<p>ಸೆಪ್ಟೆಂಬರ್ 7, 2025, ರಂದು ರಾಹು ಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈಗಾಗಲೇ ಯಾವ ರಾಶಿಗೆ ಶುಭ ಮತ್ತು ಅಶುಭ ಎಂಬ ಲೇಖನ ಪ್ರಕಟಿಸಲಾಗಿದೆ. ಈ ಗ್ರಹಣದ ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಅನುಕೂಲಕರ ಶಕ್ತಿಗಳನ್ನು ಪಡೆಯಲು ಕೆಲವು ಸರಳ ಆಚರಣೆಗಳನ್ನು ಮಾಡಬಹುದು.</p>.Lunar Eclipse | ಚಂದ್ರಗ್ರಹಣ ಫಲಾಫಲ: ನಿಮ್ಮ ರಾಶಿಗೆ ಶುಭವೇ ಅಶುಭವೇ?.<p><strong>1. ಗ್ರಹಣ ಸಮಯದಲ್ಲಿ</strong> </p><p>· ಗ್ರಹಣದ ಸಮಯದಲ್ಲಿ (7 ರಾತ್ರಿ 09-45ರಿಂದ 8ನೇ ತಾರೀಕು ಬೆಳಿಗ್ಗೆ 1:27ರವರೆಗೆ) ನಿದ್ರೆ, ಆಹಾರ ಸೇವನೆ, ಪ್ರಯಾಣ ಮಾಡಬಾರದು. ಆ ಸಮಯದಲ್ಲಿ ಸ್ನಾನ, ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಬೇಕು. ದಾನ ಕೊಡುವ ವಸ್ತುಗಳ ಮೇಲೆ ತುಳಸಿ ನೀರು ಬಿಟ್ಟು ಇಡಬೇಕು.</p><p>· ಈ ಸಮಯದಲ್ಲಿ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸಬೇಡಿ. ಗರ್ಭಿಣಿ ಮಹಿಳೆಯರು, ವೃದ್ಧರು ಮತ್ತು ರೋಗಿಗಳು ಹಣ್ಣು, ಹಾಲು ಇತ್ಯಾದಿ ಸೇವಿಸಬಹುದು. ಆದರೆ ಅದಕ್ಕೂ ಮುಂಚೆ ತುಸು ತುಳಸಿ ಎಲೆ ಅಥವಾ ದೂರ್ವೆ (ಗರಿಕೆ) ಹಾಕಿ ಪವಿತ್ರಗೊಳಿಸಬೇಕು.</p><p>· ಗ್ರಹಣದ ಸಮಯದಲ್ಲಿ ಮಲಗಬಾರದು. ಜಪ ಮಾಡಬೇಕು ಅಥವಾ ಧ್ಯಾನ ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ.</p><p>· ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಡಿ.</p><p><strong>2. ಗ್ರಹಣದ ನಂತರ</strong></p><p>· ಗ್ರಹಣ ಮುಗಿದ ತಕ್ಷಣ (8 ಸೆಪ್ಟೆಂಬರ್ ಬೆಳಿಗ್ಗೆ 1:30ರ ನಂತರ) ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.</p><p>· ಮನೆ ಮತ್ತು ಪೂಜಾ ಸ್ಥಳವನ್ನು ಗಂಗಾಜಲ/ತುಳಸಿ ನೀರಿನಿಂದ ಶುದ್ಧಿ ಮಾಡಿ.</p><p>· ಇಷ್ಟದೇವತೆಯನ್ನು ಸ್ಮರಿಸಿ, ಪೂಜೆ-ಅರ್ಚನೆ ಮಾಡಿ.</p><p>· ದಾನ-ಧರ್ಮ ಮಾಡುವುದು ಅತ್ಯಂತ ಶುಭಕರ. ನಿಮ್ಮ ಶಕ್ತಿ ಮತ್ತು ರಾಶಿಯ ಅನುಸಾರ ಈ ಕೆಳಗಿನ ವಸ್ತುಗಳನ್ನು ದಾನ ಮಾಡಬಹುದು.</p><p><strong>3. ರಾಶಿ ಅನುಸಾರ ಪರಿಹಾರ </strong></p><p><strong>· ಕುಂಭ, ವೃಶ್ಚಿಕ, ಕರ್ಕಾಟಕ ಮತ್ತು ಮೀನ ರಾಶಿಯವರು (ಅಶುಭ ಫಲ):</strong> ನೀಲಿ/ಕಪ್ಪು ಬಟ್ಟೆ, ಎಳ್ಳು, ಕಬ್ಬಿಣ ಪಾತ್ರೆ, ಉದ್ದಿನಬೇಳೆ ಹಾಗೂ ಅಕ್ಕಿ, ಚಂದ್ರ ಬಿಂಬ, ಒಂದು ಉಪ್ಪಿನ ಕಟ್ಟು ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ, ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ. "ಓಂ ನಮಃ ಶಿವಾಯ" ಮಂತ್ರದ ಜಪ ಮಾಡಿ.</p><p><strong>· ಮಿಥುನ, ತುಲಾ, ಸಿಂಹ ಮತ್ತು ಮಕರ ರಾಶಿಯವರು (ಮಿಶ್ರ ಫಲ):</strong> ಹಳದಿ ಬಟ್ಟೆ, ಅರಿಶಿನ, ಬೆಲ್ಲ, ತರಕಾರಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ. ದೇವೀ ಸ್ತೋತ್ರಗಳನ್ನು ಪಠಿಸಿ.</p><p><strong>· ಮೇಷ, ವೃಷಭ, ಕನ್ಯಾ ಮತ್ತು ಧನು ರಾಶಿಯವರು (ಶುಭ ಫಲ):</strong> ನಿಮ್ಮ ಇಷ್ಟದೇವತೆಗೆ ಕೃತಜ್ಞತೆ ಸಲ್ಲಿಸಿ. ಬೆಲ್ಲ, ವಸ್ತ್ರ, ಹಣ್ಣುಗಳು ಇತ್ಯಾದಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ ನಿಮ್ಮ ಶುಭ ಫಲವನ್ನು ದೃಢಪಡಿಸಿಕೊಳ್ಳಿ.</p><p><strong>ವಿಶೇಷ ಚಂದ್ರ ಗ್ರಹಣ ಶಾಂತಿಗಾಗಿ ನಮ್ಮನ್ನು ಸಂಪರ್ಕಿಸಬಹುದು: ವಿಠ್ಠಲ್ ಭಟ್ </strong></p>.Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೆಪ್ಟೆಂಬರ್ 7, 2025, ರಂದು ರಾಹು ಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈಗಾಗಲೇ ಯಾವ ರಾಶಿಗೆ ಶುಭ ಮತ್ತು ಅಶುಭ ಎಂಬ ಲೇಖನ ಪ್ರಕಟಿಸಲಾಗಿದೆ. ಈ ಗ್ರಹಣದ ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಅನುಕೂಲಕರ ಶಕ್ತಿಗಳನ್ನು ಪಡೆಯಲು ಕೆಲವು ಸರಳ ಆಚರಣೆಗಳನ್ನು ಮಾಡಬಹುದು.</p>.Lunar Eclipse | ಚಂದ್ರಗ್ರಹಣ ಫಲಾಫಲ: ನಿಮ್ಮ ರಾಶಿಗೆ ಶುಭವೇ ಅಶುಭವೇ?.<p><strong>1. ಗ್ರಹಣ ಸಮಯದಲ್ಲಿ</strong> </p><p>· ಗ್ರಹಣದ ಸಮಯದಲ್ಲಿ (7 ರಾತ್ರಿ 09-45ರಿಂದ 8ನೇ ತಾರೀಕು ಬೆಳಿಗ್ಗೆ 1:27ರವರೆಗೆ) ನಿದ್ರೆ, ಆಹಾರ ಸೇವನೆ, ಪ್ರಯಾಣ ಮಾಡಬಾರದು. ಆ ಸಮಯದಲ್ಲಿ ಸ್ನಾನ, ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಬೇಕು. ದಾನ ಕೊಡುವ ವಸ್ತುಗಳ ಮೇಲೆ ತುಳಸಿ ನೀರು ಬಿಟ್ಟು ಇಡಬೇಕು.</p><p>· ಈ ಸಮಯದಲ್ಲಿ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸಬೇಡಿ. ಗರ್ಭಿಣಿ ಮಹಿಳೆಯರು, ವೃದ್ಧರು ಮತ್ತು ರೋಗಿಗಳು ಹಣ್ಣು, ಹಾಲು ಇತ್ಯಾದಿ ಸೇವಿಸಬಹುದು. ಆದರೆ ಅದಕ್ಕೂ ಮುಂಚೆ ತುಸು ತುಳಸಿ ಎಲೆ ಅಥವಾ ದೂರ್ವೆ (ಗರಿಕೆ) ಹಾಕಿ ಪವಿತ್ರಗೊಳಿಸಬೇಕು.</p><p>· ಗ್ರಹಣದ ಸಮಯದಲ್ಲಿ ಮಲಗಬಾರದು. ಜಪ ಮಾಡಬೇಕು ಅಥವಾ ಧ್ಯಾನ ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ.</p><p>· ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಡಿ.</p><p><strong>2. ಗ್ರಹಣದ ನಂತರ</strong></p><p>· ಗ್ರಹಣ ಮುಗಿದ ತಕ್ಷಣ (8 ಸೆಪ್ಟೆಂಬರ್ ಬೆಳಿಗ್ಗೆ 1:30ರ ನಂತರ) ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.</p><p>· ಮನೆ ಮತ್ತು ಪೂಜಾ ಸ್ಥಳವನ್ನು ಗಂಗಾಜಲ/ತುಳಸಿ ನೀರಿನಿಂದ ಶುದ್ಧಿ ಮಾಡಿ.</p><p>· ಇಷ್ಟದೇವತೆಯನ್ನು ಸ್ಮರಿಸಿ, ಪೂಜೆ-ಅರ್ಚನೆ ಮಾಡಿ.</p><p>· ದಾನ-ಧರ್ಮ ಮಾಡುವುದು ಅತ್ಯಂತ ಶುಭಕರ. ನಿಮ್ಮ ಶಕ್ತಿ ಮತ್ತು ರಾಶಿಯ ಅನುಸಾರ ಈ ಕೆಳಗಿನ ವಸ್ತುಗಳನ್ನು ದಾನ ಮಾಡಬಹುದು.</p><p><strong>3. ರಾಶಿ ಅನುಸಾರ ಪರಿಹಾರ </strong></p><p><strong>· ಕುಂಭ, ವೃಶ್ಚಿಕ, ಕರ್ಕಾಟಕ ಮತ್ತು ಮೀನ ರಾಶಿಯವರು (ಅಶುಭ ಫಲ):</strong> ನೀಲಿ/ಕಪ್ಪು ಬಟ್ಟೆ, ಎಳ್ಳು, ಕಬ್ಬಿಣ ಪಾತ್ರೆ, ಉದ್ದಿನಬೇಳೆ ಹಾಗೂ ಅಕ್ಕಿ, ಚಂದ್ರ ಬಿಂಬ, ಒಂದು ಉಪ್ಪಿನ ಕಟ್ಟು ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ, ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ. "ಓಂ ನಮಃ ಶಿವಾಯ" ಮಂತ್ರದ ಜಪ ಮಾಡಿ.</p><p><strong>· ಮಿಥುನ, ತುಲಾ, ಸಿಂಹ ಮತ್ತು ಮಕರ ರಾಶಿಯವರು (ಮಿಶ್ರ ಫಲ):</strong> ಹಳದಿ ಬಟ್ಟೆ, ಅರಿಶಿನ, ಬೆಲ್ಲ, ತರಕಾರಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ. ದೇವೀ ಸ್ತೋತ್ರಗಳನ್ನು ಪಠಿಸಿ.</p><p><strong>· ಮೇಷ, ವೃಷಭ, ಕನ್ಯಾ ಮತ್ತು ಧನು ರಾಶಿಯವರು (ಶುಭ ಫಲ):</strong> ನಿಮ್ಮ ಇಷ್ಟದೇವತೆಗೆ ಕೃತಜ್ಞತೆ ಸಲ್ಲಿಸಿ. ಬೆಲ್ಲ, ವಸ್ತ್ರ, ಹಣ್ಣುಗಳು ಇತ್ಯಾದಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ ನಿಮ್ಮ ಶುಭ ಫಲವನ್ನು ದೃಢಪಡಿಸಿಕೊಳ್ಳಿ.</p><p><strong>ವಿಶೇಷ ಚಂದ್ರ ಗ್ರಹಣ ಶಾಂತಿಗಾಗಿ ನಮ್ಮನ್ನು ಸಂಪರ್ಕಿಸಬಹುದು: ವಿಠ್ಠಲ್ ಭಟ್ </strong></p>.Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>