<p><strong>ಚಂಡೀಗಢ:</strong> ಆಡಳಿತ ಸುಧಾರಣಾ ಇಲಾಖೆಯು ಕಳೆದ 21 ತಿಂಗಳಿಂದ ಇಲ್ಲದ ಕಾರಣ, ಅನಿವಾಸಿ ಭಾರತೀಯ (ಎನ್ಆರ್ಐ) ವ್ಯವಹಾರಗಳ ಇಲಾಖೆಯೊಂದನ್ನೇ ನಾನು ಹೊಂದಿದ್ದೇನೆ ಎಂದು ಪಂಜಾಬ್ನ ಸಂಪುಟ ದರ್ಜೆ ಸಚಿವ ಕುಲದೀಪ್ ಸಿಂಗ್ ಧಾಲಿವಾಲ್ ಹೇಳಿದ್ದಾರೆ. </p><p>‘ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಸಭೆಗಳು ನಡೆದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿಯೂ ಇಲ್ಲ ಎಂದು ಹೇಳಿರುವುದಾಗಿ’ ಮೂಲಗಳು ತಿಳಿಸಿವೆ.</p><p>ಇದನ್ನು ಟೀಕಿಸಿರುವ ಬಿಜೆಪಿ, ‘ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯ ಸರ್ಕಾರದ ಕುರಿತು ಎಷ್ಟು ಕಾಳಜಿ ಹೊಂದಿದ್ದಾರೆ ಎನ್ನುವುದಕ್ಕೆ ಧಾಲಿವಾಲ್ ಅವರ ಸ್ಥಿತಿಯೇ ಸಾಕ್ಷಿ’ ಎಂದಿದೆ.</p><p>ಪಂಜಾಬ್ ಸರ್ಕಾರವು ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರಗಳಿವೆ. ಆದರೆ ಕುಲದೀಪ್ ಸಿಂಗ್ ಧಾಲಿವಾಲ್ ಅವರಿಗೆ ಹಂಚಿಕೆಯಾಗಿದ್ದ ಆಡಳಿತ ಸುಧಾರಣಾ ಇಲಾಖೆಯ ಉಲ್ಲೇಖವೇ ಇಲ್ಲ. ಈವರೆಗೂ ಈ ಒಂದು ಇಲಾಖೆ ಇದೆ ಎಂಬ ಮಾಹಿತಿ ಸರ್ಕಾರದ ಬಳಿಯೇ ಇಲ್ಲ. </p><p>ಧಾಲಿವಾಲ್ ಅವರಿಗೆ ಮೇ 2023ರಂದು ನಡೆದ ಸಂಪುಟ ಪುನಾರಚನೆಯಲ್ಲಿ ಆಡಳಿತ ಸುಧಾರಣಾ ಇಲಾಖೆಯ ಹೊಣೆ ನೀಡಲಾಗಿತ್ತು. ಇದೇ ವೇಳೆ ಅವರು ಈ ಮೊದಲು ಹೊಂದಿದ್ದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಎನ್ಆರ್ಐ ಇಲಾಖೆಯಿಂದ ಅವರನ್ನು ಕದಲಿಸಿರಲಿಲ್ಲ. ಗುರ್ಮೀತ್ ಸಿಂಗ್ ಖುದ್ದಿಯಾನ್ ಅವರಿಗೆ ನೀಡಲಾಗಿತ್ತು.</p><p>ಬಿಜೆಪಿಯ ಪಂಜಾಬ್ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಶ್ ಶರ್ಮಾ ಮಾತನಾಡಿ, ‘ಇಲ್ಲದ ಇಲಾಖೆಯ ಸಚಿವ ಸ್ಥಾನವನ್ನು ನೀಡಿದ ಪಂಜಾಬ್ನ ಎಎಪಿ ಸರ್ಕಾರದ ಮಾನಸಿಕ ಸ್ಥಿತಿ ಊಹೆಗೂ ಮೀರಿದ್ದು. ಇಲ್ಲದ ಖಾತೆಯನ್ನು ಹಂಚಿದವರು ಹಾಗೂ ಆ ಖಾತೆಯನ್ನು ವಹಿಸಿಕೊಂಡವರಿಗೆ ಅದು ವಾಸ್ತವದಲ್ಲಿ ಇಲ್ಲ ಎಂಬುದೇ ತಿಳಿದಿಲ್ಲ ಎನ್ನುವುದೇ ಪರಮಾಶ್ಚರ್ಯ’ ಎಂದಿದ್ದಾರೆ.</p><p>ಶಿರೋಮಣಿ ಅಕಾಲಿದಳ ಪಕ್ಷದ ಮುಖಂಡರೂ ಆದ ಭಟಿಂಡಾ ಸಂಸದ ಹರ್ಸಿರ್ಮತ್ ಕೌರ್ ಬಾದಲ್ ಅವರೂ ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ.</p><p>‘ಇದು ಪಂಜಾಬ್ನ ಎಎಪಿ ಸರ್ಕಾರದ ಶೈಲಿ. ಅಸ್ತಿತ್ವದಲ್ಲೇ ಇಲ್ಲದ ಇಲಾಖೆಯನ್ನು ಸರ್ಕಾರ ಹಂಚಿದೆ. ತಮಗೆ ಹಂಚಿಕೆಯಾದ ಇಲಾಖೆ ಕುರಿತು ಸಚಿವರಿಗೆ ಕನಿಷ್ಠ ಕಾಳಜಿಯೂ ಇಲ್ಲವಾಗಿದೆ. ಇವೆಲ್ಲಾ ಏಕಾಗಿದೆ ಎಂದರೆ, ಪಂಜಾಬ್ನಲ್ಲಿ ಸರ್ಕಾರವೇ ಇಲ್ಲ. ಇಲ್ಲಿರುವ ಸರ್ಕಾರದ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ’ ಎಂದಿದ್ದಾರೆ.</p><p>‘ಎಂಥಾ ಬದಲಾವಣೆ’ ಎಂದು ಕಾಂಗ್ರೆಸ್ನ ಪಂಜಾಬ್ ಘಟಕದ ಮುಖ್ಯಸ್ಥ ಹಾಗೂ ಲೂಧಿಯಾನ ಸಂಸದ ಅಮರೀಂದರ್ ಸಿಂಗ್ ರಾಜಾ ಅವರು ಎಎಪಿ ಕಾಲೆಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ಆಡಳಿತ ಸುಧಾರಣಾ ಇಲಾಖೆಯು ಕಳೆದ 21 ತಿಂಗಳಿಂದ ಇಲ್ಲದ ಕಾರಣ, ಅನಿವಾಸಿ ಭಾರತೀಯ (ಎನ್ಆರ್ಐ) ವ್ಯವಹಾರಗಳ ಇಲಾಖೆಯೊಂದನ್ನೇ ನಾನು ಹೊಂದಿದ್ದೇನೆ ಎಂದು ಪಂಜಾಬ್ನ ಸಂಪುಟ ದರ್ಜೆ ಸಚಿವ ಕುಲದೀಪ್ ಸಿಂಗ್ ಧಾಲಿವಾಲ್ ಹೇಳಿದ್ದಾರೆ. </p><p>‘ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಸಭೆಗಳು ನಡೆದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿಯೂ ಇಲ್ಲ ಎಂದು ಹೇಳಿರುವುದಾಗಿ’ ಮೂಲಗಳು ತಿಳಿಸಿವೆ.</p><p>ಇದನ್ನು ಟೀಕಿಸಿರುವ ಬಿಜೆಪಿ, ‘ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯ ಸರ್ಕಾರದ ಕುರಿತು ಎಷ್ಟು ಕಾಳಜಿ ಹೊಂದಿದ್ದಾರೆ ಎನ್ನುವುದಕ್ಕೆ ಧಾಲಿವಾಲ್ ಅವರ ಸ್ಥಿತಿಯೇ ಸಾಕ್ಷಿ’ ಎಂದಿದೆ.</p><p>ಪಂಜಾಬ್ ಸರ್ಕಾರವು ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರಗಳಿವೆ. ಆದರೆ ಕುಲದೀಪ್ ಸಿಂಗ್ ಧಾಲಿವಾಲ್ ಅವರಿಗೆ ಹಂಚಿಕೆಯಾಗಿದ್ದ ಆಡಳಿತ ಸುಧಾರಣಾ ಇಲಾಖೆಯ ಉಲ್ಲೇಖವೇ ಇಲ್ಲ. ಈವರೆಗೂ ಈ ಒಂದು ಇಲಾಖೆ ಇದೆ ಎಂಬ ಮಾಹಿತಿ ಸರ್ಕಾರದ ಬಳಿಯೇ ಇಲ್ಲ. </p><p>ಧಾಲಿವಾಲ್ ಅವರಿಗೆ ಮೇ 2023ರಂದು ನಡೆದ ಸಂಪುಟ ಪುನಾರಚನೆಯಲ್ಲಿ ಆಡಳಿತ ಸುಧಾರಣಾ ಇಲಾಖೆಯ ಹೊಣೆ ನೀಡಲಾಗಿತ್ತು. ಇದೇ ವೇಳೆ ಅವರು ಈ ಮೊದಲು ಹೊಂದಿದ್ದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಎನ್ಆರ್ಐ ಇಲಾಖೆಯಿಂದ ಅವರನ್ನು ಕದಲಿಸಿರಲಿಲ್ಲ. ಗುರ್ಮೀತ್ ಸಿಂಗ್ ಖುದ್ದಿಯಾನ್ ಅವರಿಗೆ ನೀಡಲಾಗಿತ್ತು.</p><p>ಬಿಜೆಪಿಯ ಪಂಜಾಬ್ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಶ್ ಶರ್ಮಾ ಮಾತನಾಡಿ, ‘ಇಲ್ಲದ ಇಲಾಖೆಯ ಸಚಿವ ಸ್ಥಾನವನ್ನು ನೀಡಿದ ಪಂಜಾಬ್ನ ಎಎಪಿ ಸರ್ಕಾರದ ಮಾನಸಿಕ ಸ್ಥಿತಿ ಊಹೆಗೂ ಮೀರಿದ್ದು. ಇಲ್ಲದ ಖಾತೆಯನ್ನು ಹಂಚಿದವರು ಹಾಗೂ ಆ ಖಾತೆಯನ್ನು ವಹಿಸಿಕೊಂಡವರಿಗೆ ಅದು ವಾಸ್ತವದಲ್ಲಿ ಇಲ್ಲ ಎಂಬುದೇ ತಿಳಿದಿಲ್ಲ ಎನ್ನುವುದೇ ಪರಮಾಶ್ಚರ್ಯ’ ಎಂದಿದ್ದಾರೆ.</p><p>ಶಿರೋಮಣಿ ಅಕಾಲಿದಳ ಪಕ್ಷದ ಮುಖಂಡರೂ ಆದ ಭಟಿಂಡಾ ಸಂಸದ ಹರ್ಸಿರ್ಮತ್ ಕೌರ್ ಬಾದಲ್ ಅವರೂ ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ.</p><p>‘ಇದು ಪಂಜಾಬ್ನ ಎಎಪಿ ಸರ್ಕಾರದ ಶೈಲಿ. ಅಸ್ತಿತ್ವದಲ್ಲೇ ಇಲ್ಲದ ಇಲಾಖೆಯನ್ನು ಸರ್ಕಾರ ಹಂಚಿದೆ. ತಮಗೆ ಹಂಚಿಕೆಯಾದ ಇಲಾಖೆ ಕುರಿತು ಸಚಿವರಿಗೆ ಕನಿಷ್ಠ ಕಾಳಜಿಯೂ ಇಲ್ಲವಾಗಿದೆ. ಇವೆಲ್ಲಾ ಏಕಾಗಿದೆ ಎಂದರೆ, ಪಂಜಾಬ್ನಲ್ಲಿ ಸರ್ಕಾರವೇ ಇಲ್ಲ. ಇಲ್ಲಿರುವ ಸರ್ಕಾರದ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ’ ಎಂದಿದ್ದಾರೆ.</p><p>‘ಎಂಥಾ ಬದಲಾವಣೆ’ ಎಂದು ಕಾಂಗ್ರೆಸ್ನ ಪಂಜಾಬ್ ಘಟಕದ ಮುಖ್ಯಸ್ಥ ಹಾಗೂ ಲೂಧಿಯಾನ ಸಂಸದ ಅಮರೀಂದರ್ ಸಿಂಗ್ ರಾಜಾ ಅವರು ಎಎಪಿ ಕಾಲೆಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>