<p><strong>ಮುಂಬೈ:</strong> ಮಹಾರಾಷ್ಟ್ರದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚುವರಿ ಕೈದಿಗಳಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.</p><p>ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಮುಂಬೈನ ಕೇಂದ್ರ ಕಾರಾಗೃಹದ ಸಾಮರ್ಥ್ಯ 999 ಆಗಿದ್ದರೂ ಮೇ ಅಂತ್ಯದ ವೇಳೆಗೆ ಅಲ್ಲಿ 3,268 ಕೈದಿಗಳಿದ್ದರು. ಇದು ಸಾಮರ್ಥ್ಯದ ಮೂರು ಪಟ್ಟು ಹೆಚ್ಚು ಎಂದು ಹೇಳಿದರು.</p>.ಮಹಾರಾಷ್ಟ್ರ: ₹6.94 ಕೋಟಿ ಮೌಲ್ಯದ ಕಾಮಗಾರಿಗೆ ನಕಲಿ ಜಿ.ಆರ್.ಮಹಾರಾಷ್ಟ್ರ: ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ದೋಣಿ ಪತ್ತೆ.<p>ರಾಜ್ಯದ ವಿವಿಧ ಕಡೆಗಳಲ್ಲಿ 60 ಜೈಲುಗಳಿದ್ದು ಅಲ್ಲಿ 39,527 ಕೈದಿಗಳಿದ್ದಾರೆ. ಆದರೆ ಈ ಜೈಲುಗಳು 27,184 ಜನರಿರುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆ 12,343 ಹೆಚ್ಚುವರಿ ಕೈದಿಗಳು ವಿವಿಧ ಜೈಲುಗಳಲ್ಲಿ ಇದ್ದಾರೆ ಎಂದು ಹೇಳಿದರು.</p><p>ಹೊಸ ಬಂಧಿಖಾನೆಗಳನ್ನು ನಿರ್ಮಿಸುವ ಮೂಲಕ ಜೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದ ಫಡಣವೀಸ್, ಸದ್ಯ ಇರುವ ಜೈಲುಗಳಿಗೆ ಹೊಸ ಬ್ಯಾರಕ್ಗಳನ್ನು ನಿರ್ಮಿಸುವ ಮೂಲಕ ಕೈದಿಗಳಿಗೆ ಸ್ಥಳಾವಕಾಶ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.</p><p>'ಬಡ ಕೈದಿಗಳ' ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಕೈದಿಗಳಿಗೆ ಜಾಮೀನು ಅಥವಾ ದಂಡ ಪಾವತಿಸಲು ಹಣಕಾಸು ಸಹಾಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಎನ್ಜಿಒಗಳು ಸಹಯೋಗದಲ್ಲಿ ಕೈದಿಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.</p><p>ರಾಜ್ಯದಲ್ಲಿರುವ 39,527 ಕೈದಿಗಳ ಪೈಕಿ 6003 ಜನ ಅನಕ್ಷರಸ್ಥರಾಗಿದ್ದಾರೆ. ಇವರಲ್ಲಿ 5,067 ಮಂದಿ ವಿಚಾರಣಾಧೀನ ಕೈದಿಗಳು ಎಂದು ಫಡಣವೀಸ್ ಹೇಳಿದರು.</p><p>ರಾಜ್ಯ ಸರ್ಕಾರ ಮತ್ತು ಎನ್ಜಿಒಗಳು 18-30 ವರ್ಷ ವಯಸ್ಸಿನವರಿಗೆ ಅಗತ್ಯ ಶಿಕ್ಷಣ ಸೇವೆ ಒದಗಿಸುತ್ತಿವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.</p>.ತೃತೀಯ ಭಾಷೆಯಾಗಿ ಹಿಂದಿ ‘ಕಡ್ಡಾಯ’ವಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ .ಇಂದ್ರಾಯಣಿ ಸೇತುವೆ ಅಪಾಯಕಾರಿ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು: ಸಿಎಂ ಫಡಣವೀಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚುವರಿ ಕೈದಿಗಳಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.</p><p>ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಮುಂಬೈನ ಕೇಂದ್ರ ಕಾರಾಗೃಹದ ಸಾಮರ್ಥ್ಯ 999 ಆಗಿದ್ದರೂ ಮೇ ಅಂತ್ಯದ ವೇಳೆಗೆ ಅಲ್ಲಿ 3,268 ಕೈದಿಗಳಿದ್ದರು. ಇದು ಸಾಮರ್ಥ್ಯದ ಮೂರು ಪಟ್ಟು ಹೆಚ್ಚು ಎಂದು ಹೇಳಿದರು.</p>.ಮಹಾರಾಷ್ಟ್ರ: ₹6.94 ಕೋಟಿ ಮೌಲ್ಯದ ಕಾಮಗಾರಿಗೆ ನಕಲಿ ಜಿ.ಆರ್.ಮಹಾರಾಷ್ಟ್ರ: ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ದೋಣಿ ಪತ್ತೆ.<p>ರಾಜ್ಯದ ವಿವಿಧ ಕಡೆಗಳಲ್ಲಿ 60 ಜೈಲುಗಳಿದ್ದು ಅಲ್ಲಿ 39,527 ಕೈದಿಗಳಿದ್ದಾರೆ. ಆದರೆ ಈ ಜೈಲುಗಳು 27,184 ಜನರಿರುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆ 12,343 ಹೆಚ್ಚುವರಿ ಕೈದಿಗಳು ವಿವಿಧ ಜೈಲುಗಳಲ್ಲಿ ಇದ್ದಾರೆ ಎಂದು ಹೇಳಿದರು.</p><p>ಹೊಸ ಬಂಧಿಖಾನೆಗಳನ್ನು ನಿರ್ಮಿಸುವ ಮೂಲಕ ಜೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದ ಫಡಣವೀಸ್, ಸದ್ಯ ಇರುವ ಜೈಲುಗಳಿಗೆ ಹೊಸ ಬ್ಯಾರಕ್ಗಳನ್ನು ನಿರ್ಮಿಸುವ ಮೂಲಕ ಕೈದಿಗಳಿಗೆ ಸ್ಥಳಾವಕಾಶ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.</p><p>'ಬಡ ಕೈದಿಗಳ' ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಕೈದಿಗಳಿಗೆ ಜಾಮೀನು ಅಥವಾ ದಂಡ ಪಾವತಿಸಲು ಹಣಕಾಸು ಸಹಾಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಎನ್ಜಿಒಗಳು ಸಹಯೋಗದಲ್ಲಿ ಕೈದಿಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.</p><p>ರಾಜ್ಯದಲ್ಲಿರುವ 39,527 ಕೈದಿಗಳ ಪೈಕಿ 6003 ಜನ ಅನಕ್ಷರಸ್ಥರಾಗಿದ್ದಾರೆ. ಇವರಲ್ಲಿ 5,067 ಮಂದಿ ವಿಚಾರಣಾಧೀನ ಕೈದಿಗಳು ಎಂದು ಫಡಣವೀಸ್ ಹೇಳಿದರು.</p><p>ರಾಜ್ಯ ಸರ್ಕಾರ ಮತ್ತು ಎನ್ಜಿಒಗಳು 18-30 ವರ್ಷ ವಯಸ್ಸಿನವರಿಗೆ ಅಗತ್ಯ ಶಿಕ್ಷಣ ಸೇವೆ ಒದಗಿಸುತ್ತಿವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.</p>.ತೃತೀಯ ಭಾಷೆಯಾಗಿ ಹಿಂದಿ ‘ಕಡ್ಡಾಯ’ವಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ .ಇಂದ್ರಾಯಣಿ ಸೇತುವೆ ಅಪಾಯಕಾರಿ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು: ಸಿಎಂ ಫಡಣವೀಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>