<p>ವಾರವೀಡಿ ಕಚೇರಿಯಲ್ಲಿ ದುಡಿದು ದಣಿವಾಗಿದ್ದರೆ ವಾರಾಂತ್ಯದಲ್ಲಿ ಸ್ವಲ್ಪ ನೆಮ್ಮದಿ ಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಬೆಂಗಳೂರಿನ ಸಮೀಪದಲ್ಲೇ ಇರುವ ಕೆಲವು ಚಾರಣದ ಸ್ಥಳಗಳನ್ನು ತಿಳಿಸಿಕೊಡುತ್ತೆವೆ. </p><p><strong>ಗುಡಿಬಂಡೆ:</strong> </p><p>ಈ ಸ್ಥಳವು 17 ನೇ ಶತಮಾನದ ಕೋಟೆಯಾಗಿದ್ದು, ಇದು ಚಾರಣ ಪ್ರಿಯರಿಗೆ ಸುಂದರ ಅನುಭವ ನೀಡುವ ತಾಣವಾಗಿದೆ. ಇದು ಬೆಂಗಳೂರಿನ ಹೊರವಲಯಲ್ಲಿದೆ.</p>. <p><strong>ಗುಡಿಬಂಡೆಯ ಪ್ರಮುಖ ಆಕರ್ಷಣೆಗಳು:</strong></p><p>ಸುಲಭ ಚಾರಣವಾಗಿರುವ ಗುಡಿಬಂಡೆಯನ್ನು ಸ್ನೇಹಿತರು ಮಾತ್ರವಲ್ಲದೇ ಕುಟುಂಬ ಸದಸ್ಯರು ಕೂಡ ಸುಲಭವಾಗಿ ತುದಿಯನ್ನು ತಲುಪುವುದು. 17ನೇ ಶತಮಾನದಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಕೋಟೆಯಲ್ಲಿ 19 ಕಲ್ಲು ಕೊಳಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. </p><p>ಇವು ಏಕಕಾಲದಲ್ಲಿ 3 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಚಾರಣಕ್ಕೆ ಹೋದವರು ಅಲ್ಲಿಯೇ ಇರುವ ಶಿವನ ದೇವಾಲಯಕ್ಕೂ ಭೇಟಿ ನೀಡಬಹುದು.</p><p><strong>ಗುಡಿಬಂಡೆಯನ್ನು ತಲುಪುವುದು ಹೇಗೆ?</strong></p><p>ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಕೇವಲ 92 ಕಿ.ಮೀ ದೂರದಲ್ಲಿದೆ. ಈ ತಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಾಗೇಪಲ್ಲಿ ಹಾಗೂ ಪೆರೇಸಂದ್ರ ಗ್ರಾಮದ ಮೂಲಕ ತಲುಪಬಹುದು. ಇಲ್ಲಿಗೆ ಟ್ಯಾಕ್ಸಿ ಅಥವಾ ಸ್ವಂತ ವಾಹನದ ಮೂಲಕ ಹೋಗಬಹುದು.</p><p><strong>ಮಿಂಚುಕಲ್ಲು ಬೆಟ್ಟ</strong></p><p>ಇದು ತುಮಕೂರು ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಹಸಿರಿನಿಂದ ತುಂಬಿರುವ ಬೆಟ್ಟ, ಕಲ್ಲಿನ ಹಾದಿಗಳು, ಸುತ್ತಲೂ ಪ್ರಶಾಂತ ವಾತಾವರಣವನ್ನು ಒಳಗೊಂಡಿದೆ.</p>.<p>ಚಾರಣ ಆರಂಭದಲ್ಲಿ ಸುಲಭ ಎನಿಸಿದರು ಹೋಗ್ತಾ ಹೋಗ್ತಾ ಕಷ್ಟದ ಹಾದಿಯಾಗಿರಲಿದೆ. ಮಿಂಚುಕಲ್ಲು ಬೆಟ್ಟಕ್ಕೆ ಹೋದವರು ಜೇನುಕಲ್ಲು ಗುಡ್ಡ, ದೇವರಾಯನದುರ್ಗವನ್ನು ವೀಕ್ಷಿಸಬಹುದು. ಮಾತ್ರವಲ್ಲ, ಬೆಟ್ಟದ ತುದಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಬರಬಹುದು.</p><p><strong>ಮಿಂಚುಕಲ್ಲು ಬೆಟ್ಟಕ್ಕೆ ಹೋಗಲು ಇರುವ ಮಾರ್ಗ:</strong></p><p>ಬೆಂಗಳೂರಿನಿಂದ ತುಮಕೂರಿಗೆ ಬಸ್ ಅಥವಾ ರೈಲಿನ ಮೂಲಕ ಹೋಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು ಮಸಾನಿಪಾಳ್ಯ ಗ್ರಾಮಕ್ಕೆ ತಲುಪಿ ಚಾರಣ ಪ್ರಾರಂಭಿಸಬಹುದು.</p><p><strong>ಹುತ್ತರಿ ಬೆಟ್ಟ:</strong></p><p>ತುಮಕೂರು ಜಿಲ್ಲೆಯಲ್ಲಿರುವ ಹುತ್ತರಿ ಬೆಟ್ಟ ಒಂದು ಸುಂದರ ಚಾರಣದ ತಾಣವಾಗಿದೆ. ಈ ಕೋಟೆಯನ್ನು 16ನೇ ಶತಮಾನದಲ್ಲಿ ವಿಜಯನಗರದ ಸಾಮಂತರಾಗಿದ್ದ ಕೆಂಪೇಗೌಡರು ನಿರ್ಮಿಸಿದ್ದಾರೆ. </p>. <p>ಇದು ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದಲ್ಲಿದ್ದು, ಬೆಟ್ಟದ ತುದಿಯಲ್ಲಿ ಶಂಕರೇಶ್ವರ ದೇವಾಲಯ ಹಾಗೂ ನಂದಿ ಮತ್ತು ಆಂಜನೇಯನ ವಿಗ್ರಹಳನ್ನು ನೋಡಬಹುದು.</p><p><strong>ಹುತ್ತರಿ ಬೆಟ್ಟಕ್ಕೆ ತಲುಪಲು ಇರುವ ಮಾರ್ಗಗಳು:</strong></p><p>ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 75 (NH75) ಅಥವಾ ಕುಣಿಗಲ್ವರೆಗೆ ರೈಲಿನಲ್ಲಿ ಪ್ರಯಾಣಿಸಿ ಹೆಗ್ಗಡ ದೇವನಕೋಟೆ ಅಥವಾ ಹುಲಿಯೂರು ದುರ್ಗವನ್ನು ತಲುಪಬಹುದು. ಸ್ವಂತ ವಾಹನ ಇದ್ದರೆ ಅದರ ಮೂಲಕ ಪ್ರಯಾಣಿಸುವುದು ಉತ್ತಮ.</p><p><strong>ನಿಜಗಲ್ ಬೆಟ್ಟ ಅಥವಾ ಸಿದ್ದರ ಬೆಟ್ಟ</strong></p><p>ನಿಜಗಲ್ ಬೆಟ್ಟ /ಸಿದ್ದರ ಬೆಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದು, ಈ ಚಾರಣ ತಾಣವು ಬೆಂಗಳೂರಿನಿಂದ 103 ಕಿ.ಮೀ ದೂರದಲ್ಲಿದೆ. ಐತಿಹಾಸಿಕವಾಗಿ ಕಳೆದು ಹೋಗಿರುವ ಅವಶೇಷಗಳು, ದೇವಾಲಯಗಳು ಮತ್ತು ದರ್ಗಾವನ್ನು ಇಲ್ಲಿ ಕಾಣಬಹುದು. </p>. <p>ಧಾರ್ಮಿಕ ಸಾಮರಸ್ಯವನ್ನು ಸೂಚಿಸುವ ಈ ಬೆಟ್ಟದ ತುದಿಯಲ್ಲಿ, ಒಂದು ಹನುಮಾನ್ ದೇವಸ್ಥಾನ ಹಾಗೂ ಒಂದು ದರ್ಗಾ ಇರುವುದನ್ನು ಕಾಣಬಹದು. ಚಾರಣಕ್ಕೆ ಹೋಗುವವರು ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.</p><p><strong>ನಿಜಗಲ್ ಬೆಟ್ಟ ತಲುಪಲು ಇರುವ ಮಾರ್ಗಗಳು:</strong></p><p>ಬೆಂಗಳೂರಿನಿಂದ ರೈಲು, ಬಸ್ ಅಥವಾ ಸ್ವಂತ ವಾಹನದಲ್ಲಿ ದಾಬಸ್ ಪೇಟೆ ತಲುಪಿ ನಂತರ ಹೆದ್ದಾರಿಯಲ್ಲಿರುವ ಕಾಮತ್ ಅಪ್ಚಾರ್ ಮೂಲಕ ಹೋಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾರವೀಡಿ ಕಚೇರಿಯಲ್ಲಿ ದುಡಿದು ದಣಿವಾಗಿದ್ದರೆ ವಾರಾಂತ್ಯದಲ್ಲಿ ಸ್ವಲ್ಪ ನೆಮ್ಮದಿ ಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಬೆಂಗಳೂರಿನ ಸಮೀಪದಲ್ಲೇ ಇರುವ ಕೆಲವು ಚಾರಣದ ಸ್ಥಳಗಳನ್ನು ತಿಳಿಸಿಕೊಡುತ್ತೆವೆ. </p><p><strong>ಗುಡಿಬಂಡೆ:</strong> </p><p>ಈ ಸ್ಥಳವು 17 ನೇ ಶತಮಾನದ ಕೋಟೆಯಾಗಿದ್ದು, ಇದು ಚಾರಣ ಪ್ರಿಯರಿಗೆ ಸುಂದರ ಅನುಭವ ನೀಡುವ ತಾಣವಾಗಿದೆ. ಇದು ಬೆಂಗಳೂರಿನ ಹೊರವಲಯಲ್ಲಿದೆ.</p>. <p><strong>ಗುಡಿಬಂಡೆಯ ಪ್ರಮುಖ ಆಕರ್ಷಣೆಗಳು:</strong></p><p>ಸುಲಭ ಚಾರಣವಾಗಿರುವ ಗುಡಿಬಂಡೆಯನ್ನು ಸ್ನೇಹಿತರು ಮಾತ್ರವಲ್ಲದೇ ಕುಟುಂಬ ಸದಸ್ಯರು ಕೂಡ ಸುಲಭವಾಗಿ ತುದಿಯನ್ನು ತಲುಪುವುದು. 17ನೇ ಶತಮಾನದಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಕೋಟೆಯಲ್ಲಿ 19 ಕಲ್ಲು ಕೊಳಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. </p><p>ಇವು ಏಕಕಾಲದಲ್ಲಿ 3 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಚಾರಣಕ್ಕೆ ಹೋದವರು ಅಲ್ಲಿಯೇ ಇರುವ ಶಿವನ ದೇವಾಲಯಕ್ಕೂ ಭೇಟಿ ನೀಡಬಹುದು.</p><p><strong>ಗುಡಿಬಂಡೆಯನ್ನು ತಲುಪುವುದು ಹೇಗೆ?</strong></p><p>ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಕೇವಲ 92 ಕಿ.ಮೀ ದೂರದಲ್ಲಿದೆ. ಈ ತಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಾಗೇಪಲ್ಲಿ ಹಾಗೂ ಪೆರೇಸಂದ್ರ ಗ್ರಾಮದ ಮೂಲಕ ತಲುಪಬಹುದು. ಇಲ್ಲಿಗೆ ಟ್ಯಾಕ್ಸಿ ಅಥವಾ ಸ್ವಂತ ವಾಹನದ ಮೂಲಕ ಹೋಗಬಹುದು.</p><p><strong>ಮಿಂಚುಕಲ್ಲು ಬೆಟ್ಟ</strong></p><p>ಇದು ತುಮಕೂರು ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಹಸಿರಿನಿಂದ ತುಂಬಿರುವ ಬೆಟ್ಟ, ಕಲ್ಲಿನ ಹಾದಿಗಳು, ಸುತ್ತಲೂ ಪ್ರಶಾಂತ ವಾತಾವರಣವನ್ನು ಒಳಗೊಂಡಿದೆ.</p>.<p>ಚಾರಣ ಆರಂಭದಲ್ಲಿ ಸುಲಭ ಎನಿಸಿದರು ಹೋಗ್ತಾ ಹೋಗ್ತಾ ಕಷ್ಟದ ಹಾದಿಯಾಗಿರಲಿದೆ. ಮಿಂಚುಕಲ್ಲು ಬೆಟ್ಟಕ್ಕೆ ಹೋದವರು ಜೇನುಕಲ್ಲು ಗುಡ್ಡ, ದೇವರಾಯನದುರ್ಗವನ್ನು ವೀಕ್ಷಿಸಬಹುದು. ಮಾತ್ರವಲ್ಲ, ಬೆಟ್ಟದ ತುದಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಬರಬಹುದು.</p><p><strong>ಮಿಂಚುಕಲ್ಲು ಬೆಟ್ಟಕ್ಕೆ ಹೋಗಲು ಇರುವ ಮಾರ್ಗ:</strong></p><p>ಬೆಂಗಳೂರಿನಿಂದ ತುಮಕೂರಿಗೆ ಬಸ್ ಅಥವಾ ರೈಲಿನ ಮೂಲಕ ಹೋಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು ಮಸಾನಿಪಾಳ್ಯ ಗ್ರಾಮಕ್ಕೆ ತಲುಪಿ ಚಾರಣ ಪ್ರಾರಂಭಿಸಬಹುದು.</p><p><strong>ಹುತ್ತರಿ ಬೆಟ್ಟ:</strong></p><p>ತುಮಕೂರು ಜಿಲ್ಲೆಯಲ್ಲಿರುವ ಹುತ್ತರಿ ಬೆಟ್ಟ ಒಂದು ಸುಂದರ ಚಾರಣದ ತಾಣವಾಗಿದೆ. ಈ ಕೋಟೆಯನ್ನು 16ನೇ ಶತಮಾನದಲ್ಲಿ ವಿಜಯನಗರದ ಸಾಮಂತರಾಗಿದ್ದ ಕೆಂಪೇಗೌಡರು ನಿರ್ಮಿಸಿದ್ದಾರೆ. </p>. <p>ಇದು ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದಲ್ಲಿದ್ದು, ಬೆಟ್ಟದ ತುದಿಯಲ್ಲಿ ಶಂಕರೇಶ್ವರ ದೇವಾಲಯ ಹಾಗೂ ನಂದಿ ಮತ್ತು ಆಂಜನೇಯನ ವಿಗ್ರಹಳನ್ನು ನೋಡಬಹುದು.</p><p><strong>ಹುತ್ತರಿ ಬೆಟ್ಟಕ್ಕೆ ತಲುಪಲು ಇರುವ ಮಾರ್ಗಗಳು:</strong></p><p>ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 75 (NH75) ಅಥವಾ ಕುಣಿಗಲ್ವರೆಗೆ ರೈಲಿನಲ್ಲಿ ಪ್ರಯಾಣಿಸಿ ಹೆಗ್ಗಡ ದೇವನಕೋಟೆ ಅಥವಾ ಹುಲಿಯೂರು ದುರ್ಗವನ್ನು ತಲುಪಬಹುದು. ಸ್ವಂತ ವಾಹನ ಇದ್ದರೆ ಅದರ ಮೂಲಕ ಪ್ರಯಾಣಿಸುವುದು ಉತ್ತಮ.</p><p><strong>ನಿಜಗಲ್ ಬೆಟ್ಟ ಅಥವಾ ಸಿದ್ದರ ಬೆಟ್ಟ</strong></p><p>ನಿಜಗಲ್ ಬೆಟ್ಟ /ಸಿದ್ದರ ಬೆಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದು, ಈ ಚಾರಣ ತಾಣವು ಬೆಂಗಳೂರಿನಿಂದ 103 ಕಿ.ಮೀ ದೂರದಲ್ಲಿದೆ. ಐತಿಹಾಸಿಕವಾಗಿ ಕಳೆದು ಹೋಗಿರುವ ಅವಶೇಷಗಳು, ದೇವಾಲಯಗಳು ಮತ್ತು ದರ್ಗಾವನ್ನು ಇಲ್ಲಿ ಕಾಣಬಹುದು. </p>. <p>ಧಾರ್ಮಿಕ ಸಾಮರಸ್ಯವನ್ನು ಸೂಚಿಸುವ ಈ ಬೆಟ್ಟದ ತುದಿಯಲ್ಲಿ, ಒಂದು ಹನುಮಾನ್ ದೇವಸ್ಥಾನ ಹಾಗೂ ಒಂದು ದರ್ಗಾ ಇರುವುದನ್ನು ಕಾಣಬಹದು. ಚಾರಣಕ್ಕೆ ಹೋಗುವವರು ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.</p><p><strong>ನಿಜಗಲ್ ಬೆಟ್ಟ ತಲುಪಲು ಇರುವ ಮಾರ್ಗಗಳು:</strong></p><p>ಬೆಂಗಳೂರಿನಿಂದ ರೈಲು, ಬಸ್ ಅಥವಾ ಸ್ವಂತ ವಾಹನದಲ್ಲಿ ದಾಬಸ್ ಪೇಟೆ ತಲುಪಿ ನಂತರ ಹೆದ್ದಾರಿಯಲ್ಲಿರುವ ಕಾಮತ್ ಅಪ್ಚಾರ್ ಮೂಲಕ ಹೋಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>