ಶುಕ್ರವಾರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಶೃತಿ, ಈ ಕುರಿತ ಮನವಿ ಪತ್ರ ಸಲ್ಲಿಸಿದರು. ನಿಗಮವು ಆಯೋಜಿಸುವ ಪ್ಯಾಕೇಜ್ ಪ್ರವಾಸಗಳಲ್ಲಿ ಧರ್ಮಸ್ಥಳ ಭೇಟಿಯು ಪ್ರಮುಖವಾಗಿದೆ. ಪ್ಯಾಕೇಜ್ ಪ್ರವಾಸದಲ್ಲಿ ಬರುವ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆಯ ಮೂಲಕ ತ್ವರಿತವಾಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.