<p><strong>ಚೆನ್ನೈ</strong>: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಸೋಮವಾರ ಕಚ್ಚತೀವು ದ್ವೀಪ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ದ್ವೀಪಕ್ಕೆ ಕಾಲಿಟ್ಟ ಲಂಕಾದ ಮೊದಲ ಅಧ್ಯಕ್ಷ ಇವರಾಗಿದ್ದು, ಅನುರಾ ಅವರ ಈ ನಡೆಯು ಭಾರತದ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಗಳಿದೆ.</p>.<p>1974ರಲ್ಲಿ ಭಾರತವು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎನ್ನಲಾಗುವ ಕಚ್ಚತೀವು ದ್ವೀಪಕ್ಕೆ ಅನುರಾ ದಿಢೀರ್ ಭೇಟಿ ನೀಡಿದ್ದಾರೆ. ಕಚ್ಚತೀವು ದ್ವೀಪವನ್ನು ಮರಳಿ ಪಡೆಯಬೇಕು ಎಂದು ತಮಿಳುನಾಡು ಸರ್ಕಾರ, ಮೀನುಗಾರರು, ರಾಜಕೀಯ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಿರುವಂತೆಯೇ ಲಂಕಾ ಅಧ್ಯಕ್ಷರ ಈ ನಡೆ ಮಹತ್ವ ಪಡೆದಿದೆ. </p>.<p>ದ್ವೀಪಕ್ಕೆ ಭೇಟಿ ನೀಡುವ ಮುನ್ನ, ಶ್ರೀಲಂಕಾದ ಉತ್ತರ ಭಾಗದಲ್ಲಿರುವ ತಮಿಳು ಜನರನ್ನು ಕುರಿತು ಮಾತನಾಡಿದ ಅನುರಾ, ‘ಕಚ್ಚತೀವು ನಮ್ಮ ನೆಲ. ಇದು ಶ್ರೀಲಂಕಾ ಜನರಿಗೆ ಸೇರಿದ್ದು. ಈ ನೆಲವನ್ನು ಯಾರೂ ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದೂ ಪ್ರತಿಪಾದಿಸಿದ್ದಾರೆ. </p>.<p>ಸೇನಾ ಪಡೆ ಸಿಬ್ಬಂದಿಯ ಜತೆಗೆ ಕಚ್ಚತೀವು ದ್ವೀಪಕ್ಕೆ ತೆರಳಿ, ಅಲ್ಲಿರುವ ಸಂತ ಆ್ಯಂಟನಿ ಚರ್ಚ್ಗೂ ಅವರು ಭೇಟಿ ನೀಡಿದ್ದಾರೆ. </p>.<p><strong>ತಪ್ಪು ಕಲ್ಪನೆ: </strong>ಕಚ್ಚತೀವುಗೆ ಅನುರಾ ಅವರ ಭೇಟಿ ಕುರಿತಂತೆ ರಾಜತಾಂತ್ರಿಕ ವ್ಯವಹಾರಗಳ ತಜ್ಞರಾದ ಎನ್. ಸತ್ಯಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕಚ್ಚತೀವು ಭೇಟಿ ಮೂಲಕ ಲಂಕಾದ ತಮಿಳರು, ಮೀನುಗಾರರನ್ನು ಓಲೈಸಬಹುದು ಎಂದುಕೊಂಡರೆ ಅದು ಅನುರಾ ಅವರ ತಪ್ಪು ಕಲ್ಪನೆ ಆಗುತ್ತದೆ’ ಎಂದು ಹೇಳಿದ್ದಾರೆ. </p>.<div><blockquote>ಮೀನುಗಾರರ ಭದ್ರತೆ ಲೆಕ್ಕಿಸದೆ ಭಾರತವು ಕಚ್ಚತೀವು ವಿಚಾರದಲ್ಲಿ ಮೌನವಹಿಸಿದೆ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಲೇಬೇಕು. </blockquote><span class="attribution"> ಎನ್.ಜೆ.ಬೋಸ್ ತಮಿಳುನಾಡು ಮೀನುಗಾರರ ಕಲ್ಯಾಣ ಸಂಘದ ಕಾರ್ಯದರ್ಶಿ </span></div>. <p><strong>ತಮಿಳುನಾಡು ಮೀನುಗಾರರಿಗೆ ಆತಂಕ</strong></p><p> ಅನುರಾ ಅವರ ಕಚ್ಚತೀವು ಭೇಟಿಯು ತಮಿಳುನಾಡಿನ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ. ರಾಮನಾಥಪುರಂ ಪುದಕೊಟ್ಟೈ ತಾಂಜಾವೂರ್ ಹಾಗೂ ನಾಗಪತ್ತಿನಂ ಜಿಲ್ಲೆಗಳಲ್ಲಿನ ಮೀನುಗಾರರ ಒಕ್ಕೂಟದ ಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ‘ಲಂಕಾ ಅಧ್ಯಕ್ಷರು ಕಚ್ಚತೀವುಗೆ ಭೇಟಿ ನೀಡಿದ್ದನ್ನೇ ಅಸ್ತ್ರವಾಗಿಸಿಕೊಂಡು ಲಂಕಾದ ನೌಕಾಪಡೆಗಳು ಕಚ್ಚತೀವು ಬಳಿ ಮೀನುಗಾರಿಕೆ ಮಾಡುವ ಭಾರತೀಯ ಮೀನುಗಾರರ ಮೇಲೆ ದಾಳಿ ಮಾಡಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲಂಕಾ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಸೋಮವಾರ ಕಚ್ಚತೀವು ದ್ವೀಪ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ದ್ವೀಪಕ್ಕೆ ಕಾಲಿಟ್ಟ ಲಂಕಾದ ಮೊದಲ ಅಧ್ಯಕ್ಷ ಇವರಾಗಿದ್ದು, ಅನುರಾ ಅವರ ಈ ನಡೆಯು ಭಾರತದ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಗಳಿದೆ.</p>.<p>1974ರಲ್ಲಿ ಭಾರತವು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎನ್ನಲಾಗುವ ಕಚ್ಚತೀವು ದ್ವೀಪಕ್ಕೆ ಅನುರಾ ದಿಢೀರ್ ಭೇಟಿ ನೀಡಿದ್ದಾರೆ. ಕಚ್ಚತೀವು ದ್ವೀಪವನ್ನು ಮರಳಿ ಪಡೆಯಬೇಕು ಎಂದು ತಮಿಳುನಾಡು ಸರ್ಕಾರ, ಮೀನುಗಾರರು, ರಾಜಕೀಯ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಿರುವಂತೆಯೇ ಲಂಕಾ ಅಧ್ಯಕ್ಷರ ಈ ನಡೆ ಮಹತ್ವ ಪಡೆದಿದೆ. </p>.<p>ದ್ವೀಪಕ್ಕೆ ಭೇಟಿ ನೀಡುವ ಮುನ್ನ, ಶ್ರೀಲಂಕಾದ ಉತ್ತರ ಭಾಗದಲ್ಲಿರುವ ತಮಿಳು ಜನರನ್ನು ಕುರಿತು ಮಾತನಾಡಿದ ಅನುರಾ, ‘ಕಚ್ಚತೀವು ನಮ್ಮ ನೆಲ. ಇದು ಶ್ರೀಲಂಕಾ ಜನರಿಗೆ ಸೇರಿದ್ದು. ಈ ನೆಲವನ್ನು ಯಾರೂ ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದೂ ಪ್ರತಿಪಾದಿಸಿದ್ದಾರೆ. </p>.<p>ಸೇನಾ ಪಡೆ ಸಿಬ್ಬಂದಿಯ ಜತೆಗೆ ಕಚ್ಚತೀವು ದ್ವೀಪಕ್ಕೆ ತೆರಳಿ, ಅಲ್ಲಿರುವ ಸಂತ ಆ್ಯಂಟನಿ ಚರ್ಚ್ಗೂ ಅವರು ಭೇಟಿ ನೀಡಿದ್ದಾರೆ. </p>.<p><strong>ತಪ್ಪು ಕಲ್ಪನೆ: </strong>ಕಚ್ಚತೀವುಗೆ ಅನುರಾ ಅವರ ಭೇಟಿ ಕುರಿತಂತೆ ರಾಜತಾಂತ್ರಿಕ ವ್ಯವಹಾರಗಳ ತಜ್ಞರಾದ ಎನ್. ಸತ್ಯಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕಚ್ಚತೀವು ಭೇಟಿ ಮೂಲಕ ಲಂಕಾದ ತಮಿಳರು, ಮೀನುಗಾರರನ್ನು ಓಲೈಸಬಹುದು ಎಂದುಕೊಂಡರೆ ಅದು ಅನುರಾ ಅವರ ತಪ್ಪು ಕಲ್ಪನೆ ಆಗುತ್ತದೆ’ ಎಂದು ಹೇಳಿದ್ದಾರೆ. </p>.<div><blockquote>ಮೀನುಗಾರರ ಭದ್ರತೆ ಲೆಕ್ಕಿಸದೆ ಭಾರತವು ಕಚ್ಚತೀವು ವಿಚಾರದಲ್ಲಿ ಮೌನವಹಿಸಿದೆ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಲೇಬೇಕು. </blockquote><span class="attribution"> ಎನ್.ಜೆ.ಬೋಸ್ ತಮಿಳುನಾಡು ಮೀನುಗಾರರ ಕಲ್ಯಾಣ ಸಂಘದ ಕಾರ್ಯದರ್ಶಿ </span></div>. <p><strong>ತಮಿಳುನಾಡು ಮೀನುಗಾರರಿಗೆ ಆತಂಕ</strong></p><p> ಅನುರಾ ಅವರ ಕಚ್ಚತೀವು ಭೇಟಿಯು ತಮಿಳುನಾಡಿನ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ. ರಾಮನಾಥಪುರಂ ಪುದಕೊಟ್ಟೈ ತಾಂಜಾವೂರ್ ಹಾಗೂ ನಾಗಪತ್ತಿನಂ ಜಿಲ್ಲೆಗಳಲ್ಲಿನ ಮೀನುಗಾರರ ಒಕ್ಕೂಟದ ಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ‘ಲಂಕಾ ಅಧ್ಯಕ್ಷರು ಕಚ್ಚತೀವುಗೆ ಭೇಟಿ ನೀಡಿದ್ದನ್ನೇ ಅಸ್ತ್ರವಾಗಿಸಿಕೊಂಡು ಲಂಕಾದ ನೌಕಾಪಡೆಗಳು ಕಚ್ಚತೀವು ಬಳಿ ಮೀನುಗಾರಿಕೆ ಮಾಡುವ ಭಾರತೀಯ ಮೀನುಗಾರರ ಮೇಲೆ ದಾಳಿ ಮಾಡಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲಂಕಾ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>