<p><strong>ನವದೆಹಲಿ:</strong> ದೆಹಲಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿಲ್ಲ ಎಂದು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.</p><p>ದೆಹಲಿಯ ಶಾಸ್ತ್ರಿ ಪಾರ್ಕ್ನಲ್ಲಿರುವ ಪರಿಹಾರ ಶಿಬಿರಕ್ಕೆ ಕೇಜ್ರಿವಾಲ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.</p><p>ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅಫ್ಗಾನಿಸ್ತಾನಕ್ಕೆ ಭಾರತ ಸಹಾಯದ ಹಸ್ತ ಚಾಚಿದೆ. ಪರಿಹಾರ ಸಮಗ್ರಿಗಳನ್ನು ಕಳುಹಿಸಿದೆ. ಆದರೆ, ದೆಹಲಿ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳು ಲಭಿಸುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.</p>.ಚಂದ್ರಗ್ರಹಣ 2025: ಅಶುಭ ಫಲವಿದ್ದರೆ ಸುಲಭ ಪರಿಹಾರ ಕ್ರಮಗಳು ಇಲ್ಲಿವೆ.Lunar Eclipse | ಚಂದ್ರಗ್ರಹಣ ಫಲಾಫಲ: ನಿಮ್ಮ ರಾಶಿಗೆ ಶುಭವೇ ಅಶುಭವೇ?. <p>ಬೇರೆ ದೇಶಗಳಿಗೆ ಸಹಾಯ ಮಾಡುವುದು ಉತ್ತಮವಾದ ವಿಷಯವೇ. ಆದರೆ ಕೇಂದ್ರ ಸರ್ಕಾರ ದೆಹಲಿಗೆ ಪರಿಹಾರ ಕಾರ್ಯವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಪರಿಹಾರ ಶಿಬಿರಗಳಲ್ಲಿ ಆಹಾರ ವಿತರಿಸುವುದರಲ್ಲಿ ಹಾಗೂ ಶಿಬಿರಗಳನ್ನು ಸ್ಥಾಪಿಸುವುದರಲ್ಲಿಯೂ ವಿಳಂಬವಾಗಿದೆ. ಈ ಕ್ರಮ ಸರಿಯಲ್ಲ. ಸರಿಯಾದ ಸಮಯಕ್ಕೆ ಸಂತ್ರಸ್ತರಿಗೆ ನೆರವು ಒದಗಿಸಿ, ಪ್ರವಾಹ ಪೀಡಿತ ಉತ್ತರ ಭಾರತದ ರಾಜ್ಯಗಳಿಗೆ ತ್ವರಿತವಾಗಿ ಪರಿಹಾರ ಘೋಷಿಸಿ ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.</p><p>ಪರಿಹಾರ ಶಿಬಿರಗಳಲ್ಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೋಡಿದ್ದೇನೆ. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಎಲ್ಲೆಡೆ ಸೊಳ್ಳೆಗಳಿವೆ. ಮಳೆ ಬರುತ್ತಿದೆ. ಆದರೆ ನಿನ್ನೆಯಷ್ಟೇ ಶಿಬಿರಗಳನ್ನು ನಿರ್ಮಿಸಿಲಾಯಿತು. ಜನರ ಸಮಸ್ಯೆಗಳಿಗೆ ಅವಶ್ಯವಾಗಿ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.</p><p>ಎಎಪಿ ಆಡಳಿತವಿರುವ ಪಂಜಾಬ್ಗೆ ಕೇಜ್ರಿವಾಲ್ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.</p>.ಒಟಿಟಿಗೆ ಬಂತು ರಜನಿಕಾಂತ್ ’ಕೂಲಿ’ ಸಿನಿಮಾ.ಅಕ್ರಮ ಆರೋಪ: ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ. <p>ಎಎಪಿ ಆಡಳಿತವಿರುವ ಪಂಜಾಬ್ಗೆ ಕೇಜ್ರಿವಾಲ್ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.</p>.ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ.ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.‘ಏಳುಮಲೆ’ ಸಿನಿಮಾ ವಿಮರ್ಶೆ: ನಿರ್ದೇಶನದ ಸಾಮರ್ಥ್ಯ ಪ್ರದರ್ಶನ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿಲ್ಲ ಎಂದು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.</p><p>ದೆಹಲಿಯ ಶಾಸ್ತ್ರಿ ಪಾರ್ಕ್ನಲ್ಲಿರುವ ಪರಿಹಾರ ಶಿಬಿರಕ್ಕೆ ಕೇಜ್ರಿವಾಲ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.</p><p>ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅಫ್ಗಾನಿಸ್ತಾನಕ್ಕೆ ಭಾರತ ಸಹಾಯದ ಹಸ್ತ ಚಾಚಿದೆ. ಪರಿಹಾರ ಸಮಗ್ರಿಗಳನ್ನು ಕಳುಹಿಸಿದೆ. ಆದರೆ, ದೆಹಲಿ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳು ಲಭಿಸುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.</p>.ಚಂದ್ರಗ್ರಹಣ 2025: ಅಶುಭ ಫಲವಿದ್ದರೆ ಸುಲಭ ಪರಿಹಾರ ಕ್ರಮಗಳು ಇಲ್ಲಿವೆ.Lunar Eclipse | ಚಂದ್ರಗ್ರಹಣ ಫಲಾಫಲ: ನಿಮ್ಮ ರಾಶಿಗೆ ಶುಭವೇ ಅಶುಭವೇ?. <p>ಬೇರೆ ದೇಶಗಳಿಗೆ ಸಹಾಯ ಮಾಡುವುದು ಉತ್ತಮವಾದ ವಿಷಯವೇ. ಆದರೆ ಕೇಂದ್ರ ಸರ್ಕಾರ ದೆಹಲಿಗೆ ಪರಿಹಾರ ಕಾರ್ಯವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಪರಿಹಾರ ಶಿಬಿರಗಳಲ್ಲಿ ಆಹಾರ ವಿತರಿಸುವುದರಲ್ಲಿ ಹಾಗೂ ಶಿಬಿರಗಳನ್ನು ಸ್ಥಾಪಿಸುವುದರಲ್ಲಿಯೂ ವಿಳಂಬವಾಗಿದೆ. ಈ ಕ್ರಮ ಸರಿಯಲ್ಲ. ಸರಿಯಾದ ಸಮಯಕ್ಕೆ ಸಂತ್ರಸ್ತರಿಗೆ ನೆರವು ಒದಗಿಸಿ, ಪ್ರವಾಹ ಪೀಡಿತ ಉತ್ತರ ಭಾರತದ ರಾಜ್ಯಗಳಿಗೆ ತ್ವರಿತವಾಗಿ ಪರಿಹಾರ ಘೋಷಿಸಿ ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.</p><p>ಪರಿಹಾರ ಶಿಬಿರಗಳಲ್ಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೋಡಿದ್ದೇನೆ. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಎಲ್ಲೆಡೆ ಸೊಳ್ಳೆಗಳಿವೆ. ಮಳೆ ಬರುತ್ತಿದೆ. ಆದರೆ ನಿನ್ನೆಯಷ್ಟೇ ಶಿಬಿರಗಳನ್ನು ನಿರ್ಮಿಸಿಲಾಯಿತು. ಜನರ ಸಮಸ್ಯೆಗಳಿಗೆ ಅವಶ್ಯವಾಗಿ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.</p><p>ಎಎಪಿ ಆಡಳಿತವಿರುವ ಪಂಜಾಬ್ಗೆ ಕೇಜ್ರಿವಾಲ್ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.</p>.ಒಟಿಟಿಗೆ ಬಂತು ರಜನಿಕಾಂತ್ ’ಕೂಲಿ’ ಸಿನಿಮಾ.ಅಕ್ರಮ ಆರೋಪ: ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ. <p>ಎಎಪಿ ಆಡಳಿತವಿರುವ ಪಂಜಾಬ್ಗೆ ಕೇಜ್ರಿವಾಲ್ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.</p>.ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ.ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.‘ಏಳುಮಲೆ’ ಸಿನಿಮಾ ವಿಮರ್ಶೆ: ನಿರ್ದೇಶನದ ಸಾಮರ್ಥ್ಯ ಪ್ರದರ್ಶನ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>