<p><strong>ಗುರುಗ್ರಾಮ:</strong> ಪೆರೋಲ್ ಮೇಲಿದ್ದ ಗುರುಗ್ರಾಮ ಮೂಲದ ಕೊಲೆ ಅಪರಾಧಿ ಮೈಪಾಲ್ ಧಿಲ್ಲಾ ಎಂಬುವನು ಕಾಂಬೋಡಿಯಾಗೆ ಪರಾರಿಯಾಗಿದ್ದ. ಇದೀಗ ಈತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.</p>.<p>ಧಿಲ್ಲಾ ವಿರುದ್ಧ ಬಹದ್ದೂರ್ಗಢ ಠಾಣೆಯಲ್ಲಿ ಕೊಲೆ, ಅಕ್ರಮ ಬಂದೂಕು ಬಳಕೆ, ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಈತ ಕಾಂಬೋಡಿಯಾದಲ್ಲಿ ತಲೆಮರೆಸಿಕೊಂಡಿದ್ದ.</p><p>ಅನೇಕ ಪ್ರಕರಣಗಳಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವಾಗಲೇ ಕೊಲೆ ಮಾಡಿದ ಆರೋಪವೂ ಈತನ ಮೇಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.ಹರಿಯಾಣ: ರೈಲು ಬೋಗಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ.<p>2018 ರಂದು ಧಿಲ್ಲಾ ಅವರನ್ನು ಹಿಸಾರ್ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ನಕಲಿ ಗುರುತಿನ ಚೀಟಿ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದರು.</p><p>ಧಿಲ್ಲಾ ಅವರನ್ನು ಬಂಧಿಸುವಂತೆ ಹರಿಯಾಣ ಪೊಲೀಸರು ಸಿಬಿಐಗೆ ಮನವಿ ಮಾಡಿದ್ದರು. ತನಿಖೆ ಚುರುಕುಗೊಳಿಸಿದ ಸಿಬಿಐ, ಥಾಯ್ಲೆಂಡ್, ಬ್ಯಾಂಕಾಕ್, ಕಾಂಬೋಡಿಯ ದೇಶಗಳಿಗೆ ಆರೋಪಿಯ ಹಿನ್ನಲೆ ತಿಳಿಸಿತ್ತು. </p><p>ಧಿಲ್ಲಾ ಹಿನ್ನೆಲೆ ತಿಳಿದ ಕಾಂಬೋಡಿಯನ್ ಅಧಿಕಾರಿಗಳು ಕೊಲೆ ಆರೋಪಿಯನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಗ್ರಾಮ:</strong> ಪೆರೋಲ್ ಮೇಲಿದ್ದ ಗುರುಗ್ರಾಮ ಮೂಲದ ಕೊಲೆ ಅಪರಾಧಿ ಮೈಪಾಲ್ ಧಿಲ್ಲಾ ಎಂಬುವನು ಕಾಂಬೋಡಿಯಾಗೆ ಪರಾರಿಯಾಗಿದ್ದ. ಇದೀಗ ಈತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.</p>.<p>ಧಿಲ್ಲಾ ವಿರುದ್ಧ ಬಹದ್ದೂರ್ಗಢ ಠಾಣೆಯಲ್ಲಿ ಕೊಲೆ, ಅಕ್ರಮ ಬಂದೂಕು ಬಳಕೆ, ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಈತ ಕಾಂಬೋಡಿಯಾದಲ್ಲಿ ತಲೆಮರೆಸಿಕೊಂಡಿದ್ದ.</p><p>ಅನೇಕ ಪ್ರಕರಣಗಳಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವಾಗಲೇ ಕೊಲೆ ಮಾಡಿದ ಆರೋಪವೂ ಈತನ ಮೇಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.ಹರಿಯಾಣ: ರೈಲು ಬೋಗಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ.<p>2018 ರಂದು ಧಿಲ್ಲಾ ಅವರನ್ನು ಹಿಸಾರ್ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ನಕಲಿ ಗುರುತಿನ ಚೀಟಿ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದರು.</p><p>ಧಿಲ್ಲಾ ಅವರನ್ನು ಬಂಧಿಸುವಂತೆ ಹರಿಯಾಣ ಪೊಲೀಸರು ಸಿಬಿಐಗೆ ಮನವಿ ಮಾಡಿದ್ದರು. ತನಿಖೆ ಚುರುಕುಗೊಳಿಸಿದ ಸಿಬಿಐ, ಥಾಯ್ಲೆಂಡ್, ಬ್ಯಾಂಕಾಕ್, ಕಾಂಬೋಡಿಯ ದೇಶಗಳಿಗೆ ಆರೋಪಿಯ ಹಿನ್ನಲೆ ತಿಳಿಸಿತ್ತು. </p><p>ಧಿಲ್ಲಾ ಹಿನ್ನೆಲೆ ತಿಳಿದ ಕಾಂಬೋಡಿಯನ್ ಅಧಿಕಾರಿಗಳು ಕೊಲೆ ಆರೋಪಿಯನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>