ತಮ್ಮ ತಂದೆ, ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರ 96ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್, ‘ತಮಿಳುನಾಡಿನ ಮೇಲೆ ಮತ್ತೊಮ್ಮೆ ಹಿಂದಿ ಹೇರುವುದಿಲ್ಲ ಎಂದುಕೇಂದ್ರ ಸರ್ಕಾರ ಸ್ಪಷ್ಟ ಭರವಸೆ ಕೊಡಬೇಕು. ನನ್ನ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದರೆ 1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಗಳ ಮಾದರಿಯಲ್ಲಿ ತಮಿಳುನಾಡಿನಲ್ಲಿ ಹೋರಾಟಗಳು ಆರಂಭವಾಗಲಿವೆ’ ಎಂದು ಎಚ್ಚರಿಸಿದರು.