ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ನೀಡದ ‘ಮುದ್ರಾ’ ಯೋಜನೆ: ಪಿ.ಚಿದಂಬರಂ ಟೀಕೆ

Last Updated 9 ಏಪ್ರಿಲ್ 2023, 12:41 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನ ಮಂತ್ರಿ ‘ಮುದ್ರಾ’ ಯೋಜನೆಯಡಿ ಶೇ 83ರಷ್ಟು ಫಲಾನುಭವಿಗಳಿಗೆ ಗರಿಷ್ಠ ₹ 50 ಸಾವಿರ ಸಾಲ ನೀಡಿದ್ದು, ಈ ಮೊತ್ತದಲ್ಲಿ ಯಾವ ರೀತಿ ವಹಿವಾಟು ಮಾಡುವುದು ಸಾಧ್ಯ’ ಎಂದು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

‘ಮುದ್ರಾ‘ ಯೋಜನೆ ಜಾರಿಗೊಂಡು 8 ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನಸೆಳೆದಿರುವ ಅವರು, ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಯೋಜನೆಯಡಿ ಒಟ್ಟು ₹ 23.3 ಲಕ್ಷ ಕೋಟಿ ಅನ್ನು 40.82 ಕೋಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು.

ಈ ಕುರಿತ ಟ್ವೀಟ್‌ನಲ್ಲಿ ಅವರು, ‘ಮಂಜೂರಾದ ಒಟ್ಟ ಸಾಲದ ಮೊತ್ತ ಗಮನಸೆಳೆಯಲಿದೆ. ಆದರೆ, ಶೇ 83 ಪ್ರಕರಣಗಳಲ್ಲಿ ಗರಿಷ್ಠ ಸಾಲ ₹ 50 ಸಾವಿರ ಎಂದು ತಿಳಿದಾಗ ಬೇಸರವಾಗಲಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT