<p><strong>ಕೊಚ್ಚಿ</strong>: 2018ರಲ್ಲಿ ತನ್ನ ಸಂಬಂಧಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕಾರಿಗೆ ಕಪ್ಪು ಮೋಟಾರ್ ಎಣ್ಣೆ ಸುರಿದು, ಪ್ರತಿಭಟನೆ ನಡೆಸಿದ್ದಾನೆ.</p>.<p>ಆರೋಪಿಯನ್ನು ರಘುನಾಥ್ ಎಂದು ಗುರುತಿಸಲಾಗಿದ್ದು, ‘ನ್ಯಾಯಯುತ ತನಿಖೆ’ ನಡೆಯಬೇಕು ಎಂದು ಆಗ್ರಹಿಸಿ ಆತ ಹೈಕೋರ್ಟ್ ಕಟ್ಟಡದ ಮುಂದೆ ಪ್ರತಿಭಟನೆ ನಡೆಸುತ್ತಿದ್ದನು. 2018ರಲ್ಲಿ ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿ ಆರೋಪಿಯ ಸಂಬಂಧಿ ಜಸ್ನಾ ಮರಿಯಾ ಜೇಮ್ಸ್ ಎಂಬವರು ನಾಪತ್ತೆಯಾಗಿದ್ದರು.</p>.<p>‘ಹೈಕೋರ್ಟ್ ಆವರಣದಲ್ಲಿದ್ದ ನ್ಯಾಯಮೂರ್ತಿ ವಿ. ಶಿರ್ಸಿ ಅವರ ಕಾರಿನ ಮೇಲಿನ ರಘುನಾಥ್ ಎಣ್ಣೆ ಸುರಿದಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.</p>.<p>2018 ಮಾರ್ಚ್ 21 ರಂದು 20 ವರ್ಷದ ಕಾಲೇಜು ವಿದ್ಯಾರ್ಥಿನಿ ಜಸ್ನಾ ಮರಿಯಾ ತನ್ನ ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಪತ್ತೆ ಹಚ್ಚಲು 15 ಮಂದಿಯ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು. ಅಲ್ಲದೆ ಕೇರಳ ಪೊಲೀಸರು, ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ನಗದು ಪುರಸ್ಕಾರ ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ</strong>: 2018ರಲ್ಲಿ ತನ್ನ ಸಂಬಂಧಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕಾರಿಗೆ ಕಪ್ಪು ಮೋಟಾರ್ ಎಣ್ಣೆ ಸುರಿದು, ಪ್ರತಿಭಟನೆ ನಡೆಸಿದ್ದಾನೆ.</p>.<p>ಆರೋಪಿಯನ್ನು ರಘುನಾಥ್ ಎಂದು ಗುರುತಿಸಲಾಗಿದ್ದು, ‘ನ್ಯಾಯಯುತ ತನಿಖೆ’ ನಡೆಯಬೇಕು ಎಂದು ಆಗ್ರಹಿಸಿ ಆತ ಹೈಕೋರ್ಟ್ ಕಟ್ಟಡದ ಮುಂದೆ ಪ್ರತಿಭಟನೆ ನಡೆಸುತ್ತಿದ್ದನು. 2018ರಲ್ಲಿ ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿ ಆರೋಪಿಯ ಸಂಬಂಧಿ ಜಸ್ನಾ ಮರಿಯಾ ಜೇಮ್ಸ್ ಎಂಬವರು ನಾಪತ್ತೆಯಾಗಿದ್ದರು.</p>.<p>‘ಹೈಕೋರ್ಟ್ ಆವರಣದಲ್ಲಿದ್ದ ನ್ಯಾಯಮೂರ್ತಿ ವಿ. ಶಿರ್ಸಿ ಅವರ ಕಾರಿನ ಮೇಲಿನ ರಘುನಾಥ್ ಎಣ್ಣೆ ಸುರಿದಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.</p>.<p>2018 ಮಾರ್ಚ್ 21 ರಂದು 20 ವರ್ಷದ ಕಾಲೇಜು ವಿದ್ಯಾರ್ಥಿನಿ ಜಸ್ನಾ ಮರಿಯಾ ತನ್ನ ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಪತ್ತೆ ಹಚ್ಚಲು 15 ಮಂದಿಯ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು. ಅಲ್ಲದೆ ಕೇರಳ ಪೊಲೀಸರು, ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ನಗದು ಪುರಸ್ಕಾರ ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>