<p><strong>ಮುಂಬೈ</strong>: ದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ‘ಐಎಎನ್ಎಸ್ ಮಾಹೆ’ಯು ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಗೊಂಡಿತು.</p><p>ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೊಸ ತಲೆಮಾರಿನ ದೇಶೀಯ ಯುದ್ಧ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಮಾಡಿದರು.</p><p>‘ಮಾಹೆ’ಯನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಿರ್ಮಿಸಿದ್ದು, ನೌಕೆಯ ವಿನ್ಯಾಸ ಹಾಗೂ ನಿರ್ಮಾಣವು ಆತ್ಮನಿರ್ಭರ ಭಾರತ ಉಪಕ್ರಮವನ್ನು ಪ್ರತಿನಿಧಿಸುತ್ತದೆ.</p><p>ಕರಾರುವಾಕ್ಕಾದ ಗುರಿ ಮತ್ತು ಚುರುಕುತನದ ಮೂಲಕ ದೇಶದ ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾದ ಸಾಮರ್ಥ್ಯವನ್ನು ಮಾಹೆ ಯುದ್ಧ ನೌಕೆ ಹೊಂದಿದೆ. ರಹಸ್ಯ ಕಾರ್ಯಾಚರಣೆ, ಕರಾವಳಿ ಗಸ್ತು, ಜಲಾಂತರ್ಗಾಮಿ ನೌಕೆಗಳ ನಿಗ್ರಹ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ನೌಕಾಪಡೆಯು ತಿಳಿಸಿದೆ.</p>.<h2>ವೈಶಿಷ್ಟ್ಯಗಳು </h2><p>* ಟಾರ್ಪೆಡೊ (ಜಲ ಕ್ಷಿಪಣಿ) ಜಲಾಂತರ್ಗಾಮಿ ನಿಗ್ರಹ ರಾಕೆಟ್ಗಳನ್ನು ಒಳಗೊಂಡಿರಲಿದೆ </p><p>* ನೌಕೆ ನಿರ್ಮಾಣಕ್ಕೆ ಶೇಕಡ 80ರಷ್ಟು ದೇಶೀಯ ವಸ್ತುಗಳ ಬಳಕೆ </p><p>*ಮಾಹೆ ಶ್ರೇಣಿಯ ಮೊದಲ ಜಲಾಂತರ್ಗಾಮಿ ನಿಗ್ರಹ ನೌಕೆ </p><p>* ನೌಕೆಗೆ ಮಲಬಾರಿನ ಐತಿಹಾಸಿಕ ಕರಾವಳಿ ನಗರ ‘ಮಾಹೆ’ಯ ಹೆಸರನ್ನು ಇಡಲಾಗಿದೆ </p><p>*ನೌಕೆಯ ಲಾಂಛನದಲ್ಲಿ ಕಳರಿಪಯಟ್ಟು ಯುದ್ಧ ಕಲೆಯಲ್ಲಿ ಬಳಸುವ ಕತ್ತಿ (ಉರುಮಿ) ಚಿಹ್ನೆ ಬಳಕೆ. ಚುರುಕುತನ ನಿಖರತೆ ಕರಾರುವಕ್ಕಾದ ಗುರಿಯ ಸಂಕೇತವಾಗಿ ಬಳಕೆ </p> .Indian Navy: ಕ್ಷಿಪಣಿ ಧ್ವಂಸಕ INS ಸೂರತ್ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆ.INS Kolkata: 35 ಸೊಮಾಲಿಯಾ ಕಡಲ್ಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ನೌಕಾಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ‘ಐಎಎನ್ಎಸ್ ಮಾಹೆ’ಯು ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಗೊಂಡಿತು.</p><p>ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೊಸ ತಲೆಮಾರಿನ ದೇಶೀಯ ಯುದ್ಧ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಮಾಡಿದರು.</p><p>‘ಮಾಹೆ’ಯನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಿರ್ಮಿಸಿದ್ದು, ನೌಕೆಯ ವಿನ್ಯಾಸ ಹಾಗೂ ನಿರ್ಮಾಣವು ಆತ್ಮನಿರ್ಭರ ಭಾರತ ಉಪಕ್ರಮವನ್ನು ಪ್ರತಿನಿಧಿಸುತ್ತದೆ.</p><p>ಕರಾರುವಾಕ್ಕಾದ ಗುರಿ ಮತ್ತು ಚುರುಕುತನದ ಮೂಲಕ ದೇಶದ ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾದ ಸಾಮರ್ಥ್ಯವನ್ನು ಮಾಹೆ ಯುದ್ಧ ನೌಕೆ ಹೊಂದಿದೆ. ರಹಸ್ಯ ಕಾರ್ಯಾಚರಣೆ, ಕರಾವಳಿ ಗಸ್ತು, ಜಲಾಂತರ್ಗಾಮಿ ನೌಕೆಗಳ ನಿಗ್ರಹ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ನೌಕಾಪಡೆಯು ತಿಳಿಸಿದೆ.</p>.<h2>ವೈಶಿಷ್ಟ್ಯಗಳು </h2><p>* ಟಾರ್ಪೆಡೊ (ಜಲ ಕ್ಷಿಪಣಿ) ಜಲಾಂತರ್ಗಾಮಿ ನಿಗ್ರಹ ರಾಕೆಟ್ಗಳನ್ನು ಒಳಗೊಂಡಿರಲಿದೆ </p><p>* ನೌಕೆ ನಿರ್ಮಾಣಕ್ಕೆ ಶೇಕಡ 80ರಷ್ಟು ದೇಶೀಯ ವಸ್ತುಗಳ ಬಳಕೆ </p><p>*ಮಾಹೆ ಶ್ರೇಣಿಯ ಮೊದಲ ಜಲಾಂತರ್ಗಾಮಿ ನಿಗ್ರಹ ನೌಕೆ </p><p>* ನೌಕೆಗೆ ಮಲಬಾರಿನ ಐತಿಹಾಸಿಕ ಕರಾವಳಿ ನಗರ ‘ಮಾಹೆ’ಯ ಹೆಸರನ್ನು ಇಡಲಾಗಿದೆ </p><p>*ನೌಕೆಯ ಲಾಂಛನದಲ್ಲಿ ಕಳರಿಪಯಟ್ಟು ಯುದ್ಧ ಕಲೆಯಲ್ಲಿ ಬಳಸುವ ಕತ್ತಿ (ಉರುಮಿ) ಚಿಹ್ನೆ ಬಳಕೆ. ಚುರುಕುತನ ನಿಖರತೆ ಕರಾರುವಕ್ಕಾದ ಗುರಿಯ ಸಂಕೇತವಾಗಿ ಬಳಕೆ </p> .Indian Navy: ಕ್ಷಿಪಣಿ ಧ್ವಂಸಕ INS ಸೂರತ್ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆ.INS Kolkata: 35 ಸೊಮಾಲಿಯಾ ಕಡಲ್ಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ನೌಕಾಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>