಶ್ಚಿಮ ಘಟ್ಟದ ಮಡಿಲಿನಲ್ಲಿ ಹಲವು ಜರಿಗಳು ಹಾಗೂ ಜಲಪಾತಗಳು ಉಗಮವಾಗುತ್ತವೆ. ಇವು ಪ್ರಕೃತಿಯ ಸೌಂದರ್ಯ ಹೆಚ್ಚಿಸುವುದಲ್ಲದೆ ಜೀವ ಸಂಕುಲಗಳಿಗೆ ಆಸರೆಯಾಗಿವೆ. ಪರಿಸರ ಪ್ರೇಮಿಗಳಿಗೆ ಹಾಗೂ ಚಾರಣ ಪ್ರಿಯರಿಗೆ ವಿಭಿನ್ನ ಅನುಭವ ನೀಡುತ್ತವೆ. ಕರ್ನಾಟಕ ಅತೀ ಎತ್ತರದ 5 ಜಲಪಾತಗಳು ಯಾವುವು. ಅವು ಇರುವುದು ಎಲ್ಲಿ ಎಂಬ ಮಾಹಿತಿ ಇಲ್ಲಿದೆ.</p><h3>ಕುಂಚಿಕಲ್ ಜಲಪಾತ:</h3><p>ಕರ್ನಾಟಕದ ಅತಿ ಎತ್ತರದ ಜಲಪಾತವಾಗಿರುವ ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ. ವಾರಾಹಿ ನದಿ ಕುಂಚಿಕಲ್ ಜಲಪಾತವಾಗಿ 455ಮೀ (1,494 ಅಡಿ) ಎತ್ತರದಿಂದ ಧುಮುಕುತ್ತದೆ. ಇಲ್ಲಿ ಜಲ ವಿದ್ಯುತ್ ಕೇಂದ್ರವಿದೆ. ಇಲ್ಲಿಗೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು.</p><p><strong>ತಲುಪುವುದು ಹೇಗೆ?</strong></p><p>ಈ ಜಲಪಾತ ತಲುಪಲು ಹುಲಿಕಲ್ನಿಂದ ಟ್ಯಾಕ್ಸಿ ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಹೋಗಬಹುದು ಅಥವಾ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಿಂದ ಕುಂಚಿಕಲ್ ಜಲಪಾತಕ್ಕೆ ಬಸ್ ಸೌಕರ್ಯ ಲಭ್ಯವಿದೆ. </p>.PHOTOS | ಭಾರಿ ಮಳೆ: ಮೈದುಂಬಿದ ಗೋಕಾಕ ಜಲಪಾತ ಕಂಡಿದ್ದು ಹೀಗೆ....PHOTOS: ಲಿಂಗನಮಕ್ಕಿ ಅಣೆಕಟ್ಟೆಯಿಂದ ನದಿಗೆ ನೀರು; ಮೈದುಂಬಿದ ಜೋಗ ಜಲಪಾತ.<h3>ಬರ್ಕಣ ಜಲಪಾತ:</h3><p>ಎರಡನೇ ಎತ್ತರದ ಜಲಪಾತವಾಗಿರುವ ಬರ್ಕಣ ಜಲಪಾತ ಶಿವಮೊಗ್ಗದ ಆಗುಂಬೆಯಲ್ಲಿದೆ. ಸೀತಾ ನದಿ ಬರ್ಕಣ ಜಲಪಾತವಾಗಿ 259 ಮೀ (850 ಅಡಿ) ಎತ್ತರದಿಂದ ಧುಮುಕುತ್ತದೆ.</p><p><strong>ತಲುಪುವುದು ಹೇಗೆ?</strong></p><p>ಉಡುಪಿ ರೈಲು ನಿಲ್ದಾಣ ಹತ್ತಿರವಾಗಿದೆ. ಆಗುಂಬೆಯವರೆಗೆ ಬಸ್ ಸೇವೆ ಇದೆ. ಅಲ್ಲಿಂದ 7 ಕಿಮೀ ದೂರವನ್ನು ತಲುಪಲು ಖಾಸಗಿ ಜೀಪ್, ಆಟೋದಲ್ಲಿ ಹೋಗಬಹುದು. </p><p><strong>ವಸತಿ ವ್ಯವಸ್ಥೆ :</strong> ಅಗುಂಬೆಯಲ್ಲಿ ವಸತಿ ಗೃಹಗಳಿವೆ. ತೀರ್ಥಹಳ್ಳಿ ಮತ್ತು ಹೆಬ್ರಿಯಲ್ಲಿಯೂ ಲಭ್ಯವಿದೆ.</p>.ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಬಸ್ ವ್ಯವಸ್ಥೆ.<h3>ಜೋಗ ಜಲಪಾತ: </h3><p>ಜೋಗ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಶರಾವತಿ ನದಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. ‘ಗೆರುಸೊಪ್ಪ’ ಜಲಪಾತ ಎಂತಲೂ ಕರೆಯಲಾಗುತ್ತದೆ. ಭಾರತದ 3ನೇ ಅತೀ ಎತ್ತರದ (253 ಮೀ) ಜಲಪಾತ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಿದೆ.   </p><p>ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ಕಿನಲ್ಲಿದೆ. ರಾಜಾ, ರಾಣಿ, ರೋರರ್, ಮತ್ತು ರಾಕೆಟ್ ಎಂಬ ನಾಲ್ಕು ಭಾಗಗಳಾಗಿ ಧುಮುಕುತ್ತದೆ. </p><p><strong>ತಲುಪುವುದು ಹೇಗೆ?</strong></p><p>ಬೆಂಗಳೂರಿನಿಂದ ಬಸ್ ಸೇವೆ ಇದೆ. ಸಾಗರದಿಂದ ಕಾರು ಅಥವಾ ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು.</p><p><strong>ವಸತಿ ವ್ಯವಸ್ಥೆ:</strong> ಜೋಗ ಜಲಪಾತಕ್ಕೆ ಹತ್ತಿರವಾಗಿ  ಹೋಟೆಲ್ ಮಯೂರವಿದೆ. ಜಂಗಲ್ ಲಾಡ್ಜಸ್ ಎಂಬ ಕಾಟೇಜ್ ಶೈಲಿಯ ವಸತಿ ಲಭ್ಯವಿದೆ. ಜೋಗದಿಂದ 35 ಕಿಮೀ ದೂರದ ಸಾಗರದಲ್ಲಿ ಹಲವು ಹೋಂ ಸ್ಟೇಗಳಿವೆ.</p>.<h3>ಮಾಗೋಡು ಜಲಪಾತ: </h3><p>ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಡುವೆ ಮಾಗೋಡು ಜಲಪಾತವಿದೆ. ಈ ಜಲಪಾತ ಬೇಡ್ತಿ ಹಾಗೂ ಶಾಲ್ಮಲಾ ಎಂಬ ಎರಡು ನದಿಗಳ ಸಂಗಮದಿಂದ ರೂಪುಗೊಂಡಿದೆ. ಈ ಜಲಪಾತದ ಎತ್ತರ 200ಮೀ ಆಗಿದೆ. </p><p>ಈ ಜಲಪಾತದ ಹಾದಿ ಅತ್ಯಂತ ರೋಮಾಂಚಕಾರಿ ಹಾಗೂ ಸಾಹಸಮಯವಾಗಿದೆ. ಚಾರಣ ಮಾಡುವವರಿಗೆ ಈ ಜಲಪಾತವು ಹೇಳಿ ಮಾಡಿಸಿದ ಸ್ಥಳವಾಗಿದೆ. </p><p><strong>ತಲುಪುವುದು ಹೇಗೆ:</strong> ಬೆಂಗಳೂರಿನಿಂದ ಯಲ್ಲಾಪುರಕ್ಕೆ ಬಸ್ ಪ್ರಯಾಣ ಮಾಡಬೇಕು. ಅಲ್ಲಿಂದ ಟ್ಯಾಕ್ಸಿ ಅಥವಾ ಖಾಸಗಿ ಕಾರುಗಳ ಮೂಲಕ ತಲುಪಬಹುದು.</p><p><strong>ವಸತಿ ವ್ಯವಸ್ಥೆ:</strong> ಯಲ್ಲಾಪುರ ನಗರದಲ್ಲಿ ಹೋಟೆಲ್ಗಳು ಲಭ್ಯವಿದೆ.</p>.<h3>ಬೆಳ್ಕಲ್ ತೀರ್ಥ : </h3><p>ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಬೆಳ್ಕಲ್ ತೀರ್ಥವು ಸುಂದರವಾದ ಜಲಪಾತವಾಗಿದೆ. ಕೋರ್ಶಿ ಬೆಟ್ಟದ ನಡುವಿನಿಂದ 180ಮೀ ಎತ್ತರದಿಂದ ಈ ಜಲಪಾತ ಧುಮುಕುತ್ತದೆ. ‘ಗೋವಿಂದ ತೀರ್ಥ’ ಎಂತಲೂ ಈ ಜಲಪಾತಕ್ಕೆ ಕರೆಯುತ್ತಾರೆ.  ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. </p><p><strong>ತಲುಪುವುದು ಹೇಗೆ?</strong></p><p>ಈ ಜಲಪಾತ ಕೊಲ್ಲೂರಿನಿಂದ 25 ಕಿಮೀ ದೂರದಲ್ಲಿದೆ. ಜಲಪಾತಕ್ಕೆ ಹೋಗುವ ಕೊನೆಯ ಕೆಲವು ಕಿಮೀ ಕಾರುಗಳಿಗೆ ರಸ್ತೆಗಳು ಸಾಕಾಗುವುದಿಲ್ಲವಾದ್ದರಿಂದ ಚಾರಣ ಮಾಡಲೇಬೇಕು. ಜಲಪಾತ ಸಮೀಪ ರಸ್ತೆ ಉತ್ತಮವಾಗಿಲ್ಲದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್ ಚಾರಣ ಅಗತ್ಯ.</p><p><strong>ಭೇಟಿ ನೀಡಲು ಉತ್ತಮ ಸಮಯ</strong>: ಜೂನ್ ಮತ್ತು ಡಿಸೆಂಬರ್ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>