<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ನವದೆಹಲಿ</strong>: ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆ ಬಳಿ ಕಳೆದ ವರ್ಷ ನಡೆದ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ದೆಹಲಿ ನ್ಯಾಯಾಲಯವು ಶುಕ್ರವಾರ ಹೆಚ್ಚುವರಿಯಾಗಿ 45 ದಿನಗಳ ಕಾಲಾವಕಾಶ ನೀಡಿದೆ. </p>.Red Fort blast: ತನಿಖೆ ಪೂರ್ಣಗೊಳಿಸಲು ಎನ್ಐಎಗೆ ಮತ್ತೆ 45 ದಿನ ಅವಕಾಶ.<p><strong>ನವದೆಹಲಿ:</strong> ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ ವೀರ ರಾಜ ವೀರ’ ಹಾಡಿನಲ್ಲಿ ದಗರ್ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಿನಿಮಾ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.</p>.'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ.<p><strong>ಅಲಹಾಬಾದ್:</strong> ವ್ಯಕ್ತಿಯೊಬ್ಬನ ಜಾತಿಯು ಜನನದಿಂದಲೇ ನಿರ್ಧಾರವಾಗಿರುತ್ತದೆ. ಮದುವೆ ಅಥವಾ ಮತಾಂತರದ ಬಳಿಕವೂ ಅದು ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.</p>.ಮದುವೆ, ಮತಾಂತರದಿಂದ ಜಾತಿ ಬದಲಾಗದು: ಅಲಹಾಬಾದ್ ಹೈಕೋರ್ಟ್.<p><strong>ಕೊಚ್ಚಿ:</strong> ಕೇರಳದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 10 ತಿಂಗಳ ಹೆಣ್ಣು ಮಗು ಅಲಿನ್ ಅಬ್ರಾಹಂಳ ಅಂಗಾಂಗಳನ್ನು ದಾನ ಮಾಡಲಾಗಿದೆ.</p>.ಇನ್ನೂ ಅಂಬೆಗಾಲಿಡದ ಕಂದಮ್ಮ ಅಂಗಾಂಗ ದಾನ ಮಾಡಿ ಹೋದಳು! ರಸ್ತೆ ಅಪಘಾತಗಳ ಕ್ರೂರತೆ...<p><strong>ತಿಪಟೂರು</strong>: ‘ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಅದು ಸಿಕ್ಕೇ ಸಿಗುತ್ತದೆ ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.ಶ್ರಮಕ್ಕೆ ಫಲ ಸಿಗುತ್ತದೆ, ಶಿವರಾತ್ರಿ ಬಳಿಕ ಶುಭವಾಗಲಿದೆ: ಡಿ.ಕೆ. ಶಿವಕುಮಾರ್.<p><strong>ಬೆಂಗಳೂರು:</strong> ‘ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಸುಳ್ಳು ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿ ಮಧ್ಯರಾತ್ರಿ ಮಾಲೀಕರ ಗ್ಯಾರೇಜ್ಗೆ ನುಗ್ಗಿ ಕಾರನ್ನು ಏಕಾಏಕಿ ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗಿರುವ ಹಿರಿಯ ಮೋಟಾರು ವಾಹನಗಳ ನಿರೀಕ್ಷಕರೊಬ್ಬರನ್ನು (ಎಂವಿಐ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.</p>.ಒಂದು ಲ್ಯಾಂಬೋರ್ಗಿನಿ ಕಾರಿನ ಪ್ರಹಸನ: ಸಾರಿಗೆ ಅಧಿಕಾರಿಗೆ ಹೈಕೋರ್ಟ್ ತರಾಟೆ.<p><strong>ನವದೆಹಲಿ:</strong> ಪ್ರಧಾನಿ ವಿರುದ್ಧ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರ ಯಾವುದೇ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದಾರೆ.</p>.ರಾಹುಲ್ ಗಾಂಧಿ ವಿರುದ್ಧ ಗೊತ್ತುವಳಿ ಇಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು.<p><strong>ನವದೆಹಲಿ</strong>: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.</p>.ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ.<p><strong>ನವದೆಹಲಿ:</strong> ‘ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 50ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದು ದೇಶದ ರಿಯಲ್ ಎಸ್ಟೇಟ್ ವಯಲಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹೇಳಿದ್ದಾರೆ.</p> .ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ.<p><strong>ಕೊಲಂಬೊ:</strong> ಹೊಟ್ಟೆಕೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಸ್ಫೋಟಕ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಶುಕ್ರವಾರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿಳಿದರು. ಪಾಕಿಸ್ತಾನ ವಿರುದ್ಧ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಅವರು ಆಡಬಹುದೆಂಬ ವಿಶ್ವಾಸಕ್ಕೆ ಇದು ಕಾರಣವಾಗಿದೆ.</p>.T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್? .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ನವದೆಹಲಿ</strong>: ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆ ಬಳಿ ಕಳೆದ ವರ್ಷ ನಡೆದ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ದೆಹಲಿ ನ್ಯಾಯಾಲಯವು ಶುಕ್ರವಾರ ಹೆಚ್ಚುವರಿಯಾಗಿ 45 ದಿನಗಳ ಕಾಲಾವಕಾಶ ನೀಡಿದೆ. </p>.Red Fort blast: ತನಿಖೆ ಪೂರ್ಣಗೊಳಿಸಲು ಎನ್ಐಎಗೆ ಮತ್ತೆ 45 ದಿನ ಅವಕಾಶ.<p><strong>ನವದೆಹಲಿ:</strong> ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ ವೀರ ರಾಜ ವೀರ’ ಹಾಡಿನಲ್ಲಿ ದಗರ್ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಿನಿಮಾ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.</p>.'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ.<p><strong>ಅಲಹಾಬಾದ್:</strong> ವ್ಯಕ್ತಿಯೊಬ್ಬನ ಜಾತಿಯು ಜನನದಿಂದಲೇ ನಿರ್ಧಾರವಾಗಿರುತ್ತದೆ. ಮದುವೆ ಅಥವಾ ಮತಾಂತರದ ಬಳಿಕವೂ ಅದು ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.</p>.ಮದುವೆ, ಮತಾಂತರದಿಂದ ಜಾತಿ ಬದಲಾಗದು: ಅಲಹಾಬಾದ್ ಹೈಕೋರ್ಟ್.<p><strong>ಕೊಚ್ಚಿ:</strong> ಕೇರಳದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 10 ತಿಂಗಳ ಹೆಣ್ಣು ಮಗು ಅಲಿನ್ ಅಬ್ರಾಹಂಳ ಅಂಗಾಂಗಳನ್ನು ದಾನ ಮಾಡಲಾಗಿದೆ.</p>.ಇನ್ನೂ ಅಂಬೆಗಾಲಿಡದ ಕಂದಮ್ಮ ಅಂಗಾಂಗ ದಾನ ಮಾಡಿ ಹೋದಳು! ರಸ್ತೆ ಅಪಘಾತಗಳ ಕ್ರೂರತೆ...<p><strong>ತಿಪಟೂರು</strong>: ‘ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಅದು ಸಿಕ್ಕೇ ಸಿಗುತ್ತದೆ ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.ಶ್ರಮಕ್ಕೆ ಫಲ ಸಿಗುತ್ತದೆ, ಶಿವರಾತ್ರಿ ಬಳಿಕ ಶುಭವಾಗಲಿದೆ: ಡಿ.ಕೆ. ಶಿವಕುಮಾರ್.<p><strong>ಬೆಂಗಳೂರು:</strong> ‘ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಸುಳ್ಳು ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿ ಮಧ್ಯರಾತ್ರಿ ಮಾಲೀಕರ ಗ್ಯಾರೇಜ್ಗೆ ನುಗ್ಗಿ ಕಾರನ್ನು ಏಕಾಏಕಿ ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗಿರುವ ಹಿರಿಯ ಮೋಟಾರು ವಾಹನಗಳ ನಿರೀಕ್ಷಕರೊಬ್ಬರನ್ನು (ಎಂವಿಐ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.</p>.ಒಂದು ಲ್ಯಾಂಬೋರ್ಗಿನಿ ಕಾರಿನ ಪ್ರಹಸನ: ಸಾರಿಗೆ ಅಧಿಕಾರಿಗೆ ಹೈಕೋರ್ಟ್ ತರಾಟೆ.<p><strong>ನವದೆಹಲಿ:</strong> ಪ್ರಧಾನಿ ವಿರುದ್ಧ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರ ಯಾವುದೇ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದಾರೆ.</p>.ರಾಹುಲ್ ಗಾಂಧಿ ವಿರುದ್ಧ ಗೊತ್ತುವಳಿ ಇಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು.<p><strong>ನವದೆಹಲಿ</strong>: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.</p>.ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ.<p><strong>ನವದೆಹಲಿ:</strong> ‘ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 50ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದು ದೇಶದ ರಿಯಲ್ ಎಸ್ಟೇಟ್ ವಯಲಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹೇಳಿದ್ದಾರೆ.</p> .ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ.<p><strong>ಕೊಲಂಬೊ:</strong> ಹೊಟ್ಟೆಕೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಸ್ಫೋಟಕ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಶುಕ್ರವಾರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿಳಿದರು. ಪಾಕಿಸ್ತಾನ ವಿರುದ್ಧ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಅವರು ಆಡಬಹುದೆಂಬ ವಿಶ್ವಾಸಕ್ಕೆ ಇದು ಕಾರಣವಾಗಿದೆ.</p>.T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್? .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>