<p><strong>ನವದೆಹಲಿ:</strong> ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಅಣು ಬಾಂಬ್ನಂತಹ ಪುರಾವೆ ಇರುವುದಾಗಿ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗ ಮಗದೊಂದು ಹೇಳಿಕೆ ನೀಡಿದ್ದು, 'ಅಭಿ ಪಿಕ್ಚರ್ ಬಾಕಿ ಹೈ' (ಚಿತ್ರ ಇನ್ನೂ ಬಾಕಿ ಇದೆ) ಎಂದಿದ್ದಾರೆ. </p><p>ಮತದಾರರ ಪಟ್ಟಿಯಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ ರಾಹುಲ್ ಈ ರೀತಿಯಾಗಿ ನುಡಿದ್ದಾರೆ. </p><p>ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, 'ಒಬ್ಬ ವ್ಯಕ್ತಿ, ಒಂದು ಮತ' ಕರ್ತವ್ಯವನ್ನು ಆಯೋಗ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. </p><p>'ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮತ ಕಳ್ಳತನ ನಡೆದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಕಳವು ನಡೆದಿದೆ. ಇದನ್ನು ದೇಶೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೂ ಈ ವಿಷಯ ಗೊತ್ತಿದೆ. ನಮಗೂ ಗೊತ್ತಿದೆ' ಎಂದಿದ್ದಾರೆ. </p><p>'ಮೊದಲು ಸಾಕ್ಷ್ಯಗಳು ಇರಲಿಲ್ಲ. ಆದರೆ ನಮ್ಮ ಬಳಿಯೀಗ ಪುರಾವೆಗಳಿವೆ. 'ಒಬ್ಬ ವ್ಯಕ್ತಿ, ಒಂದು ಮತ' ಸಂವಿಧಾನದ ಅಡಿಪಾಯವಾಗಿದೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ. </p><p>ಮತ ಕಳವು ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಪಕ್ಷಗಳ ನಾಯಕರು ಇಂದು (ಮಂಗಳವಾರ) ಕೂಡ ಪ್ರತಿಭಟನೆ ನಡೆಸಿದ್ದಾರೆ. </p>.ರಾಹುಲ್ ಗಾಂಧಿ ಅವರ ಗಂಭೀರವಾದ ಪ್ರಶ್ನೆಗಳಿಗೆ ಆಯೋಗ ಉತ್ತರ ನೀಡಬೇಕಿದೆ: ತರೂರ್.ಮತಗಳ್ಳತನ | 'ಅಣು ಬಾಂಬ್' ಇದೆ ಎಂದ ರಾಹುಲ್; ನಿರ್ಲಕ್ಷಿಸಿದ ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಅಣು ಬಾಂಬ್ನಂತಹ ಪುರಾವೆ ಇರುವುದಾಗಿ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗ ಮಗದೊಂದು ಹೇಳಿಕೆ ನೀಡಿದ್ದು, 'ಅಭಿ ಪಿಕ್ಚರ್ ಬಾಕಿ ಹೈ' (ಚಿತ್ರ ಇನ್ನೂ ಬಾಕಿ ಇದೆ) ಎಂದಿದ್ದಾರೆ. </p><p>ಮತದಾರರ ಪಟ್ಟಿಯಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ ರಾಹುಲ್ ಈ ರೀತಿಯಾಗಿ ನುಡಿದ್ದಾರೆ. </p><p>ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, 'ಒಬ್ಬ ವ್ಯಕ್ತಿ, ಒಂದು ಮತ' ಕರ್ತವ್ಯವನ್ನು ಆಯೋಗ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. </p><p>'ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮತ ಕಳ್ಳತನ ನಡೆದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಕಳವು ನಡೆದಿದೆ. ಇದನ್ನು ದೇಶೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೂ ಈ ವಿಷಯ ಗೊತ್ತಿದೆ. ನಮಗೂ ಗೊತ್ತಿದೆ' ಎಂದಿದ್ದಾರೆ. </p><p>'ಮೊದಲು ಸಾಕ್ಷ್ಯಗಳು ಇರಲಿಲ್ಲ. ಆದರೆ ನಮ್ಮ ಬಳಿಯೀಗ ಪುರಾವೆಗಳಿವೆ. 'ಒಬ್ಬ ವ್ಯಕ್ತಿ, ಒಂದು ಮತ' ಸಂವಿಧಾನದ ಅಡಿಪಾಯವಾಗಿದೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ. </p><p>ಮತ ಕಳವು ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಪಕ್ಷಗಳ ನಾಯಕರು ಇಂದು (ಮಂಗಳವಾರ) ಕೂಡ ಪ್ರತಿಭಟನೆ ನಡೆಸಿದ್ದಾರೆ. </p>.ರಾಹುಲ್ ಗಾಂಧಿ ಅವರ ಗಂಭೀರವಾದ ಪ್ರಶ್ನೆಗಳಿಗೆ ಆಯೋಗ ಉತ್ತರ ನೀಡಬೇಕಿದೆ: ತರೂರ್.ಮತಗಳ್ಳತನ | 'ಅಣು ಬಾಂಬ್' ಇದೆ ಎಂದ ರಾಹುಲ್; ನಿರ್ಲಕ್ಷಿಸಿದ ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>