ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗಂಗಾ ನದಿ ಸ್ವಚ್ಛತೆ ಗ್ಯಾರಂಟಿ ಮರೆತ ಪ್ರಧಾನಿ ಮೋದಿ: ಮಲ್ಲಿಕಾರ್ಜುನ ಖರ್ಗೆ

Published : 6 ಮಾರ್ಚ್ 2025, 11:01 IST
Last Updated : 6 ಮಾರ್ಚ್ 2025, 11:01 IST
ಫಾಲೋ ಮಾಡಿ
Comments
‘ನಮಾಮಿ ಗಂಗೆ’ ಯೋಜನೆ ವಿಫಲ:
11 ವರ್ಷದ ಹಿಂದೆ ‘ನಮಾಮಿ ಗಂಗೆ’ ಯೋಜನೆ ಆರಂಭಿಸಿ ಮಾರ್ಚ್‌ 2026ರ ವೇಳೆಗೆ ₹ 42500 ಕೋಟಿ ಬಳಕೆ ಮಾಡಲಾಗುವುದು ಎಂದು ಮೋದಿ ಹೇಳಿದ್ದರು. ಆದರೆ ಸದನದಲ್ಲೇ ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರದಲ್ಲಿ 2024ರ ಡಿಸೆಂಬರ್‌ವರೆಗೆ ಕೇವಲ ₹ 19271 ಕೋಟಿ ಮಾತ್ರ ಬಳಸಲಾಗಿದೆ ಎಂದು ತಿಳಿಸಲಾಗಿದೆ. ‘ನಮಾಮಿ ಗಂಗೆ’ ನಿಧಿಯಲ್ಲಿ ಶೇ 55ರಷ್ಟು ಹಣವನ್ನೂ ಖರ್ಚು ಮಾಡಿಲ್ಲ. ಗಂಗಾ ಮಾತೆ ಬಗ್ಗೆ ಇಷ್ಟೊಂದು ತಾರತಮ್ಯ ಏಕೆ ಎಂದು ಖರ್ಗೆ ಪ್ರಶ್ನಿಸಿದರು.
ಮಲಿನಗೊಳ್ಳುತ್ತಿರುವ ಗಂಗೆ:
ಉತ್ತರ ಪ್ರದೇಶವೊಂದೇ 3513 ಎಂಎಲ್‌ಡಿ ಕೊಳಚೆ ನೀರನ್ನು ಗಂಗಾ ನದಿಗೆ ಬಿಡುತ್ತಿದೆ. ಶೇ 97ರಷ್ಟು ಎಸ್‌ಟಿಪಿಗಳು ( ತ್ಯಾಜ್ಯ ಸಂಸ್ಕರಣಾ ಘಟಕ) ನಿಯಮ ಪಾಲಿಸುತ್ತಿಲ್ಲ.  2024ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ವಾರಾಣಸಿಯಲ್ಲಿ ಗಂಗಾ ನದಿಯ ಸ್ವಚ್ಛತೆ ಕಾಪಾಡದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸ್ನಾನ ಮಾಡಲೂ ಗಂಗಾ ನದಿ ನೀರು ಯೋಗ್ಯವಲ್ಲ ಎಂದಿತ್ತು. 2025ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಿಡುಗಡೆ ಮಾಡಿದ ವರದಿಯಲ್ಲೇ ಗಂಗಾ ನದಿ ನೀರಿನಲ್ಲಿ ಫೀಕಲ್ ಕಾಲಿಫಾರ್ಮಾ ಪ್ರಮಾಣ ಸುರಕ್ಷತಾ ಮಟ್ಟಕ್ಕಿಂತ ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.  ನದಿಗೆ ಸೇರುತ್ತಿರುವ ಘನತ್ಯಾಜ್ಯ ಹೆಚ್ಚುತ್ತಿದೆ. ಇದರಿಂದ ನದಿ ನೀರಿನ ಪಾರದರ್ಶಕತೆಯೂ ಶೇ 5ಕ್ಕೆ ಕುಸಿದಿದೆ. ಗಂಗಾ ನದಿಯ ಪ್ಲಾಸ್ಟಿಕ್‌ ಮಾಲಿನ್ಯ ಶೇ 25ರಷ್ಟು ಹೆಚ್ಚಿದೆ.  ಗಂಗಾ ಗ್ರಾಮದ ಹೆಸರಲ್ಲಿ ಮೋದಿ ಸರ್ಕಾರ ಶೌಚಾಲಯಗಳನ್ನು ಮಾತ್ರ ನಿರ್ಮಿಸಿತು. ಐದು ರಾಜ್ಯಗಳಲ್ಲಿ ಗಂಗಾ ನದಿಯ ಆಜುಬಾಜು ₹2294 ಕೋಟಿ ವೆಚ್ಚದಲ್ಲಿ 134106 ಹೆಕ್ಟೇರ್‌ ಅರಣ್ಯೀಕರಣ ಯೋಜನೆ ರೂಪಿಸಿದ್ದರೂ ಶೇ 78ರಷ್ಟು ಅರಣ್ಯೀಕರಣ ಆಗಿಲ್ಲ. ‘ಗಂಗೆ ಜೀವ ನದಿ. ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಆದರೆ ಮೋದಿ ಸರ್ಕಾರ ಸ್ವಚ್ಛತೆಯ ಹೆಸರಿನಲ್ಲಿ ಗಂಗಾ ಮಾತೆಯನ್ನು ವಂಚಿಸುತ್ತಿದೆ’ ಎಂದು ಖರ್ಗೆ ಟೀಕಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT