<p><strong>ಸಂಭಲ್/ಯುಪಿ:</strong> ಕೋಮು ಸೌಹಾರ್ದ ಕಾಪಾಡಲು ಮತ್ತು ಭದ್ರತೆ ದೃಷ್ಟಿಯಿಂದ ಚಿಕ್ಕ ಮಕ್ಕಳು ಮೊಹರಂ ಮೆರವಣಿಗೆಯಲ್ಲಿ ‘ತಜಿಯ’ ಮತ್ತು ‘ಆಲಂ’ ಪ್ರತಿಕೃತಿ ಹಿಡಿದು ಸಾಗುವುದನ್ನು ಸಂಭಲ್ ಪೊಲೀಸರು ನಿಷೇಧಿಸಿದ್ದಾರೆ. </p>.<p>ಮೊಹರಂ ಮೆರವಣಿಗೆ ಅಂಗವಾಗಿ ಬುಧವಾರ ಇಲ್ಲಿ ನಡೆದ ಸಮುದಾಯ ಪ್ರತಿನಿಧಿಗಳ ಸಭೆಯಲ್ಲಿ ಸಂಭಲ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ಕುಮಾರ್ ಶ್ರೀವಾಸ್ತವ ಈ ಸೂಚನೆ ನೀಡಿದರು. ‘ಮಕ್ಕಳು ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.</p>.<p>‘ಮೆರವಣಿಗೆಯಲ್ಲಿ ಧಾರ್ಮಿಕ ಪ್ರತಿಕೃತಿಗಳು ವಿದ್ಯುತ್ ತಂತಿಗೆ ತಾಗಿ ಈ ಹಿಂದೆ ಅವಘಡ ಸಂಭವಿಸಿದ ಹಲವು ಉದಾಹರಣೆಗಳಿವೆ. ಹಾಗಾಗಿ ಮಕ್ಕಳಿಗೆ ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ. ಅವರೂ ಮೆರಣಿಗೆಯಲ್ಲಿ ಭಾಗವಹಿಸಬಹುದು. ತಜಿಯ ಮತ್ತು ಆಲಂ ಹಿಡಿಯಲು ವಯಸ್ಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಈ ಪ್ರತಿಕೃತಿಗಳ ಎತ್ತರವು 10 ಅಡಿ ಮೀರುವಂತಿಲ್ಲ’ ಎಂದು ಅವರು ಹೇಳಿದರು. </p>.<p>ಕಳೆದ ವರ್ಷ ಸಂಭಲ್ನ ಮಸೀದಿಯೊಂದರ ಸರ್ವೆ ಕಾರ್ಯಕ್ಕೆ ಮುಂದಾದಾಗ ಗಲಭೆ ನಡೆದು ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಾಗಾಗಿ ಈ ಬಾರಿ ಮೊಹರಂ ಮೆರವಣಿಗೆ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭಲ್/ಯುಪಿ:</strong> ಕೋಮು ಸೌಹಾರ್ದ ಕಾಪಾಡಲು ಮತ್ತು ಭದ್ರತೆ ದೃಷ್ಟಿಯಿಂದ ಚಿಕ್ಕ ಮಕ್ಕಳು ಮೊಹರಂ ಮೆರವಣಿಗೆಯಲ್ಲಿ ‘ತಜಿಯ’ ಮತ್ತು ‘ಆಲಂ’ ಪ್ರತಿಕೃತಿ ಹಿಡಿದು ಸಾಗುವುದನ್ನು ಸಂಭಲ್ ಪೊಲೀಸರು ನಿಷೇಧಿಸಿದ್ದಾರೆ. </p>.<p>ಮೊಹರಂ ಮೆರವಣಿಗೆ ಅಂಗವಾಗಿ ಬುಧವಾರ ಇಲ್ಲಿ ನಡೆದ ಸಮುದಾಯ ಪ್ರತಿನಿಧಿಗಳ ಸಭೆಯಲ್ಲಿ ಸಂಭಲ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ಕುಮಾರ್ ಶ್ರೀವಾಸ್ತವ ಈ ಸೂಚನೆ ನೀಡಿದರು. ‘ಮಕ್ಕಳು ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.</p>.<p>‘ಮೆರವಣಿಗೆಯಲ್ಲಿ ಧಾರ್ಮಿಕ ಪ್ರತಿಕೃತಿಗಳು ವಿದ್ಯುತ್ ತಂತಿಗೆ ತಾಗಿ ಈ ಹಿಂದೆ ಅವಘಡ ಸಂಭವಿಸಿದ ಹಲವು ಉದಾಹರಣೆಗಳಿವೆ. ಹಾಗಾಗಿ ಮಕ್ಕಳಿಗೆ ‘ತಜಿಯ’ ಮತ್ತು ‘ಆಲಂ’ ಹಿಡಿದು ಸಾಗುವುದಕ್ಕೆ ಅವಕಾಶ ಇಲ್ಲ. ಅವರೂ ಮೆರಣಿಗೆಯಲ್ಲಿ ಭಾಗವಹಿಸಬಹುದು. ತಜಿಯ ಮತ್ತು ಆಲಂ ಹಿಡಿಯಲು ವಯಸ್ಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಈ ಪ್ರತಿಕೃತಿಗಳ ಎತ್ತರವು 10 ಅಡಿ ಮೀರುವಂತಿಲ್ಲ’ ಎಂದು ಅವರು ಹೇಳಿದರು. </p>.<p>ಕಳೆದ ವರ್ಷ ಸಂಭಲ್ನ ಮಸೀದಿಯೊಂದರ ಸರ್ವೆ ಕಾರ್ಯಕ್ಕೆ ಮುಂದಾದಾಗ ಗಲಭೆ ನಡೆದು ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಾಗಾಗಿ ಈ ಬಾರಿ ಮೊಹರಂ ಮೆರವಣಿಗೆ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>