<p><strong>ನವದೆಹಲಿ:</strong> ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ವಂಚನೆ ಮತ್ತು ಮೂರ್ಖತನದ ರಾಜಕೀಯ ಬೇಕಿಲ್ಲ’ ಎಂದು ಹೇಳಿದರು.</p>.<p>ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ ವಿಜಯೋತ್ಸವದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಎಎಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.</p>.<p>‘ದೆಹಲಿಯ ಜನರು ಎಎಪಿಗೆ ನಿರ್ಗಮನದ ಬಾಗಿಲು ತೋರಿಸಿದ್ದಾರೆ. ಇನ್ನು ಮುಂದೆ ಡಬಲ್ ಎಂಜಿನ್ ಸರ್ಕಾರವು ದೆಹಲಿಯ ಅಭಿವೃದ್ಧಿಯ ವೇಗವನ್ನು ಇಮ್ಮಡಿಗೊಳಿಸಲಿದೆ. ದೆಹಲಿಯ ಜನರು ‘ಶಾರ್ಟ್-ಕಟ್ಗಳ ರಾಜಕೀಯವನ್ನು ಶಾರ್ಟ್-ಸರ್ಕ್ಯೂಟ್ ಮಾಡಿದ್ದಾರೆ’. ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಸುಳ್ಳಿಗೆ ಜಾಗವಿಲ್ಲ ಎಂಬುದನ್ನು ಜನಾದೇಶ ಸ್ಪಷ್ಟಪಡಿಸಿದೆ’ ಎಂದಿದ್ದಾರೆ. </p>.<p>‘ಮಹಿಳಾ ಶಕ್ತಿಯು ಯಾವಾಗಲೂ ನನ್ನನ್ನು ಆಶೀರ್ವದಿಸಿದೆ. ನಾನು ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ದೆಹಲಿಯಲ್ಲೂ ಆ ಕೆಲಸ ಮಾಡುತ್ತೇನೆ. ದೆಹಲಿ ಮತ್ತು ಸುತ್ತಮುತ್ತಲಿನ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಇದೆ. ಸ್ವಾತಂತ್ರ್ಯದ ನಂತರ ಪಕ್ಷವು ಮೊದಲ ಬಾರಿಗೆ ಈ ಸಾಧನೆ ಮಾಡಿದೆ’ ಎಂದರು.</p>.<p>‘ಕಾಂಗ್ರೆಸ್ ಕೈಹಿಡಿದವರ ಅಂತ್ಯ ಖಚಿತ’: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ, ‘ಮಿತ್ರ ಪಕ್ಷಗಳನ್ನು ಒಂದೊಂದಾಗಿ ಮುಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಕುಟುಕಿದರು.</p>.<p>ಕಾಂಗ್ರೆಸ್ಅನ್ನು ‘ನಗರ ನಕ್ಸಲರ ಪಕ್ಷ’ ಮತ್ತು ‘ಪರಾವಲಂಬಿ’ ಎಂದು ಲೇವಡಿ ಮಾಡಿದ ಅವರು, ‘ಕಾಂಗ್ರೆಸ್ನವರು ಅವರ ಮಿತ್ರ ಪಕ್ಷದವರ ಕಾರ್ಯಸೂಚಿ ಮತ್ತು ಮತ ಬ್ಯಾಂಕ್ಗಳಿಗೆ ಕನ್ನ ಹಾಕುತ್ತಾರೆ. ಯಾರೇ ಕಾಂಗ್ರೆಸ್ನ ಕೈ ಹಿಡಿದರೂ ಅವರ ಅಂತ್ಯ ಅನಿವಾರ್ಯ ಎಂಬುದು ಈ ಸ್ಪಷ್ಟವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ವಂಚನೆ ಮತ್ತು ಮೂರ್ಖತನದ ರಾಜಕೀಯ ಬೇಕಿಲ್ಲ’ ಎಂದು ಹೇಳಿದರು.</p>.<p>ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ ವಿಜಯೋತ್ಸವದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಎಎಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.</p>.<p>‘ದೆಹಲಿಯ ಜನರು ಎಎಪಿಗೆ ನಿರ್ಗಮನದ ಬಾಗಿಲು ತೋರಿಸಿದ್ದಾರೆ. ಇನ್ನು ಮುಂದೆ ಡಬಲ್ ಎಂಜಿನ್ ಸರ್ಕಾರವು ದೆಹಲಿಯ ಅಭಿವೃದ್ಧಿಯ ವೇಗವನ್ನು ಇಮ್ಮಡಿಗೊಳಿಸಲಿದೆ. ದೆಹಲಿಯ ಜನರು ‘ಶಾರ್ಟ್-ಕಟ್ಗಳ ರಾಜಕೀಯವನ್ನು ಶಾರ್ಟ್-ಸರ್ಕ್ಯೂಟ್ ಮಾಡಿದ್ದಾರೆ’. ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಸುಳ್ಳಿಗೆ ಜಾಗವಿಲ್ಲ ಎಂಬುದನ್ನು ಜನಾದೇಶ ಸ್ಪಷ್ಟಪಡಿಸಿದೆ’ ಎಂದಿದ್ದಾರೆ. </p>.<p>‘ಮಹಿಳಾ ಶಕ್ತಿಯು ಯಾವಾಗಲೂ ನನ್ನನ್ನು ಆಶೀರ್ವದಿಸಿದೆ. ನಾನು ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ದೆಹಲಿಯಲ್ಲೂ ಆ ಕೆಲಸ ಮಾಡುತ್ತೇನೆ. ದೆಹಲಿ ಮತ್ತು ಸುತ್ತಮುತ್ತಲಿನ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಇದೆ. ಸ್ವಾತಂತ್ರ್ಯದ ನಂತರ ಪಕ್ಷವು ಮೊದಲ ಬಾರಿಗೆ ಈ ಸಾಧನೆ ಮಾಡಿದೆ’ ಎಂದರು.</p>.<p>‘ಕಾಂಗ್ರೆಸ್ ಕೈಹಿಡಿದವರ ಅಂತ್ಯ ಖಚಿತ’: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ, ‘ಮಿತ್ರ ಪಕ್ಷಗಳನ್ನು ಒಂದೊಂದಾಗಿ ಮುಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಕುಟುಕಿದರು.</p>.<p>ಕಾಂಗ್ರೆಸ್ಅನ್ನು ‘ನಗರ ನಕ್ಸಲರ ಪಕ್ಷ’ ಮತ್ತು ‘ಪರಾವಲಂಬಿ’ ಎಂದು ಲೇವಡಿ ಮಾಡಿದ ಅವರು, ‘ಕಾಂಗ್ರೆಸ್ನವರು ಅವರ ಮಿತ್ರ ಪಕ್ಷದವರ ಕಾರ್ಯಸೂಚಿ ಮತ್ತು ಮತ ಬ್ಯಾಂಕ್ಗಳಿಗೆ ಕನ್ನ ಹಾಕುತ್ತಾರೆ. ಯಾರೇ ಕಾಂಗ್ರೆಸ್ನ ಕೈ ಹಿಡಿದರೂ ಅವರ ಅಂತ್ಯ ಅನಿವಾರ್ಯ ಎಂಬುದು ಈ ಸ್ಪಷ್ಟವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>